ವಿಕಲ ಚೇತನರ ಆರೈಕೆದಾರರ ಭತ್ಯೆ ಯೋಜನೆ – ಸ್ವಾಗತರ್ಹ ಕಾರ್ಯಕ್ರಮ ಎಂ.ನರೇಂದ್ರ.

ತರೀಕೆರೆ ಡಿ.04

ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯದಾದ್ಯಂತ ವಿಕಲ ಚೇತನರನ್ನು ಆರೈಕೆ ಮಾಡುವವರಿಗೆ ಮಾಸಿಕ ಭತ್ಯೆ ನೀಡುತ್ತಿರುವುದು ಸ್ವಾಗತಾರ್ಹ ಕಾರ್ಯಕ್ರಮ ಎಂದು ಮಾಜಿ ಪುರಸಭಾ ಅಧ್ಯಕ್ಷ ಎಂ.ನರೇಂದ್ರ ಹರ್ಷ ವ್ಯಕ್ತಪಡಿಸಿ ಇಂಥಹ ಜನಮನ್ನೇ ಕಾರ್ಯಕ್ರಮಗಳು ಶಾಶ್ವತವಾಗಿ ಸಾರ್ವಜನಿಕರಲ್ಲಿ ನೆರೆ ಹೊರಲಿದೆ ಎಂದು ತಿಳಿಸಿದರು. ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ವಿಕಲ ಚೇತನರ ಆರೈಕೆದಾರರ ಭತ್ಯೆ ನೀಡುವ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತರೀಕೆರೆ ಪುರಸಭೆಯಲ್ಲಿ 2012 2013 ನೇ. ಸಾಲಿನಲ್ಲಿ ವಿಕಲ ಚೇತನರನ್ನು ಸಹಾಯಕನಿಗೆ ವಿಕಲ ಚೇತನನ್ನು ಗುರುತಿಸಿ ಅರ್ಜಿ ಸಲ್ಲಿಸಿದರೆ ಅಂತ ಸಹಾಯಕನಿಗೆ ಮಾಸಿಕ 500 ಭತ್ಯೆಯನ್ನು ಎಂ.ನರೇಂದ್ರ ರವರ ಅಧ್ಯಕ್ಷತೆಯಲ್ಲಿ ಪುರಸಭೆಯ ಅಂದಿನ ಆಡಳಿತ ಮಂಡಳಿಯು ಕಾರ್ಯಕ್ರಮವನ್ನು ನಿರ್ಣಯಯನ್ನು ಕೈಗೊಂಡು ಅದೇ ಸಾಲಿನಲ್ಲಿ ಮುಖ್ಯ ಅಧಿಕಾರಿ ಸತ್ಯನಾರಾಯಣ್ ರವರ ಮಾರ್ಗದರ್ಶನದಲ್ಲಿ ಮಾಸಿಕ ಭತ್ಯಯನ್ನು ವಿತರಿಸಲು ಪ್ರಾರಂಭಿಸಲಾಯಿತು ಎಂದು ತಿಳಿಸಿದರು.ಈ ಕಾರ್ಯಕ್ರಮದ ಜೊತೆಯಲ್ಲಿ ಎಸ್ಸಿ/ಎಸ್ಟಿ ಮತ್ತು ಒಬಿಸಿ ವರ್ಗದ ಬಿಪಿಎಲ್ ಕುಟುಂಬ ವರ್ಗದವರ ಬಡ ರೋಗಿಗಳಿಗೆ ಅವರ ಔಷಧಿ ಉಪಚಾರಗಳನ್ನು ಕೊಳ್ಳಲು ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ನೀಡೋದನ್ನು ಪ್ರಾರಂಭಿಸಲಾಗಿತ್ತು ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರ ಇಂತಹ ಜನಮನ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button