“ದೇವರ ರೂಪದಿ ಜಗವ ಪಾವನ ಗೊಳಿಸಿದವರು”…..

ಚಾಣಕ್ಯ ನೀತಿ ಜಗದ ಜ್ಯೋತಿ
ಬುದ್ಧನ ಜ್ಞಾನಬಲ ಜಗ ಸ್ತುತಿ
ಶ್ರೀಬಸವೇಶ್ವರ ಸಮಾನತೆಯ ಮೂರುತಿ
ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ
ಅಂಬೇಡ್ಕರರು
ಸರ್ವರ ಸಮಭಾವದ ಭಾರತ ಪ್ರಜಾಪ್ರಭುತ್ವ
ಆದರ್ಶತನದ ಕಿರುತಿ
ಶ್ರೀಸರ್ವಜ್ಞ ಸರ್ವರ ಅನುಭವದ ನುಡಿ
ವಚನದಾರುತಿ
ಕನಕ ಶ್ರೀ ಅಪರಂಜಿಯ ಲೋಕಮತಿ
ವಿವೇಕಾನಂದ ಆಧ್ಯಾತ್ಮಿಕ ವೀರತ್ವದ ವಿಶ್ವ
ಭಾರತಿ
ರನ್ನ ಪಂಪ ಪೊನ್ನ ಕನ್ನಡದ ಕವಿರತ್ನ ತ್ರಯರು
ಕುವೇಂಪು ದ ರಾ ಬೇಂದ್ರೆ ಮಾಸ್ತಿ ವೆಂಕಟೇಶ
ಶಿವರಾಂ ಕಾರಂತರು
ನೆಲಜಲ ನಾಡು ನುಡಿ ಸಾಹಿತ್ಯಕ್ಷೇತ್ರದ
ಜ್ಞಾನಪೀಠ ರಸ ಋಷಿಗಳು
ಪಂಡಿತ ಪುಟ್ಟರಾಜ ಗಾನಯೋಗಿ
ಡಾ.ಶಿವಕುಮಾರ ಮಹಾಸ್ವಮಿಜೀಯವರು
ವಿಶ್ವ ತ್ರಿವಿಧ ದಾಸೋಹ ರತ್ನ ನಡೆದಾಡುವ
ದೇವರಾದರು
ಶ್ರೀಸಿದ್ಧೇಶ್ವರರು ವಿಶ್ವ ಕಂಡ
ಜ್ಞಾನಸೂರ್ಯದೇವ
ದೇವರ ರೂಪದಿ ಜಗವ
ಪಾವನಗೊಳಿಸಿದವರು
ದೇಶ ನಾಡನ್ನು ನಿಜ ಸ್ವರ್ಗವಾಗಿಸಿದವರು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟ.