ನರಸಾಪುರ ಮಾಗಾಣಿ ಗ್ರಾಮಕ್ಕೆ ಕೂಡಲೇ ಹೆಚ್ಚುವರಿ ಅಂಗನವಾಡಿ ಶಾಲೆ ಪ್ರಾರಂಭಿಸ ಬೇಕೆಂದು – ಕರುನಾಡ ವಿಜಯ ಸೇನೆ ಮನವಿ.

ಹೊಸಪೇಟೆ ಆ.22

ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸಪೇಟೆ ಅವರ ಕಚೇರಿಗೆ ಆಗಮಿಸಿದ ಕರುನಾಡ ವಿಜಯ ಸೇನೆ ರಾಜ್ಯಾಧ್ಯಕ್ಷರಾದ ಎಚ್.ಎನ್. ದೀಪಕ್ ಅಣ್ಣನವರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶಿವಪುತ್ರ ಗಾಣದಾಳ ಅಣ್ಣನವರ ಆದೇಶದ ಮೇರೆಗೆ ವಿಜಯನಗರ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನರಸಾಪುರ ಮಾಗಾಣಿ ಗ್ರಾಮಕ್ಕೆ ಕೂಡಲೇ ಹೆಚ್ಚುವರಿ ಅಂಗನವಾಡಿ ಶಾಲೆ ಪ್ರಾರಂಭಿಸ ಬೇಕೆಂದು ಮನವಿ ಸಲ್ಲಿಸಲಾಯಿತು.ಚಿಕ್ಕ ಮಕ್ಕಳಿಗೆ ಪ್ರಾಥಮಿಕ ಪಾಠ ಶಾಲೆ ಅಂಗನವಾಡಿ ಕೇಂದ್ರವಾಗಿದೆ. ಅಂಗನವಾಡಿ ಶಾಲೆ ಇಲ್ಲದಿರುವುದರಿಂದ ಮಕ್ಕಳಿಗೆ ಬಳವಣಿಗೆಯಲ್ಲಿಯೇ ಶಿಕ್ಷಣ ದಿಂದ ವಂಚಿತರಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅಂಗನವಾಡಿ ಶಾಲೆ ಪ್ರಾರಂಭ ಮಾಡುವುದರಿಂದ ಮಕ್ಕಳಿಗೆ ದೈಹಿಕ ಮಾನಸಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ. ಮತ್ತು ಕಿಶೋರಿ ಶಕ್ತಿ ಯೋಜನೆ, ಭಾಗಲಕ್ಷ್ಮಿ ಯೋಜನೆ, ಮಕ್ಕಳಿಗೆ ಲಸಿಕೆ, ಶ್ರೀ ಶಕ್ತಿ ಸಂಘ, ಪೌಷ್ಠಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ವೈದ್ಯಕೀಯ ಸೇವೆ, ಸಲಹಾ ಸೇವೆ, ಇನ್ನೂ ಮುಂತಾದ ಸೌಲಭ್ಯಗಳು ಅಂಗನವಾಡಿಯಲ್ಲಿ ದೊರೆಯುತ್ತವೆ.ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ತೆರಳಿ, ಪರಿಶೀಲಿಸಿ, ಅಂಗನವಾಡಿ ಶಾಲೆ ಪ್ರಾರಂಭ ಮಾಡಿ ಕೊಡಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸಪೇಟೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಜಿಲ್ಲಾಧ್ಯಕ್ಷ ಕೆ ಎಸ್ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಕೆ ಮೂರ್ತಿ, ಎನ್ ಪ್ರಿಯಾಂಕ, ಪ್ರಶಾಂತ್, ಸಂತೋಷ್, ಶಿವರಾಜ್ ಅರಸು, ಗಜಾನನ ನಾಯಕ್, ಪಂಪಣ್ಣ ಕಾರಿನೂರ್, ಮಾಂಚಪ್ಪ, ಹನುಮಂತ ಪಿಕೆ ಹಳ್ಳಿ, ಕೆ ಹನುಮಂತ, ಮಲಪನ ಗುಡಿ, ಮರಿಸ್ವಾಮಿ ಹನುಮನಹಳ್ಳಿ ಚಂದ್ರು, ಲೋಕೇಶ್, ಹಾಗೂ ಸಂಘಟನೆ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button