ಗಿರೀಶ್ ಉಪ ನಿರ್ದೇಶಕರು ಬಳ್ಳಾರಿ — ಮಹದೇವ ಇಂಟರ್ನ್ಯಾಷನಲ್ ಪಿಯು ಕಾಲೇಜಿಗೆ ಶೈಕ್ಷಣಿಕ ಅನುಮತಿ ದೊರೆತಿಲ್ಲ.

ಕೊಟ್ಟೂರು ಜೂನ್. 22

ಕೊಟ್ಟೂರಿನ ಮಹದೇವ ಇಂಟರ್ನ್ಯಾಷನಲ್ ಪಿಯು ಕಾಲೇಜಿಗೆ ಗಿರೀಶ್ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಬಳ್ಳಾರಿ ಇವರು ಬುಧವಾರದಂದು ಭೇಟಿ ನೀಡಿ ಅನಧಿಕೃತ ದಾಖಲಾಗಿರುವ ವಿದ್ಯಾರ್ಥಿಗಳ ವಿವರವನ್ನು ಪಡೆದುಕೊಂಡರು ಹಾಗೂ ಕಾಲೇಜನ್ನು ವೀಕ್ಷಿಸಿ ಶೈಕ್ಷಣಿಕ ಅನುಮತಿ ಸಿಗದೇ ವಿದ್ಯಾರ್ಥಿಗಳ ಪ್ರವೇಶವನ್ನು ಹೇಗೆ ಪಡೆದಿರಿ ಹಾಗೂ ತರಗತಿಗಳನ್ನು ಹೇಗೆ ಪ್ರಾರಂಭಿಸಿದ್ದೀರಿ ಎಂದು ಪ್ರಶ್ನಿಸಿ ನೋಟಿಸ್ ಅನ್ನು ನೀಡಲಾಗಿತ್ತು. ಹಾಗೂ ತಪಾಸಣೆ ನಡೆಸಿದ ವೇಳೆಯಲ್ಲಿ ಯಾವುದೇ ವಿದ್ಯಾರ್ಥಿಗಳು ಕಂಡು ಬರಲಿಲ್ಲ ಆಡಳಿತ ಮಂಡಳಿಯವರು ತರಗತಿ ಪ್ರಾರಂಭ ಮಾಡಿರುವುದಿಲ್ಲ ಎಂದು ಸುಳ್ಳು ಸಂದೇಶವನ್ನು ನೀಡಿದರುಅಂದರೆ ಪೋಷಕರಾದ ಶಿವಾನಂದ ಅದೇ ಸಮಯದಲ್ಲಿ ಪಾಲಕರು ಉಪ ನಿರ್ದೇಶಕರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದಾಗ ಸತತ 20 ದಿನಗಳಿಂದ ವಿದ್ಯಾರ್ಥಿಗಳು ಮಹದೇವ ಇಂಟರ್ನ್ಯಾಷನಲ್ ಕಾಲೇಜಿಗೆ ಪಾಠಗಳನ್ನು ಕೇಳಲು ಬರುತ್ತಿರುವುದಾಗಿ ತಿಳಿಸಿದರು. ಆದರೂ ಪೋಷಕರು ಹೇಳಿರೋ ಮಾತಿಗೆ ತಲೆಕೆಡಿಸಿಕೊಳ್ಳದೆ. ಅಧಿಕಾರಿಯ ಸುಮ್ಮನಾಗಿರುವುದು ಕಂಡು ಬಂದಿದೆ.ವಿದ್ಯಾರ್ಥಿಗಳ ಹೆಸರಿನಲ್ಲಿ ರಸೀದಿ ಹರಿದಿರುವುದು ಸಾಬೀತಾಗಿದ್ದು ಗಿರೀಶ್ ಉಪ ನಿರ್ದೇಶಕರು ಅವರು ಈ ವಿಚಾರವಾಗಿ ಶಿಸ್ತುಕ್ರಮ ತೆಗೆದುಕೊಳ್ಳುತ್ತೆವೆ.ಎಂದುತಿಳಿಸಿದರು ಆಡಳಿತ ಮಂಡಳಿಯವರಾದ ಸರೋಜಮಿಸ್ರವರು ಹೇಗೆ ಸುಳ್ಳು ಹೇಳಿದ್ದನ್ನು ಉಪ ನಿರ್ದೇಶಕರು ಖಂಡಿಸದೆ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ದಾಖಲು ಪಡಿಸದೆ ಕಾಲೇಜಿನ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ. ಕಾಲೇಜಿನ ಪರವಾಗಿ ಅಧಿಕಾರಿಯು ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ದೂರು ದಾರರು ತಿಳಿಸಿದರುಸುಮಾರು 100 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ಅನಧಿಕೃತವಾಗಿ ದಾಖಲಾಗಿರುವುದು ಹೆಚ್ಚಿನ ಪ್ರಮಾಣದ ವಿದ್ಯಾರ್ಥಿಗಳಿಗೆ ತಿಳಿದಿರುವುದಿಲ್ಲ ಈಗಲೇ ವಿದ್ಯಾರ್ಥಿಗಳು ಪಾಲಕರು ಎಚ್ಚೆತ್ತುಕೊಂಡು ಬೇರೆ ಕಾಲೇಜುಗಳಿಗೆ ದಾಖಲಾತಿಯನ್ನು ಪಡೆಯಬೇಕುಕೊಟ್-1ಸದರಿ ವಿದ್ಯಾರ್ಥಿಗಳಿಗೆ ಬಳ್ಳಾರಿ ಉಪ ನಿರ್ದೇಶಕರು ಗಿರೀಶ್ ಇಲ್ಲಿಯವರೆಗೆ ಮಹದೇವ ಇಂಟರ್ನ್ಯಾಷನಲ್ ಪಿಯು ಕಾಲೇಜಿಗೆ ಶೈಕ್ಷಣಿಕ ಅನುಮತಿ ದೊರೆತಿಲ್ಲ. ತಾವುಗಳು ಸೇರುವ ಮೊದಲು ಈ ದಾಖಲಾತಿಗಳನ್ನು ಪರಿಶೀಲಿಸಿ ಪ್ರವೇಶ ಪಡೆಯಬೇಕಿತ್ತು. ಏಕೆಂದರೆ ಸ್ಯಾಟಿಸ್ ತಂತ್ರಾಂಶದಲ್ಲಿ ವಿದ್ಯಾರ್ಥಿಯ ದಾಖಲಾತಿಗಳನ್ನು ಹಿಂದೀಕರಿಸಬೇಕಾಗುತ್ತದೆ. ಒಂದು ವೇಳೆ ಹಿಂದರಿಕರಿಸದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಒಂದು ವರ್ಷ ಹಾಳಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಕೂಡಲೇ ಬೇರೆ ಕಾಲೇಜಿನಲ್ಲಿ ಪ್ರವೇಶ ಪಡೆದು ಜಾಗ ರೂಕರಾಗಬೇಕೆಂದು ತಿಳಿಸಿದರು. ಒಂದು ವೇಳೆ ಹೀಗೆ ಮುಂದುವರೆದರೆ ಮುಂದಿನ ಆಗು ಹೋಗುಗಳಿಗೆ ಇಲಾಖೆಯು ಜವಾಬ್ದಾರರಲ್ಲ ಎಂದು ಪತ್ರಿಕೆಗೆ ತಿಳಿಸಲಾಯಿತು. ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C. ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button