ಕರುನಾಡ ಮ್ಯೂಸಿಕಲ್ ಉದ್ಘಾಟನಾ ಸಮಾರಂಭ.
ಮೊಳಕಾಲ್ಮುರು ಫೆಬ್ರುವರಿ.29

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಶ್ರೀ ಶ್ರೀ ನುಂಕೇಮಲೆ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮೊಳಕಾಲ್ಮುರಿನ ಯುವ ಗಾಯಕರದ ಜ್ಞಾನೇಶ್ ಯಾದವ್ ಸಾರಥ್ಯದಲ್ಲಿ ಕರುನಾಡ ಮ್ಯೂಸಿಕಲ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಾನಪದ ಕಲಾವಿದರಾದ ಡಿಜಿ ತಿರುಮಲ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ಮೊಳಕಾಲ್ಮುರಿನ ಸಬ್ ಇನ್ಸ್ಪೆಕ್ಟರ್ ಪಾಂಡುರಂಗಪ್ಪ ಅವರು ಸಸಿಗೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ ಲಕ್ಷ್ಮಣ್ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ವಹಿಸಿದ್ದರು ನಂತರ ಕರುನಾಡ ಮ್ಯೂಸಿಕಲ್ ಇವೆಂಟ್ಸ್ ಲೋಗೋವನ್ನು ಭಾಗವಹಿಸಿದ ಎಲ್ಲಾ ಅತಿಥಿ ಗಣ್ಯ ಮಾನ್ಯರು ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭೀಮಣ್ಣ ಕುರಾಕಲ ಹಟ್ಟಿ, ಹನುಮಂತಪ್ಪ, ಮಂಜುನಾಥ್ ಗಾಯಕವಾಡ, ಹೆಚ್ ಪೆನ್ನೋಬಳಿ.ಜಿಯಾ ಉಲ್ಲಾ ಕರುನಾಡು, ಕಾಂಗ್ರೆಸ್ ಮುಖಂಡರು ಮೊಳಕಾಲ್ಮೂರು, ರಾಜು ಸೂಲೆನಹಳ್ಳಿ ತನುಶ್ರೀ ಪ್ರಕಾಶನ ಅಧ್ಯಕ್ಷರು ಮಂಜುನಾಥ್ ಸೆಕ್ರೇಟ್ ಆರ್ಟ್ ಡಾನ್ಸ್ ಸ್ಕೂಲ್ ಮೊಳಕಾಲ್ಮೂರು, ಭೀಮ ಕುರಕಲಹಟ್ಟಿ. ಸಂದೀಪ್ ಇವರು ಭಾಗವಹಿಸಿದ್ದರು. ನಂತರ ಕರುನಾಡ ಮ್ಯೂಸಿಕಲ್ ಇವೆಂಟ್ಸ್ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಜರಗಿತು ತಂಡದ ನಾಯಕರಾದ ಜ್ಞಾನೇಶ್ ಯಾದವ್ ಸಹ ಗಾಯಕರದ ಪ್ರತಾಪ್ ಚಿರು ವಿಜಯ್ ಚಿರು ,ಜಾನಪದ ಗಾಯಕರದ ಡಿಜಿ ತಿರುಮಲ ಗಾಯಕಿರಾದ .ಪುಷ್ಪ .ಮಹಾಲಕ್ಷ್ಮಿ ಅದ್ಭುತ ಗಾಯನ ಕಾರ್ಯಕ್ರಮ ನೀಡಿದರು. ನಂತರ ಕೀಬೋರ್ಡ್ ನಲ್ಲಿ ನಿಂಗಣ್ಣ ಅವರು ಸಾತ್ ನೀಡಿದರು ತಂಡದ ನೃತ್ಯಗಾರರಾದ .ಚಂದು ಯಾದವ್ ,ಜಯಂತ್ ಹಾಗೂ ದಾವಣಗೆರೆಯ ವಿಶ್ವ ತಂಡವರಿಂದ ಅದ್ಭುತ ನೃತ್ಯ ಪ್ರದರ್ಶನ ನಡೆಯಿತು ಕಾರ್ಯಕ್ರಮದ ನಿರೂಪಣೆಯನ್ನು ಜಾನಪದ ಗಾಯಕರಾದ ಡಿ.ಜಿ ತಿರುಮಲ ಅವರು ನಡೆಸಿ ಕೊಟ್ಟರು ಸರ್ವರಿಗೂ ಜ್ಞಾನೇಶ್ ಯಾದವ್ ವಂದಿಸಿದರು.
ವರದಿ:ಕೋಡಿಹಳ್ಳಿ.ಟಿ. ಶಿವಮೂರ್ತಿ, ಚಳ್ಳಕೆರೆ