ಪುರುಷರಲ್ಲಿಯೂ ಸ್ತ್ರೀ ಸಂವೇದನೆಯ ನೆಲೆಗಳಿವೆ – ಡಾ, ಬಿ.ಎಂ ಗುರುನಾಥ.
ಚಿತ್ರದುರ್ಗ ಮಾ.10

ಪ್ರತಿಯೊಬ್ಬ ಪುರುಷನಲ್ಲಿಯೂ ಮಾತೃತ್ವ ಮತ್ತು ಸ್ತ್ರೀ ಸಂವೇದನೆಯ ನೆಲೆಗಳಿದ್ದು ಮಹಿಳಾ ದಿನಾಚರಣೆಯನ್ನು ಸ್ತ್ರೀ-ಪುರುಷರಿಬ್ಬರೂ ಸೇರಿ ಆಚರಿಸಲ್ಪಡಬೇಕು ಎಂದು ಚಿತ್ರದುರ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ, ಬಿ.ಎಂ.ಗುರುನಾಥ ತಿಳಿಸಿದರು.
ಚಿತ್ರದುರ್ಗದ ಅರವಳಿಕೆ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ, ಮೇಘನಾ ಅವರ ಉದ್ಘಾಟನಾ ನುಡಿಗಳು…
ನಗರದ ರೋಟರಿ ಬಾಲ ಭವನದಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆ ಮತ್ತು ರೋಟರಿ ಕ್ಲಬ್ ಚಿನ್ಮೂಲದ್ರಿ ಇವುಗಳ ಸಂಯುಕ್ತ ಆಶ್ರಯದಲ್ಲಿ “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ” ಯ ಪ್ರಯುಕ್ತ ಆಯೋಜಿಸಿದ್ದ ಶಿವಾನಂದ.ಎನ್ ಬಂಡೇಹಳ್ಳಿಯವರ “ಕಡೆದಷ್ಟು ಕನಸುಗಳು” ಕವನ ಸಂಕಲನ ಮತ್ತು ಬಾಲ ಪ್ರತಿಭೆ ಖುಷಿ ಅರ್ಶ್ ಅವರ “ಪ್ರೂಫ್ ಒವರ್ ಪ್ರಿವಿಲೈಜ್” ಕಥಾ ಸಂಕಲನವನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
ಶಿವಾನಂದ.ಎನ್ ಬಂಡೇಹಳ್ಳಿ ಅವರ “ಕಡೆದಷ್ಟು ಕನಸುಗಳು” ಕವನ ಸಂಕಲನದ ಕುರಿತು ಮಾತನಾಡಿದ ಅವರು ಈ ಕವನ ಸಂಕಲನದಲ್ಲಿ ಒಟ್ಟು ಐವತ್ತೇಳು ಕವನಗಳಿದ್ದು ಪ್ರತಿಯೊಂದು ಕವನವು ಗ್ರಾಮೀಣ ಆಡು ಭಾಷೆಯ ಸೊಗಡಿನಿಂದ ಕೂಡಿದ್ದು ಅತ್ಯಂತ ವಸ್ತು ನಿಷ್ಠತೆಯಿಂದ ಕೊಡಿವೆ.ಕವಿಯ ಕನಸುಗಳು ಆಲೋಚನೆಗಳಾಗಿ ಕವನದ ರೂಪ ಪಡೆದಿದ್ದು ಪ್ರತಿಯೊಂದು ಕವನವು ಆಪ್ತವಾಗಿ ಓದಿಸಿಕೊಂಡು ಹೋಗುತ್ತವೆ ಎಂದರು.
ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ದಯಾವತಿ ಪುತ್ತೂರ್ಕರ್ ಮಾತನಾಡಿದರು.

ಚಿತ್ರದುರ್ಗದ ಅರವಳಿಕೆ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮೇಘನಾ ಜಿ.ಎಚ್. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರವಿ ಕೆ.ಅಂಬೇಕರ್ ಪಾಲ್ಗೊಂಡು ಮಾತನಾಡಿದರು.
ಖ್ಯಾತ ವಕೀಲರಾದ ಬಿ.ಕೆ ರಹಮತ್ ಉಲ್ಲಾ, ಕವಿ ಶಿವಾನಂದ, ರೋಟರಿ ಕ್ಲಬ್ ನ ಅಧ್ಯಕ್ಷರಾದ ದಿಲ್ ಶಾದ್ ಉನ್ನಿಸಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಶಾರದಾ ಬಿ.ಜೈರಾಂ ಮತ್ತು ಸ್ಪೂರ್ತಿ ವಿಕಲ ಚೇತನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ತಿಪ್ಪಮ್ಮ ಅವರನ್ನು ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಹಿಳಾ ದಿನಾಚರಣೆಯ ಅಂಗವಾಗಿ ಭಾರತೀಯ ಸಂಸ್ಕೃತಿಯ ನಾರಿಯರ ಸಂಭ್ರಮ, ಕವಿಗೋಷ್ಠಿ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಡಾ, ಗೌರಮ್ಮ, ಎಚ್.ಸತೀಶ್ ಕುಮಾರ್, ಪಂಡ್ರಹಳ್ಳಿ ಶಿವರುದ್ರಪ್ಪ, ಡಾ, ಬಸವರಾಜ ಹರ್ತಿ, ರಶ್ಮಿ, ಮಮತಾ, ಮೀರಾ ನಾಡಿಗ್, ಡಾ, ಚಾಂದಿನಿ ಖಲೀದ್, ತಿಪ್ಪಮ್ಮ, ನಿರ್ಮಲ, ಉಷಾರಾಣಿ, ಶಶಿಕಲಾ, ಯತೀಶ್ ಎಂ ಸಿದ್ದಾಪುರ, ಕ್ಲಾಸಿಕ್ ಚಂದ್ರಶೇಖರ್, ಪಗಲಬಂಡೆ ನಾಗೇಂದ್ರಪ್ಪ, ಬಿ.ಮುರಳೀಧರ, ಜಯದೇವಮೂರ್ತಿ, ಜಯಪ್ರಕಾಶ್ ಸೇರಿದಂತೆ ಉದಯೋನ್ಮುಖ ಕವಿ ಮನಸ್ಸುಗಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
