ರಾಜಕೀಯ ಒತ್ತಡಕ್ಕೆ ಮಣಿಯದೆ – ಕರ್ತವ್ಯ ನಿಷ್ಠೆಗೆ ಬೆಲೆ ನೀಡಿದ ಮೇಲಾಧಿಕಾರಿಗಳು.

ಕೊಟ್ಟೂರು ಡಿಸೆಂಬರ್.12

ತಾಲೂಕಾ ಪಂಚಾಯತಿ ಮೇಲಾಧಿಕಾರಿಗಳು ಯಾವ ರಾಜಕಾರಣಿಗಳಿಗೂ ಒತ್ತಡಕ್ಕೆ ಮಣಿಯದೇ ಈಗಲಾದರೂ ಕರ್ತವ್ಯ ನಿಷ್ಠೆಗೆ ಬೆಲೆ ನೀಡಿ ಅಧಿಕಾರಿಯ ಸ್ಥಾನಕ್ಕೆ ನಿಷ್ಠೆಯಿಂದ  ಮೇಲಾಧಿಕಾರಿಗಳ ವರ್ಗಾವಣೆ ಆದೇಶಕ್ಕೆ ಬೆಲೆ ನೀಡಿ ಲಂಚದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದ ಅಧಿಕಾರಿಗಳಯನ್ನು ಸೋಮವಾರ ದಂದು ಕೊಟ್ಟೂರು ತಾಲೂಕು ಪಂಚಾಯಿತಿ ಕಚೇರಿಯಿಂದ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಎಂದು ತಾಲೂಕು ಪಂಚಾಯಿತಿ ಇ.ಓ ಸಾಹೇಬರು ತಿಳಿಸಿದರು.ರಾಜಕಾರಣಿಗಳಿಂದ  ಅಧಿಕಾರಿಗಳಿಗೆ ಒತ್ತಡ ತಂದರು? ಎಷ್ಟೇ ಒತ್ತಡಗಳ ಬಂದರೂ ಸಾರ್ವಜನಿಕರಿಗೆ ಹಾಗೂ ಕರ್ತವ್ಯಕ್ಕೆ ಬೆಲೆ ನೀಡಿ ವರ್ಗಾವಣೆ ಆಗಿರುವ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಗೊಳಿಸಿದ್ದಾರೆ. ಸಾರ್ವಜನಿಕರ ದೃಷ್ಟಿಯಲ್ಲಿ ಒಂದಿಷ್ಟಾದರೂ ಬೆಲೆ ಉಳಿದಂತಾಯಿತು.ಇನ್ನಾದರೂ ಇಂತಹ ಅಧಿಕಾರಿಗಳು ಬುದ್ಧಿ ಕಲಿತು ರಾಜಕೀಯ ಉಪಯೋಗಿಸದಂತೆ ತಮ್ಮ ತಪ್ಪುಗಳನ್ನು ಅರಿತು ಕೊಂಡು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ತಮ್ಮ ಕರ್ತವ್ಯ ಮಾಡಿದರೆ ಒಳ್ಳೆಯದು ಎಂದು ಸಾರ್ವಜನಿಕರು ಹಾಗೂ ಸಿಪಿಐಎಂಎಲ್ ಪಾರ್ಟಿಯ ಜಿ ಮಲ್ಲಿಕಾರ್ಜುನ್ ಅಭಿಪ್ರಾಯ ತಿಳಿಸಿದರು.

ಕೊಟ್ -1ತಾಲೂಕು ಪಂಚಾಯತ್ ಇ.ಓ ರವಿಕುಮಾರ್ ಸಾಹೇಬರು ಉಲ್ಲೇಖದ ಆದೇಶದಲ್ಲಿ ಶ್ರೀಮತಿ ಕೆ ರೂಪ, ಗ್ರೇಡ್-1 ಕಾರ್ಯದರ್ಶಿ, ನಿಯೋಜನೆ. ತಾಲ್ಲೂಕು ಪಂಚಾಯಿತಿ ಕೊಟ್ಟೂರು ಇವರನ್ನು ಉಲ್ಲೇಖದ ಆದೇಶದಲ್ಲಿ ಆಡಳಿತಾತ್ಮಕ ಹಿತ ದೃಷ್ಟಿಯಿಂದ ನಿಯೋಜನೆಯಿಂದ ಮುಕ್ತಗೊಳಿಸಿ, ಮೂಲ ಗ್ರಾಮ ಪಂಚಾಯಿತಿಯಾದ ಕೆ. ಅಯ್ಯನಹಳ್ಳಿ ಗ್ರಾ.ಪಂ.ಯ ಕಾರ್ಯ ನಿರ್ವಹಣೆಗೆ ನಿಯೋಜಿಸಿ ಕರ್ತವ್ಯದಿಂದ ಬಿಡುಗಡೆ ಗೊಳಿಸಲು ಆದೇಶಿಸಿರುವುದರಿಂದ ಸದರಿ ನೌಕರರನ್ನು ಈ ಕಛೇರಿಯ ಕರ್ತವ್ಯದಿಂದ ದಿ:11.12.2023ರ ಅಪರಾಹ್ನ ಬಿಡುಗಡೆ ಗೊಳಿಸಿ ಮೂಲ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಅದೀನದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿದೆ.ಎಂದು ಪತ್ರಿಕೆಗೆ ತಿಳಿಸಿದರು.

ಕೊಟ್ -2ಶ್ರೀಮತಿ ಕೆ ರೂಪ, ಗ್ರೇಡ್-1 ಕಾರ್ಯದರ್ಶಿ, ಕೆ ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ  ವರ್ಗಾವಣೆ ಆದೇಶ ಹೊರಡಿಸಿದ್ದು ಈಗ ರಿಲೀವ್ ಮಾಡಲಾಗಿದೆ ಈಗ ಡಾಟಾ ಎಂಟ್ರಿ ಆಪರೇಟರ್ ಮೋಹನ್ ಕುಮಾರ್  ಅವರನ್ನು ಕೆಲಸದಿಂದ ವಜಾ ಮಾಡುತ್ತಾರೆಯೇ ಕಾದು ನೋಡಬೇಕು. ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಪಿ ಚಂದ್ರಶೇಖರ್ ಹೇಳಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button