ವಿಜಯಪೂರ ಜಿಲ್ಲಾ ಅತಿಥಿ ಶಿಕ್ಷಕರ ಅಧ್ಯಕ್ಷರ ಸಮ್ಮುಖದಲ್ಲಿ ತಾಲೂಕಿನ ಪದಾಧಿಕಾರಿಗಳ ನೇಮಕ
ಸಿಂದಗಿ ಏ.8

ಸಿಂದಗಿ ವಿಜಯಪೂರ ಜಿಲ್ಲೆಯಲ್ಲಿ ಬರುವಂತ ತಾಲೂಕು ಅತಿಥಿ ಶಿಕ್ಷಕರ ಸಮಾಲೋಚನೆ ಸಭೆ ಹಾಗೂ ಪದಾಧಿಕಾರಿಗಳ ನೇಮಕ ಕುರಿತು ಸಿಂದಗಿ ತಾಲ್ಲೂಕಿನ ಶ್ರೀ ಸಂಗಮೇಶ್ವರ ದೇವಾಲಯ ಸಿಂದಗಿಯಲ್ಲಿ ಇಂದು ಸಭೆ ಹಮ್ಮಿಕೊಳ್ಳಲಾಗಿತ್ತು ಈ ಸಭೆಯಲ್ಲಿ ರಾಜ್ಯ ಸಂಚಾಲಕರು ಆದ ಶ್ರೀ ಎಸ್ ಆರ್ ಪಾಟೀಲರು ಒಗ್ಗಟ್ಟಿನಿಂದ ಕೆಲಸ ಸಾಧ್ಯ ಎಂದು ಮಾತನಾಡಿದರು ಜೋತೆಗೆ ಜಿಲ್ಲಾ ಅತಿಥಿ ಶಿಕ್ಷಕರ ಅಧ್ಯಕ್ಷರು ಆದ ಶ್ರೀ ದಾನೇಶ ಕಲಕೇರಿಯವರು ಶಿಕ್ಷಣ.ಸಂಘಟನೆ.ಹೋರಾಟದ ರೂಪುರೇಷೆಗಳನ್ನು ಎಲ್ಲರಿಗೂ ಮನದಟ್ಟು ಮಾಡಿಸಿದರು ಈ ಒಂದು ಸಭೆಯಲ್ಲಿ ಸಿಂದಗಿ ತಾಲ್ಲೂಕಿನ ಅತಿಥಿ ಶಿಕ್ಷಕರ ಅಧ್ಯಕ್ಷರು ಆದ ಶ್ರೀ ರೇಣುಕಾ ಇಂಗಳೇಶ್ವರ.ಪ್ರಧಾನ ಕಾಯ೯ದಶಿ೯ಗಳಾದ ಶ್ರೀ ಡಿ ಎಮ್ ನನಶೇಟ್ಟಿ ಹಾಗೂ ಸಹ ಸಂಚಾಲಕರಾದ ಮಡಿವಾಳ ನಾಯ್ಕೋಡಿ.ರಾಜು ಕರ್ನಾಳ.ಶಿವಲಿಂಗಪ್ಪ ರೂಡಗಿ.ಉಸ್ತಾದ.ಅಜಯಕುಮಾರ ಯಲಗಟ್ಟಿ ಸಂಚಾಲಕರು.ಅಂಬಿಕಾ ತಳವಾರ.ಭಾಗ್ಯಶ್ರೀ ಗಾಣಿಗೇರ.ಸೋಮಯ್ಯ ಹೀರೆಮಠ ಮುಂತಾದ ಅತಿಥಿ ಶಿಕ್ಷಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು:ಬೀ ಎಸ್ ಹೊಸೂರ್. ವಿಜಯಪುರ