ಬಸವತತ್ವ ಚಿಂತಕಿ – ಡಿ.ಶಬ್ರಿನಾ ಮಹಮದ್ ಅಲಿ.
ಚಳ್ಳಕೆರೆ ಮಾ.17

ಇವರು ಬೆಂಗಳೂರಿನಿಂದ ಬೀದರ್ ವರೆಗೂ ವಿವಿಧ ಜಿಲ್ಲೆಗಳಲ್ಲಿ ಬಸವತತ್ವ ಕುರಿತು ಅನುಭಾವ ನೀಡಿದ್ದಕ್ಕಾಗಿ & ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಘಟಕ ಚಳ್ಳಕೆರೆ ಇವರು, ದಿನಾಂಕ ೧೬/೦೩/೩೦೩೬ ರಂದು ಬಸವೇಶ್ವರ ಶಾಲಾ ಆವರಣದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಮಹಿಳಾ ಸಾಧಕಿ’ ಎಂದು ಗುರುತಿಸಿ ಸನ್ಮಾಸಿದರು.


ಈ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ಘಟಕದ ಅಧ್ಯಕ್ಷರಾದ ಕಿರಣ್ ಶಂಕರ್, ಉಪಾಧ್ಯಕ್ಷರಾದ ಭಾಗ್ಯ, ಶಾಂತಾ, ಲೇಖಕಿ ಗೀತಾ ನಾಗರಾಜ್ ಮತ್ತಿರರು ಉಪಸ್ಥಿತರಿದ್ದರು.
