ಮಾಜಿ ಸಚಿವರಾದ ಕಳಕಪ್ಪ.ಜಿ ಬಂಡಿ ರವರು ಸಂಘಟನಾ ಪರ್ವ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರೋಣ ನ.16

ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಕಳಕಪ್ಪ ಜಿ, ಬಂಡಿ ರವರು ಸಂಘಟನಾ ಪರ್ವ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಮಯದಲ್ಲಿ ಉತ್ತಮವಾಗಿ ಎಲ್ಲರೂ ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸಬೇಕು ಹಾಗೂ ಎಲ್ಲರೂ ಸಂಘಟನೆಯಿಂದ ಕಾರ್ಯಪ್ರವೃತ್ತ ಗೊಳ್ಳಬೇಕು ಎಂದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಭಾರತೀಯ ಜನತಾ ಪಾರ್ಟಿ ರೋಣ ಮಂಡಲ ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಮುತ್ತಣ್ಣ ಕಡಗದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಲಿಂಗರಾಜ್ ಪಾಟೀಲ್, ಶ್ರೀ ಆರ್ ಕೆ ಚೌವ್ಹಾಣ, ರಾಜ್ಯ ಎಸ್ ಟಿ ಮೋರ್ಚ ಸದಸ್ಯರಾದ ಎಚ್ ಕೆ ಹಟ್ಟಿಮನಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಉಮೇಶ್ ಮಲ್ಲಾಪುರ್, ಪಕ್ಷದ ಮುಖಂಡರಾದ ಅಶೋಕ್ ನವಲಗುಂದ, ಗಜೇಂದ್ರಗಡ ನಗರ ಘಟಕ ಅಧ್ಯಕ್ಷರಾದ ಶ್ರೀ ರಾಜೇಂದ್ರ ಗೋರ್ಪಡೆ, ಸದಸ್ಯತ್ವ ಅಭಿಯಾನದ ಪ್ರಮುಖರಾದ ಬಾಲಾಜಿ ರಾವ್ ಭೋಸ್ಲೆ, ಶರಣಪ್ಪ ಪ್ಯಾಟಿ ಮೋರ್ಚಾದ ಪದಾಧಿಕಾರಿಗಳು ಶಕ್ತಿ ಕೇಂದ್ರದ ಪ್ರಮುಖರು, ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ.ಸಂಕನಗೌಡ್ರ.ರೋಣ