ಬಾಯಾರಿದ ಬಾನಡಿಗಳಿಗೆ ನೀರುಣಿಸಲು ಪಕ್ಷಿಗಳು ಅರವಟ್ಟಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ – ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಅಮರೇಗೌಡ ಮಲ್ಲಾಪುರ.

ಜವಳಗೇರ ಫೆ.21

ಸಿಂಧನೂರು ತಾಲೂಕಿನ ಜವಳಗೇರ ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಪೌಂಡೇಷನ್ ಹಾಗೂ ನಿಸರ್ಗ ಯುಕೋ ಕ್ಲಬ್ ಜವಳಗೇರ ಸಹಯೋಗ ದೊಂದಿಗೆ ಬಾಯಾರಿದ ಬಾನಡಿಗಳಿಗೆ ನೀರುಣಿಸಲು ಪಕ್ಷಿಗಳು ಅರವಟ್ಟಿಗೆ ಕಾರ್ಯಕ್ರಮ ಹಮ್ಮಿಕೊಳ್ಳಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಗಿಡ ನೆಟ್ಟು ನೀರುಣಿಸಿ ಪ್ರಾಣಿ ಪಕ್ಷಿಗಳಿಗೆ ಕಾಳು ಮತ್ತು ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ರಾಜ್ಯ ಸರ್ಕಾರ ಪ್ರತಿ ಶಾಲೆಯ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸಲು ಪರಿಸರವನ್ನು ಪ್ರೀತಿಸಿ, ಪರಿಸರವನ್ನು ಕಾಪಾಡ ಬೇಕೆನ್ನುವ ಉದ್ದೇಶದಿಂದ ನಿಸರ್ಗ ಯುಕೋ ಕ್ಲಬ್ ಗಳನ್ನು ಪ್ರತಿ ಶಾಲೆಯಲ್ಲಿ ರಚನೆ ಮಾಡಲಾಗಿದೆ. ಈ ನಿಸರ್ಗದಲ್ಲಿ ಬೆಳೆಯುವ ಚರ್ರಿ ಗಿಡದ ಹಣ್ಣುಗಳು ಬೆಳೆಯುತ್ತವೆ. ಈ ಹಣ್ಣುಗಳನ್ನು ದಿನಕ್ಕೆ ನಾಲ್ಕು ತಿನ್ನುವುದರಿಂದ ಶುಗರ್ ಎನ್ನುವ ರೋಗ ಕಡಿಮೆ ಯಾಗುತ್ತದೆ.

ಇಂತಹ ಇನ್ನೂ ಹಲವಾರು ರೋಗಗಳನ್ನು ಹೋಗಲಾಡಿಸು ವಂತಹ ಗಿಡ ಮರಗಳು ಈ ನಮ್ಮ ಪರಿಸರದಲ್ಲಿವೆ. ಮತ್ತು ಹಣ್ಣಿನ ಗಿಡಗಳು ಪ್ರಾಣಿ ಪಕ್ಷಿಗಳಿಗೂ ಆಹಾರವಾಗಿವೆ. ಪ್ರಾಣಿ ಪಕ್ಷಿಗಳ ಉಳುವಿಗಾಗಿ ಹಣ್ಣಿನ ಗಿಡ ಮರಗಳನ್ನು ನಾವುಗಳೆಲ್ಲರೂ ಹೆಚ್ಚು ಹೆಚ್ಚು ಬೆಳಸಿ ಉಳಿಸಲು ಮುಂದಾಗ ಬೇಕು. ಪ್ರಾಣಿ ಪಕ್ಷಿಗಳಿಗೆ ಗಿಡ ಮರಗಳು ಆಹಾರವಾಗುತ್ತವೆ. ಆದರೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಅದಕ್ಕಾಗಿಯೇ ನಮ್ಮ ವನಸಿರಿ ತಂಡ ದಿಂದ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆಗಳನ್ನು ಕಟ್ಟುವ ಬಾಯಾರಿದ ಬನಾಡಿಗಳಿಗೆ ನೀರುಣಿಸುವ ಕಾರ್ಯವನ್ನು ಕೈಗೊಂಡಿದ್ದೇವೆ. ತಾವುಗಳೆಲ್ಲರೂ ಇದಕ್ಕೆ ಕೈಜೋಡಿಸ ಬೇಕು ಎಂದು ಮನವಿ ಮಾಡಿದರು.ಈ ಸಂಧರ್ಭದಲ್ಲಿ ವನಸಿರಿ ತಂಡದ ಸದಸ್ಯರಾದ ಸಿದ್ದನಗೌಡ ಗೋನವಾರ, ರಾಜು ಪತ್ತಾರ, ಮುದೀಯಪ್ಪ ಹೊಸಳ್ಳಿ ಕ್ಯಾಂಪ್, ಮುಖ್ಯ ಗುರುಗಳಾದ ಶ್ರೀಮತಿ ರುಬೀನಾ ತಸ್ಲಿಮಾ, ಶಿಕ್ಷಕಿಯರಾದ ಶ್ರೀಮತಿ ಪವಿತ್ರ SH, ಅನುಷಾ ಬೇಗಂ, Syeda firdose khatoon ಹಾಗೂ ವಿದ್ಯಾರ್ಥಿಗಳು ಇದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button