ನೊಣ ಕಾಟಕ್ಕೆ ಬೇಸತ್ತ ಪಿಚ್ಚರಹಟ್ಟಿಯ ಜನರ ಬದುಕು ಹೈರಾಣ….!
ಪಿಚ್ಚರಹಟ್ಟಿ ನವೆಂಬರ್.5

ಸಮೀಪದ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಚ್ಚರಹಟ್ಟಿ ಗ್ರಾಮದಲ್ಲಿ ನೊಣಗಳು ದಾಳಿಗೆ ಜನ, ಜಾನುವಾರು ಸಂಕಷ್ಟ ಎದುರಿಸುವಂತಾಗಿದೆ. ಗ್ರಾಮದಲ್ಲಿ ಸ್ವಚ್ಛತೆ, ಡ್ರೈನೇಜ್, ಚರಂಡಿಯ ನೀರು ಸಮರ್ಪಕವಾಗಿ ಹೋಗುತ್ತಿಲ್ಲ, ಚರಂಡಿಗಳು ಗಬ್ಬೆದ್ದು ನಾರುತ್ತಿದ್ದಾವೆ, ಗ್ರಾ.ಪಂ ಅಧಿಕಾರಿಗಳು ಬ್ಲೀಚಿಂಗ್ ಪೌಡರ್ ಆಗಲಿ ಯಾವುದೇ ಇತರೆ ಸ್ವಚ್ಛತೆ ಕಾರ್ಯಗಳು ಮಾಡಿಲ್ಲ ಇದರಿಂದ ನೊಣಗಳು ಗ್ರಾಮಕ್ಕೆ ದಾಳಿ ಮಾಡು ವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಎಲ್ಲೆಂದರಲ್ಲಿ ನೊಣಗಳು ಗ್ರಾಮದ ಪ್ರತಿ ಮನೆ, ಚಹಾ ಅಂಗಡಿ, ದೇವಸ್ಥಾನದ ಹೀಗೆ ಎಲ್ಲೆಂದರಲ್ಲಿ ನೊಣಗಳು ಕಾಣುತ್ತಿವೆ. ಊಟ ಮಾಡುವಾಗಲೂ ನೊಣಗಳು ಮುತ್ತಿಕ್ಕುತ್ತಿವೆ. ಸಾಕು ನಾಯಿ, ಬೆಕ್ಕು ಸಹಿತ ಜಾನುವಾರುಗಳ ಮೇಲೆಯೂ ನೊಣಗಳು ಕುಳಿತು ಕೊಳ್ಳುವುದು ಸಾಮಾನ್ಯವಾಗಿದೆ. ನೊಣಗಳಿಂದ ತಪ್ಪಿಸಿ ಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಾಲೂಕು ಪ.ಪಂ, ತಾಲೂಕು ವೈದ್ಯಾಧಿಕಾರಿಗಳಿಗೆ, ಜಿಲ್ಲಾ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಗ್ರಾ.ಪಂ, ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ ಕೊಳ್ಳಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಜನಕ್ಕೆ ಅಡುಗೆ ಮಾಡುವಾಗ, ಊಟ ಮಾಡುವಾಗ ಸೇರಿದಂತೆ ಯಾವುದಕ್ಕೂ ನೊಣಗಳು ಬಿಡುತ್ತಿಲ್ಲ. ಹಿಂಡು ಹಿಂಡಾಗಿ ನೊಣಗಳು ಕಾಟ ಕೊಡುತ್ತಿದ್ದು, ನಿತ್ಯ ನರಕ ಯಾತನೆ ಅನುಭವಿಸು ವಂತಾಗಿದೆ. ಮನೆಯಲ್ಲಿದ್ದರೆ ಹಗಲು ರಾತ್ರಿಯನ್ನದೇ ಒಮ್ಮೆಲೇ ನೂರಾರು ನೊಣಗಳು ಬರುತ್ತಿದ್ದು, ಸೊಳ್ಳೆ ಪರದೆಯನ್ನು ಹಾಕಿಕೊಂಡೇ ಇರುವಂತಾಗಿದೆ. ಮನೆಯಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ನೊಣಗಳಿಂದ ಸಂರಕ್ಷಿಸಿ ಕೊಳ್ಳಲು ಆಗುತ್ತಿಲ್ಲ, ನೊಣಗಳಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ತಸ್ಲೀಮ್, ಮುಬಾರಕ್, ನಾವಿದ್ ಬಾಷ್, ಟಿ ನೂರುಲ್ಲಾ, ಹುಸೇನ್ ಸಾಬ್, ವತಲಾ ಸಾಬ್, ಸಲೀಂ, ದೌಲಸಾಬ್ ಸೇರಿದಂತೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ