ರಾಜ್ಯ ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಆಯ್ಕೆ ಬಗ್ಗೆ ಇಂದು ಕಲಬುರಗಿಯಲ್ಲಿ – ಪೂರ್ವಭಾವಿ ಸಭೆ ಜರುಗಿತು.
ಕಲಬುರಗಿ ಡಿ.12

ಇಂದು ಕಲಬುರಗಿ ಜಿಲ್ಲೆಯ ಜಗತ್ ಸರ್ಕಲ್ ನಲ್ಲಿ ಇರುವ ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಹಿಂದುಗಡೆ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಕುರಿತು ಇಂದು ಕಲಬುರಗಿ ಜಿಲ್ಲೆಯ ಒಳಪಡುವ ತಾಲೂಕಾಧ್ಯಕ್ಷ ಹಾಗೂ ಸಮಾಜದ ಪದಾಧಿಕಾರಿಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆ (ಮೀಟಿಂಗ್) ನಡೆಸಲಾಯಿತು.
ಸಮಾಜದ ಏಳ್ಗೆಗಾಗಿ ಒಗ್ಗಟ್ಟು ಪ್ರದರ್ಶಿಸಲು ಕರೆ ಹಡಪದ ಅಪ್ಪಣ್ಣ ಜನಾಂಗವು ಒಗ್ಗಟ್ಟಾಗಿ ನಿಂತು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂಬ ಸಂದೇಶವನ್ನು ನಮ್ಮ ಸಮಾಜಕ್ಕೆ ಮತ್ತು ಹೊರಗಿನ ಜನರಿಗೂ ತಲುಪಿಸಬೇಕು. ಇದು ನಮ್ಮನ್ನು ಗುರುತಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರಾಜ್ಯ ಹಡಪದ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ ಶಹಾಬಾದ ಅವರು ತಿಳಿಸಿದರು. ನೇರ ಸಂಪರ್ಕಕ್ಕೆ ಒತ್ತು ಸಮಾಜದಲ್ಲಿ ಯಾವುದೇ ಗೊಂದಲಗಳಿದ್ದರೆ ನೇರವಾಗಿ ಭೇಟಿಯಾಗಿ ಚರ್ಚಿಸುವ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಇದಕ್ಕಾಗಿ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಸದಸ್ಯತ್ವ ಹೊಂದಿರುವ ಸದಸ್ಯರು ಸಮಾನವಾದ ನಿಷ್ಠಾವಂತ ಕಾರ್ಯಕರ್ತರು ತಮ್ಮ ವ್ಯತ್ಯಾಸ ಮರೆತು ತಮ್ಮ ವೈಮನಸ್ಸು ಬದಿಗಿಟ್ಟು ಒಂದಾಗಿ ಕೆಲಸ ಮಾಡಬೇಕು. ಇದು ಕೇವಲ ನನ್ನ ಸಂಘವಲ್ಲ, ನಮ್ಮೆಲ್ಲರದ್ದು, ಇಡೀ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜಕ್ಕೆ ಸೇರಿದ್ದು. ನಿಮ್ಮ ಸಲಹೆ, ಸೂಚನೆಗಳನ್ನು ಮುಕ್ತವಾಗಿ ಹಂಚಿ ಕೊಳ್ಳಿ. ವದಂತಿಗಳಿಗೆ ಕಿವಿ ಗೊಡದೆ, ನೇರವಾಗಿ ಮುಖಂಡರೊಂದಿಗೆ ಮಾತನಾಡಿ ಸ್ಪಷ್ಟವಾಗಿ ಕಲಬುರಗಿ ಜಿಲ್ಲಾಧ್ಯಕ್ಷರು ಈರಣ್ಣ.ಸಿ ಹಡಪದ ಸಣ್ಣೂರ ಅವರು ಸಮಾಜದ ಜನತೆಗೆ ತಿಳಿಸಿದರು.
ಪ್ರತಿಯೊಬ್ಬ ಮನುಷ್ಯರಿಗೂ ತಾವು ಯಾವುದೇ ಹುದ್ದೆಯಲ್ಲಿ ಇದ್ದರು ಸಮಾಜ ಸೇವೆ ಮಾಡ ಬೇಕೆನ್ನುವ ಮನೋಭಾವ ವಿರಬೇಕು ಅಂದಾಗ ಮಾತ್ರ ನಾವು ಹುಟ್ಟಿದ್ದು ಸಾರ್ಥವಾಗುತ್ತದೆ. ಸ್ವಾರ್ಥ ಜೀವನ ಸಾಗಿಸಿದರೆ ಬದುಕಿಗೆ ಅರ್ಥವಿಲ್ಲ. ಸಮಾಜದಲ್ಲಿರುವ ಅಸಹಾಯಕರು, ಕಷ್ಟ ದಲ್ಲಿರುವವರಿಗೆ ಸಹಾಯ ಮಾಡುವ, ಬಡವರ ಕಣ್ಣೀರು ಒರೆಸುವ ಮಾನವೀಯತೆ ಮೈಗೂಡಿಸಿ ಕೊಂಡು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವುದು ಇಂದಿನ ಅಗತ್ಯತೆ ಯಾಗಿದೆ ಎಂದು ಕಲಬುರಗಿ ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ ಸಹ ಶಿಕ್ಷಕರು ಹೊನ್ನಕಿರಣಗಿ ತಿಳಿಸಿದರು.
ಸಮಾಜ ಸೇವೆಯ ಕೆಲಸಕ್ಕೆ ಸಮಾಜದ ಸಹಕಾರ, ಪ್ರೋತ್ಸಾಹ ನೀಡುವುದು ಅವಶ್ಯಕವಾಗಿದೆ. ಒಂದೊಳ್ಳೆ ಕಾರ್ಯವನ್ನು ಮಾಡುವಾಗ ಸಮಾಜದಲ್ಲಿ ಸಾಕಷ್ಟು ಅಡ್ಡಿ ಆತಂಕಗಳು ಎದುರಾಗುತ್ತವೆ. ಹಾಗೆಂದು ಅವುಗಳಿಗೆ ಹೆದರಿ ಹಿಂದೆ ಹೆಜ್ಜೆ ಇಡುವುದಕ್ಕಾಗುತ್ತದೆಯೇ..? ಖಂಡಿತ ಇಲ್ಲಾ. ಎದುರು ಬರುವ ಅಡ್ಡಿಗಳನ್ನು ಅಡ್ಡಗಟ್ಟಿ ದಾಟಿದಾಗ ಮಾತ್ರ ನಿಶ್ಚಿತ ಗುರಿಯನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ.

ಆದರೆ ಯಾವುದೇ ಹಂತದಲ್ಲಿಯೂ ತಾಳ್ಮೆ ಕಳೆದು ಕೊಳ್ಳಬಾರದು. ಎಲ್ಲಿ ತಾಳ್ಮೆ, ಶಾಂತಿ ಹಾಗೂ ಸಮರ್ಪಣಾ ಭಾವವಿರುತ್ತದೆಯೋ ಅಲ್ಲಿ ಮಾಡುವ ಕಾರ್ಯಗಳು ಯಶಸ್ಸಿನ ದಾರಿಯಲ್ಲಿ ಸಾಗುತ್ತವೆ. ಹೀಗಾಗಿ ಸಮಾಜದ ಬಂಧುಗಳು ಸಹ ಇಂತಹ ಚಿಂತನೆಗಳನ್ನು ಅಳವಡಿಸಿ ಕೊಂಡು ಹೆಜ್ಜೆ ಹಾಕಬೇಕು ಎಂದು ಜಿಲ್ಲಾ ಪ್ರ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ ಅವರು ಸಮಾಜದ ಜನತೆಗೆ ಕರೆ ನೀಡಿದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಬಟಗೇರಾ.ಜಿಲ್ಲಾ ಖಜಾಂಚಿ ಶಿವಾನಂದ ಹಡಪದ ಬಬಲಾದಿ. ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಜಿಲ್ಲಾ ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಬನ್ನೂರ. ಮತ್ತು ಕಲಬುರಗಿ ತಾಲೂಕು ಅಧ್ಯಕ್ಷ ಚಂದ್ರಶೇಖರ್ ತೊನಸನಹಳ್ಳಿ. ತಾಲೂಕು ಕಾರ್ಯದರ್ಶಿ ವಿನೋದ ಅಂಬಲಗಾ. ಮತ್ತು ಜೇವರ್ಗಿ ತಾಲೂಕಾಧ್ಯಕ್ಷ ತಿಪ್ಪಣ್ಣ ಹಡಪದ ನರಿಬೋಳ. ಚಿತ್ತಾಪುರ ತಾಲೂಕಾಧ್ಯಕ್ಷ ರಮೇಶ್ ಹಡಪದ ಕೊಲ್ಲೂರು. ಅಫಜಲಪುರ ತಾಲೂಕಾಧ್ಯಕ್ಷ ಮಹಾಂತೇಶ ಹವಳಗಾ. ಕಾಳಗಿ ತಾಲೂಕಾಧ್ಯಕ್ಷ ಶ್ರೀಮಂತ ಮಳಗಿ. ಮತ್ತು ಚಿಚ್ಚೊಳ್ಳಿ ತಾಲೂಕು ಗೌರವಾಧ್ಯಕ್ಷ ರಮೇಶ್ ಹಡಪದ. ಶಹಾಬಾದ ತಾಲೂಕು ಪ್ರ ಕಾರ್ಯದರ್ಶಿ ಶಿವಲಿಂಗಪ್ಪ ಹಡಪದ ಸುಗೂರ ಎನ್, ಮತ್ತು ಹಾಗೂ ಸಮಾಜದ ಹಿರಿಯರು ಮಲ್ಲಣ್ಣ ಫರಹತ್ಬಾದ್, ಹಾಗೂ ಸುನೀಲ್ ಕುಮಾರ್ ಹಡಪದ ಭಾಗ ಹಿಪ್ಪರಗಾ, ಅಂಬ್ರೇಶ ಹಡಪದ ಊಡಗಿ, ಸಿದ್ದು ಹಡಪದ ಯಳವಂತಗಿ. ರಮೇಶ್ ಹಡಪದ ಕವಲಗಾ, ಸಿದ್ರಾಮ ಹಡಪದ ಅಫಜಲಪುರ, ಚಿದಾನಂದ ಹಡಪದ ಅಫಜಲಪುರ, ತೋಟೇಂದ್ರ ಹಡಪದ ಶಹಾಬಾದ. ಬಸವರಾಜ ಹಡಪದ ಕಲಗುರ್ತಿ. ಸೇರಿದಂತೆ ಅನೇಕ ಸಮಾಜದ ಮುಖಂಡರು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಎಲ್ಲಾ ತಾಲೂಕಾಧ್ಯಕ್ಷ ಹಾಗೂ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಮತ್ತು ಹಿರಿಯರು. ಯುವಕ ಮುಖಂಡರು ನೇತೃತ್ವದಲ್ಲಿ ಒಮ್ಮತದ ಅಭಿಪ್ರಾಯ ಮೆರೇಗೆ ಈರಣ್ಣ.ಸಿ ಹಡಪದ ಸಣ್ಣೂರ ಜೀ ಅವರಿಗೆ ರಾಜ್ಯಾಧ್ಯಕ್ಷ ಆಗಲೇಬೇಕು ಎಂದು ತಾವು ಚುನಾವಣೆಯಲ್ಲಿ ನಿಲ್ಲಿ, ನಿಮ್ಮ ಪರವಾಗಿ ನಾವೆಲ್ಲರೂ ಒಪ್ಪಿಗೆ ಸೂಚಿಸುವ ಮೂಲಕ ಇಡೀ ಕರ್ನಾಟಕ ರಾಜ್ಯದ ಸಮಸ್ತ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಪದಾಧಿಕಾರಿಗಳ ಸದಸ್ಯತ್ವ ಹೊಂದಿರುವ ಬಂಧುಗಳಿಗೆ ನಿಮ್ಮ ಈ ಸಮಾಜದ ಹೋರಾಟದ ಮೂಂಚ್ಚೂಣಿಯ ನಾಯಕ ಸಂಘಟನೆಯ ಚತುರ ಸಮಾಜ ಮೇಲೆ ಕಾಳಜಿ ವಹಿಸುವ ಮತ್ತು ಅತಿ ಹೆಚ್ಚು ಸಮಾಜಕ್ಕೆ ಒತ್ತು ನೀಡುವ ನಾಯಕ ಈರಣ್ಣ ಸಿ ಹಡಪದ ಸಣ್ಣೂರ ಜೀ ಅವರಿಗೆ ತಮ್ಮೆಲ್ಲರ ಸಹಕಾರದಿಂದ ಅವರನ್ನು ಅತಿ ಹೆಚ್ಚು ಮತದಾನ ಹಾಕಿಸುವ ಮೂಲಕ ಗೆಲುವು ಸಾಧಿಸಿ ಸಮಾಜದ ಸಂಘಟನೆ ಒತ್ತು ನೀಡುವ ನಾಯಕರಿಗೆ ಮತ ನೀಡಿ ಎಂದು ಕೇಳಿ ಕೊಳ್ಳುತ್ತೇವೆ. ಧನ್ಯವಾದಗಳು ಕಲಬುರಗಿ ಜಿಲ್ಲೆಯ ಸಮಸ್ತ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ. ವಿನಂತಿ ಮಾಡಿ ಕೊಳ್ಳಲಾಗುತ್ತದೆ. ಎಂದು ಮಲ್ಲಿಕಾರ್ಜುನ.ಬಿ ಹಡಪದ ಸುಗೂರ.ಎನ್ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಮತ್ತು ಸಮಾಜದ ಸೇವಕರು ತಿಳಿಸಿದರು.

