ಟ್ಯಾಂಕರ್ ಮೂಲಕ ನೀರು ಹಾಕುವ ಕಾರ್ಯಕ್ರಮವು, ಜಯ ಕರ್ನಾಟಕ ಸಂಘಟನೆ ಹಾಗೂ ಗ್ರಾಮದ – ಪ್ರಮುಖರ ಸಹಕಾರದಿಂದ ಯಶಸ್ವಿ ಗೊಳಿಸಿದರು.

ಕೋರವಾರ ಜ.31

ಇಂದು 31-01-2025, ರಂದು ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕುವ ಕಾರ್ಯಕ್ರಮವು ಜಯ ಕರ್ನಾಟಕ ಸಂಘಟನೆ ಹಾಗೂ ಗ್ರಾಮದ ಪ್ರಮುಖರ ಸಹಕಾರ, ಸಹಾಯಂದಿಂದ ಈ ಕಾರ್ಯಕ್ರಮವು ಪ್ರಾರಂಭಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಮುಖಂಡರಾದ ಶ್ರೀ ಅಪ್ಪುಗೌಡ ಬಾ,ಪೋಲಿಸ್ ಪಾಟೀಲ, ವಹಿಸಿದರು.

ಹಾಗೂ ನೇತೃತ್ವವನ್ನು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರರಾದ ಚನ್ನಪ್ಪಗೌಡ ಎಸ್, ಬಿರಾದಾರ, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ರಸ್ತೆಯ ಬದಿ ಮತ್ತು ಶಾಲೆಯ ಆವರಣಗಳಲ್ಲಿ ಸಸಿಗಳನ್ನು ನೆಟ್ಟು ಹೋಗಿದ್ದಾರೆ ಇದುವರೆಗೂ ಸಹ ಸಸಿಗಳಿಗೆ ನೀರು ಹಾಕದ ಕಾರಣ ಸಸಿಗಳು ಒಣಗಿ ಹೋಗುತ್ತಿವೆ “ಕಾಡು ಬೆಳಸಿ ನಾಡು ಉಳಿಸಿ” ಎಂದು ಹೇಳುತ್ತಾರೆ ಅದು ಇನ್ನೂವರೆಗೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ ಸರಕಾರದಿಂದ ಲಕ್ಷ ಲಕ್ಷ ಹಣ ಬಂದರು ಅಧಿಕಾರಿಗಳು ನುಂಗಿ ಹಾಕುತ್ತಿದ್ದಾರೆ, ಎಂದು ಹೇಳಿದರು.

ಹಾಗೂ ಸಿದ್ರಾಮಪ್ಪ ಎಸ್, ಅವಟಿ, ತಾಲೂಕಾಧ್ಯಕ್ಷರು, ದೇವರ ಹಿಪ್ಪರಗಿ, “ಹಸಿರು ರೈತರ ಉಸಿರು” ಎಂದು ಹೇಳಿ ಅರಣ್ಯ ಅಧಿಕಾರಿಗಳು ಭ್ರಷ್ಟಾಚಾರ ಮಾಡಿ ಲಕ್ಷ ಲಕ್ಷ ಹಣ ಲೂಟಿ ಹೊಟಿ ಹೊಡೆದು ಯಾವುದೆ ಕಾಮಗಾರಿಗಳಿಲ್ಲದೆ ಮತ್ತು ಕಳಪೆ ಮಟ್ಟದ ಕಾಮಗಾರಿಯನ್ನು ನಿರ್ಮಿಸಿ ಭ್ರಷ್ಟಾಚಾರ ವ್ಯಸಗಿದ್ದಾರೆ ಎಂದು ಖಂಡಿಸಿದರು. ಹಾಗೂ ಮಾಂತೇಶ ಮಠ, ಶ್ರೀ ಕೋರವಾರೇಶ್ವರ ಜನ ಸ್ನೇಹಿ ಸೇವಾ ಸಂಘದ ಉಪಾಧ್ಯಕ್ಷರು, ಅಶೋಕ ಹುಣಸಗಿ, ಶ್ರೀ ಕೋರವಾರೇಶ್ವರ ಟ್ರೇಡರ್ಸ, ಹಾಗೂ ಮಾಂತೇಶ ಕಮತಗಿ, ನಿಯಂತ್ರಣ ಅಧಿಕಾರಿಗಳು, ಕೋರವಾರ,ಶಾಂತಪ್ಪ ಕೆಮಶೆಟ್ಟಿ , ಬಸಲಿಂಗಪ್ಪಗೌಡ ಬಿರಾದಾರ, ಶಿವನಗೌಡ ಬಿರಾದಾರ, ಅನೀಲಗೌಡ ಬಿರಾದಾರ, ಸಂಗನಗೌಡ ಬಿರಾದಾರ, ಸುನೀಲ ಹೂಗಾರ, ಸಂದೀಪ ಬಿರಾದಾರ, ನಜೀರ ಕಕ್ಕಳಮೇಳಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ ದೇವರ.ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button