ಮಾನಸಿಕ ಬೌದ್ಧಿಕ ದೈಹಿಕವಾಗಿ ಸದೃಢರಾಗಲು ಯೋಗ ಮಾಡಬೇಕು
ವಿದ್ಯಾರ್ಥಿಗಳು ಮತ್ತು ಪ್ರತಿಯೊಬ್ಬ ಮನುಷ್ಯನು ಸಹ ಮಾನಸಿಕವಾಗಿ ಬೌದ್ಧಿಕವಾಗಿ ದೈಹಿಕವಾಗಿ ಸದೃಢರಾಗಲು ಯೋಗದಿಂದ ಮಾತ್ರ ಸಾಧ್ಯ ಎಂದು ಪ್ರಾಂಶುಪಾಲರಾದ ಪ್ರಶಾಂತ್ ರವರು ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹಾಗೂ ಶ್ರೀ ಸಾಯಿ ಇಂಟರ್ ನ್ಯಾಷನಲ್ ಸ್ಕೂಲ್ ನ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಯೋಗ ದಿನದ ಪ್ರಯುಕ್ತ ಯೋಗಾಸನ ಕಾರ್ಯಕ್ರಮದಲ್ಲಿ ಹೇಳಿದರು.
ಶಾಲೆಯಲ್ಲಿರುವ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ 600 ವಿದ್ಯಾರ್ಥಿಗಳು ಹಾಗೂ 38 ಜನ ಶಿಕ್ಷಕರು ಯೋಗಾಸನ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಸನ ಮಾಡಿದ್ದಾರೆ ಎಂದು ಹೇಳಿದರು.
ಇಂಗ್ಲಿಷ್ ಶಿಕ್ಷಕರಾದ ಮನು ರವರು ಮಾತನಾಡಿ ಮನಸ್ಸು ಬುದ್ಧಿ ದೇಹ ಈ ಮೂರನ್ನು ಒಂದೇ ಸರಳರೇಖೆಯಲ್ಲಿ ತರುವುದೇ ಯೋಗಾಸನ ವ್ಯಕ್ತಿ ಹಾಗೂ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯೊಂದಿಗೆ ದೈವಿಕ ಶಕ್ತಿಯ ಸಂಪರ್ಕ ಸಾಧಿಸಬಹುದು ಆದ್ದರಿಂದ ಇಂದು ವಿಶ್ವದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ನಮ್ಮ ದೇಶದಲ್ಲಿ ಜೂನ್ 21ರಂದು ರಾಷ್ಟ್ರೀಯ ಯೋಗ ದಿನವಾಗಿ ಆಚರಿಸಬೇಕೆಂದು ಕರೆ ಕೊಟ್ಟಿದ್ದಾರೆ ಎಂದು ಹೇಳಿದರು.
ದೈಹಿಕ ಶಿಕ್ಷಕರಾದ ಎಲ್.ಅನಿತಾ ರವರು ಮತ್ತು ಎನ್. ತೇಜಸ್ವಿ ಕುಮಾರ್ ರವರು ಎಲ್ಲರಿಗೂ ಯೋಗಾಸನವನ್ನು ಮಾಡಿಸಿದರು. ಸೂರ್ಯ ನಮಸ್ಕಾರ, ಪ್ರಾಣಾಯಾಮಗಳು, ಧ್ಯಾನ ಮಾಡುವುದರಿಂದ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಅಭ್ಯಾಸ ಮಾಡಬೇಕು ಮತ್ತು ಸರಿಯಾದ ಮಾರ್ಗದರ್ಶನದಲ್ಲಿ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ