ಗ್ರಾಮ ಪಂಚಾಯಿತಿ ಅವಿಶ್ವಾಸದಲ್ಲಿ ಗಂಗಮ್ಮನಿಗೆ ಒಲಿದ ಅದೃಷ್ಟ ಮತ್ತೆ – ಅಧಿಕಾರದ ಚುಕ್ಕಾನೆ ಹಿಡಿದ ಬಿಜೆಪಿ.
ಜಕ್ಕಲಿ ನ.29

ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯಿತಿ ಒಟ್ಟು 13 ಜನ ಸದಸ್ಯರಿದ್ದು ಈ ಹಿಂದೆ ಸುಮಾರು ಒಂದು ವರ್ಷದ ಹಿಂದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಚುನಾವಣೆ ಮಾಡಲಾಯಿತ್ತು ಅವಿರೋಧ ಚುನಾವಣೆಯಲ್ಲಿ ಅಧ್ಯಕ್ಷೆ ಸ್ಥಾನ ಗಂಗವ್ವ ಜಂಗಣ್ಣವರ ಬಿಜೆಪಿ ಅಭ್ಯರ್ಥಿ ಬಿಜೆಪಿ ತೆಕ್ಕೆಗೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಯಲ್ಲವ್ವ ನೀಲಪ್ಪ ಮಾದರ ಒಲಿದಿತ್ತು ಅವಿರೋದದಲ್ಲಿ ವಿಪಲವಾದ ಕಾಂಗ್ರೆಸ್ ಮತ್ತೆ ನವಂಬರ್ 29 ಶುಕ್ರವಾರ ಅವಿಶ್ವಾಸ ಗೊತ್ತುವಳಿ ಮಾಡಲು ಮುಂದಾಗಿತ್ತು ಅವಿಶ್ವಾಸದ ಗೊತ್ತುವಳಿಯಲ್ಲಿ ಕಾಂಗ್ರೆಸ್ ಕೊರಂ ಭರ್ತಿಮಾಡಲು ವಿಪಲವಾಗಿದ್ದಕ್ಕೆ ಮತ್ತೆ ಗಂಗವ್ವ ದ್ಯಾಮಪ್ಪ ಜಂಗಣ್ಣವರಿಗೆ ಒಲಿದ ಅಧ್ಯಕ್ಷೆ ಪಟ್ಟ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಯಲ್ಲವ್ವ ಮಾದರ ಎಂದು ಘೋಷಣೆ ಮತ್ತೆ ಅವಿಶ್ವಾಸ ಸಭೆ ಸಮಯದ ಬಳಿಕ ಮಾತನಾಡಿದ ಚುನಾವಣೆ ಅಧಿಕಾರಿ ಗಂಗಪ್ಪ ಎಂ ಮಾತನಾಡಿದ ಅವರು ಒಟ್ಟು 13 ಜನ ಸದಸ್ಯರಿದ್ದು 11 ಗಂಟೆಗೆ ಸಭೆ ಕರೆಯಲಾಗಿತ್ತು ಸಭೆಯಲ್ಲಿ ಕೊರಂ ಭರ್ತಿಯಾಗಿದ್ದರೆ. ಅವಿಶ್ವಾಸ ಚುನಾವಣೆ ಮುಂದುವರಿಯುತ್ತಿತ್ತು ಕೊರಂ ಭರ್ತಿಯಾಗಿದ ಕಾರಣ 11 ರಿಂದ 12.30 ರ ವರೆಗೆ ಅವಿಶ್ವಾಸ ಸಮಯ ನಿಗದಿಪಡಿಸಲಾಗಿತ್ತು 12.30 ಗಂಟೆ ಕಳೆದರು ಕೂಡ ಕೊರಂ ಭರ್ತಿಯಾಗಿದ ಕಾರಣ ಈ ಹಿಂದೆ ಇರುವ ಅಧ್ಯಕ್ಷೆ ಉಪಾಧ್ಯಕ್ಷೆ ಸ್ಥಾನವನ್ನು ಮುಂದುವರಿ ಸಲಾಗುವುದು ಎಂದು ಹೇಳಿದರು. ಬಳಿಕ ಗ್ರಾಮದ ಬಿಜೆಪಿ ಪಕ್ಷದ ಕಾರ್ಯಕರ್ತರು ಗ್ರಾಮದ ಪಂಚಾಯಿತಿ ಎದುರುಗಡೆ ಪಟಾಕಿ ಸಿಡಿಸಿ ಸಿಹಿ ಹಂಚುವದರ ಜೊತೆಗೆ ಗೆಲುವಿನ ಸಂಭ್ರಮ ಆಚರಿಸಿದರು ಗೆಲುವಿನ ಸಂಭ್ರಮದಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ ಇವತ್ತಿನ ದಿನ ಗ್ರಾಮ ಪಂಚಾಯಿತಿ ಅವಿಶ್ವಾಸ ಗೊತ್ತುವಳಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಗಂಗವ್ವ ಜಂಗಣ್ಣವರ ಅವಿಶ್ವಾಸ ಗೊತ್ತುವಳಿಯಲ್ಲಿ ಮತ್ತೆ ಗೆಲುವನ್ನು ಸಾಧಿಸಿದ್ದಾರೆ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ನಾಲ್ಕು ಬಾರಿ ಅವಿಶ್ವಾಸ ಗೊತ್ತುವಳಿ ಆಗಿದೆ ಈ ಅವಿಶ್ವಾಸ ಗೊತ್ತುವಳಿಯಿಂದ ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತ ಆಗುತ್ತೆ ಆಗಾಗಿ ಪದೆ ಪದೆ ಅವಿಶ್ವಾಸ ಮಾಡುವದರಿಂದ ಗ್ರಾಮಕ್ಕೂ ಕೂಡ ಕೆಟ್ಟ ಹೆಸರು ಬರುವ ಸಾಧ್ಯತೆ ಆಗಾಗಿ ಮುಂಬರುವ ದಿನಗಳಲ್ಲಾದರೂ ವಿರೋಧ ಪಕ್ಷದವರು ಮತ್ತು ನಮ್ಮ ಪಕ್ಷದವರು ಒಗ್ಗೂಡಿಸಿ ಕೊಂಡು ಗ್ರಾಮದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು ವರತು ಪದೆ ಪದೆ ಅವಿಶ್ವಾಸ ಗೊತ್ತುವಳಿ ಮಾಡುವದರಿಂದ ನಮ್ಮ ಗ್ರಾಮದ ಅಭಿವೃದ್ಧಿ ಸಾಧ್ಯವಿಲ್ಲ ಇವತ್ತಿನ ದಿನ ಗದಗ ಜಿಲ್ಲಾ ಪಂಚಾಯಿತಿವರೆಗೆ ಜಕ್ಕಲಿ ಗ್ರಾಮ ಪಂಚಾಯಿತಿ ಪದೆ ಪದೆ ಅವಿಶ್ವಾಸ ಗೊತ್ತುವಳಿಯಿಂದ ಕೆಟ್ಟ ಹೆಸರು ಪಡೆದು ಕೊಂಡಿದೆ ಆಗಾಗಿ ಇಂತ ಹೆಸರು ಗ್ರಾಮಕ್ಕೆ ಸೋಬೆ ತರುವಂತದ್ದಲ್ಲ ಬರುವಂತ ದಿನ ಮಾನಗಳಲ್ಲಿ ಆವಿಶ್ವಾಸವನ್ನು ಮರೆತು ಎರಡು ಪಕ್ಷದವರು ಗ್ರಾಮವನ್ನು ಅಭಿವೃದ್ಧಿ ಪಡೆಸುವ ಕಾರ್ಯ ನಡೆಯಲ್ಲಿ ಎಂದು ಹೇಳಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ ರೋಣ