ಇಂದು ಸ್ಥಳೀಯ ರಾಂಪುರದಲ್ಲಿ ಸುಂದರರಾಮಪ್ಪ ದೇವರಿಗೆ – ಭಕ್ತಿ ಸಮರ್ಪಣೆ ಮಾಡಿದ ಶಾಸಕರು.

ರಾಂಪುರ ಜ.19

ಇಂದು ರಾಂಪುರದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಸುಂದರರಾಮಪ್ಪ ದೇವರಿಗೆ ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಪುರಸ್ಕಾರಗಳೊಂದಿಗೆ ಹಣ್ಣು ಕಾಯಿ ಕರ್ಪೂರ ನೈವೇದ್ಯ ಮಾಡಿ ದೇವರಿಗೆ ಭಕ್ತಿ ಸಮರ್ಪಕವಾಗಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಮತದಾರರು ಆರೋಗ್ಯಕರ ವಾಗಿರಲಿ ಎಲ್ಲಾ ಸಮುದಾಯದ ಬಡವರು ಸುಖವಾಗಿ ಬಾಳಲಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಯಶಸ್ಸು ಕಾಣಲಿ ಎಂದು ಹಾರೈಸುತ್ತ ಭಕ್ತಿ ಸಮರ್ಪಣೆ ಮಾಡಿದರು ಶಾಸಕರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button