ನಿಧನ ವಾರ್ತೆ: ಇಂಡಿಯನ್ ಪೋಸ್ಟ್ ಆಫೀಸ್ ಇಲಾಖೆಯ ನಿವೃತ್ತ ಅಧಿಕಾರಿ ಜಿ. ಮಲ್ಲಪ್ಪ ನಿಧನ.

ಮೀನ್ ಕೆರೆ ಜನೇವರಿ:8

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುರುಳಿ ಹಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೀನ್ ಕೆರೆ ನಿವಾಸಿಯಾದ ರೆಡ್ಡಿ ರುದ್ರಗೌಡರ ಮೊಮ್ಮಗನಾದ ಜಿ. ಮಲ್ಲಪ್ಪ ಇವರು (80) ರವರು. ಜ.7 ರಂದು , ಸಾಯಂಕಾಲ 6 ಘಂಟೆ ಸಮಯದಲ್ಲಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಬಹು ದಿನಗಳಿಂದ ವಯೋಸಹಜ ಅನಾರೋಗ್ಯದಿಂದಾಗಿ, ಹಾಸಿಗೆ ವಿಶ್ರಾಂತಿಯಲ್ಲಿದ್ದರು. ಅವರ ಪತ್ನಿ ಸಿದ್ದಲಿಂಗಮ್ಮ ಹಾಗೂ ಮೂರು ಜನ ಮಕ್ಕಳಿದ್ದು ಎಲ್ಲಾ ಮಕ್ಕಳು ಸರ್ಕಾರಿ ಸೇವೆ ಸಲ್ಲಿಸುತ್ತಿದ್ದು, ಮೊದಲನೇ ಹಿರಿಯ ಮಗನಾದ ಜಿ ಎಂ. ತಿಪ್ಪೇಸ್ವಾಮಿ ಹಾಲಿ ಪೊಲೀಸ್ ಇಲಾಖೆಯಲ್ಲಿ ಡಿ ವೈ ಎಸ್ ಪಿ ಯಾಗಿ ಸೇವೆಯನ್ನು ಬಳ್ಳಾರಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಎರಡನೇ ಮಗಳು ಸ್ವ -ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಯಾಗಿದ್ದು, ಮೂರನೇ ಮಗನಾದ ಜಿ ಎಂ. ರುದ್ರಗೌಡ ಇವರು ವಕೀಲರಿದ್ದು ಇವರುಗಳು ಮತ್ತು ಮಕ್ಕಳು ಮೊಮ್ಮಕ್ಕಳು, ಹಾಗೂ ಅಳಿಯಂದಿರು ಅಪಾರ ಬಂಧು- ಬಳಗವನ್ನು ಜಿ ಮಲ್ಲಪ್ಪ ಇವರು ಬಿಟ್ಟು ಅಗಲಿದ್ದಾರೆ. ಅವರು, ವಯೋಸಹಜ ಅನಾರೋಗ್ಯದಿಂದಾಗಿ ವಿಶ್ರಾಂತಿಯಲ್ಲಿರುತಿದ್ದರು ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ,*ಅಂತ್ಯ ಕ್ರಿಯೆ*-ದಿವಂಗತ ಜಿ. ಮಲ್ಲಪ್ಪ ಇವರ ಅಂತ್ಯ ಸಂಸ್ಕಾರ, ಮೀನ್ ಕೆರೆ ಗ್ರಾಮದಲ್ಲಿ ಜ.8 ರಂದು ಮಧ್ಯಾಹ್ನ 2 ಗಂಟೆಗೆ ಜರುಗಲಿದೆ. ಕೊಂಬೆಹಳ್ಳಿ ರಸ್ತೆಯ ಮಾರ್ಗದಲ್ಲಿ ಬರುವ ತಮ್ಮ ಜಮೀನುನಲ್ಲಿ ಅಂತೆ ಕ್ರಿಯೆ ನಡೆಸಲಿದ್ದಾರೆ “ಸಂತಾಪ” ಹಲವು ದಶಕಗಳ ಕಾಲ ಇಂಡಿಯನ್ ಪೋಸ್ಟ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ, ಇಹಲೋಕ ತ್ಯಜಿಸಿದ ಜಿ.ಮಲ್ಲಪ್ಪ ರವರ ಅಗಲಿಕೆಗೆ. ಜಿಲ್ಲೆಯ ಇಂಡಿಯನ್ ಪೋಸ್ಟ್ ಇಲಾಖೆಯ ಉನ್ನತಾಧಿಕಾರಿಗಳು, ವಿವಿಧ ಅಧಿಕಾರಿ ವರ್ಗ , ಮತ್ತು ಸಿಬ್ಬಂದಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೂ ವಾಲ್ಮೀಕಿ ಸಮುದಾಯದ ಸಮಸ್ತ ನಾಗರಿಕರು ಹಾಗೂ ಕೂಡ್ಲಿಗಿ ಕ್ಷೆತ್ರದ ಶಾಸಕರು, ಗ್ರಾಮ ಪಂಚಯಿತಿ ಅಧ್ಯಕ್ಷರು ಹಾಗೂ ಸದಸ್ಯರು ವಿವಿಧ ಸಮಾಜಗಳ ಪ್ರಮುಖರು. ಮೀನ್ ಕೆರೆ ಗ್ರಾಮದ ಸಮಸ್ತ ಗ್ರಾಮಸ್ಥರು, ರೈತ ಕಾರ್ಮಿಕರು ದಲಿತ ಪರ ಸಂಘಟನೆಗಳು,ಕನ್ನಡ ಪರ ಸಂಘಟನೆಗಳು, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ವಿವಿಧ ಜನ ಪ್ರತಿನಿಧಿಗಳು, ಹಿರಿಯ ನಾಗರಿಕರು, ಗಣ್ಯರು. ವಿವಿಧ ಪಕ್ಷಗಳ ಮುಖಂಡರು ಹಾಗೂ ಪದಾಧಿಕಾರಿಗಳು, ಜಿ ಮಲ್ಲಪ್ಪ ರವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button