ವಾಲ್ಮೀಕಿ ಸಮುದಾಯ ಅಭಿವೃದ್ಧಿಗೆ ವಾಲ್ಮೀಕಿ ಭವನಗಳು ವೇದಿಕೆಯಾಗಲಿ – ಶಾಸಕ ಡಾ, ಶ್ರೀ ನಿವಾಸ್.ಎನ್.ಟಿ
ದೇವರಹಟ್ಟಿ ಜು.30

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಗುಡೇಕೋಟೆ ಹಾಗೂ ದೇವರಹಟ್ಟಿ ಗ್ರಾಮಗಳಲ್ಲಿ 2022-23 ನೇ ಸಾಲಿನ ಪರಿಶಿಷ್ಟ ಕಲ್ಯಾಣ ಇಲಾಖೆಯ ಯೋಜನೆ ಅಡಿಯಲ್ಲಿ “ವಾಲ್ಮೀಕಿ ಭವನ” ನಿರ್ಮಾದ ಭೂಮಿ ಪೂಜೆಯನ್ನು ದಿನಾಂಕ 30-07-24 ರಂದು ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ನೆರವೇರಿಸಿದ ಬಳಿಕ ಮಾತನಾಡಿದರು. ವಾಲ್ಮೀಕಿ ಸಮುದಾಯದ ಬಹು ದಿನಗಳ ಬೇಡಿಕೆ ಮತ್ತು ಅವರ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಈ ದಿನ ವಾಲ್ಮೀಕಿ ಭವನಗಳ ಭೂಮಿ ಪೂಜೆಗೆ ಅತ್ಯಂತ ಸಂತಸ ದಿಂದ ನಾವು ಎಲ್ಲರೂ ಸಾಕ್ಷಿಯಾಗಿದ್ದೇವೆ.

ಮುಂದಿನ ದಿನಗಳಲ್ಲಿ ಈ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಾದ ಶ್ರೀ ವಾಲ್ಮೀಕಿ ಅವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿ ಕೊಂಡು ಮುನ್ನಡೆಯಬೇಕು. ಆಧುನಿಕತೆಯ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯ ಶಿಕ್ಷಣ ಮೂಲಕ ಆರ್ಥಿಕ ಮತ್ತು ಸಾಮಾಜಿಕವಾಗಿ ಬದಲಾವಣೆ ಹೊಂದಲು ಈ ಭವನಗಳು ವೇದಿಕೆಗೆ ಸಾಕ್ಷಿಯಾಗಲಿ. ಎಂದು ಶುಭ ಹಾರೈಸುತ್ತೇನೆ ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಗ್ರಾ. ಪಂ.ಅಧ್ಯಕ್ಷರು – ಸದಸ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್ ಕೆ. ಹೊಸಹಳ್ಳಿ.