ಕ್ರೀಡಾಂಗಣ.ನಿವೇಶನಗಳು.ಕುಡಿಯುವ ನೀರು.ರಸ್ತೆ ಅಗಲೀಕರಣಕ್ಕೆ ಆದ್ಯತೆ ನೀಡುವೆ — ಜಿಎಚ್ ಶ್ರೀನಿವಾಸ್.

ತರೀಕೆರೆ ಜೂನ್.26

ನಿವೇಶನ ರೈತರಿಗೆ 12000 ಮನೆ ನಿವೇಶನಗಳನ್ನು ಕೊಡಬೇಕೆಂದಿದ್ದೇನೆ, ಜಮೀನು ಕೊಡುವವರು ಮುಂದೆ ಬರಬೇಕು ಎಂದು ಶಾಸಕರಾದ ಜಿಎಚ್ ಶ್ರೀನಿವಾಸ್ ರವರು ಪುರಸಭೆಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟನೆ ಮಾಡಿ ಹೇಳಿದರು.

ಕ್ರೀಡಾಂಗಣ ಮತ್ತು ಬಿ ಎಚ್ ರಸ್ತೆ ಹಾಗೂ ಎಂಜಿ ರಸ್ತೆ ಅಗಲೀಕರಣಕ್ಕೆ ಈಗಾಗಲೇ ಇಂಜಿನಿಯರ್ ರವರ ಬಳಿ ಮಾತನಾಡಿರುತ್ತೇನೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಸುತ್ತೇನೆ ಅಜ್ಜಂಪುರ ಮತ್ತು ತರೀಕೆರೆ ಎರಡು ತಾಲೂಕುಗಳು ಸರ್ವಾಂಗಿನ ಅಭಿವೃದ್ಧಿಯನ್ನು ಮಾಡಲು ಕಂಕಣ ಬದ್ಧನಾಗಿರುತ್ತೇನೆ ಎಂದು ಹೇಳಿದರು. ಪುರಸಭಾ ಸದಸ್ಯರಾದ ದಾದಾಪೀರ್ ಮಾತನಾಡಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಜಿ ಎಚ್ ಶ್ರೀನಿವಾಸ್ ರವರು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪುರಸಭೆಗೆ ಹೆಚ್ಚಿನ ಅನುದಾನ ಕೊಡಿಸಿಕೊಡಬೇಕು ಎಂದು ಹೇಳಿದರು. ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ರಂಗನಾಥ ಮಾತನಾಡಿ ಸುಮಾರು 15 ವರ್ಷಗಳಿಂದಲೂ ಆಶ್ರಯ ನಿವೇಶನಗಳನ್ನು ಕೊಟ್ಟಿರುವುದಿಲ್ಲ ಶಾಸಕರು ಆಶ್ರಯ ನಿವೇಶನಗಳನ್ನು ಕೊಡಿಸಿಕೊಡಬೇಕು ಎಂದು ಹೇಳಿದರು. ಸದಸ್ಯರಾದ ಟಿಜಿ ಲೋಕೇಶ್ ಮಾತನಾಡಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಎಂಜಿ ರಸ್ತೆ ಹಾಗೂ ಬಿಎಚ್ ರಸ್ತೆ ಅಗಲೀಕರಣ ಮಾಡಬೇಕು ಮತ್ತು ಪುರಸಭೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ನಿವೇಶನ ಮತ್ತು ಕಟ್ಟಡ ನಿರ್ಮಾಣ ಮಾಡಿಸಬೇಕು ಎಂದು ಹೇಳಿದರು. ಟಿ ಜಿ ಶಶಾಂಕ್ ರವರು ಮಾತನಾಡಿ ಮೊದಲಬಾರಿ ಶಾಸಕರಾಗಿದ್ದಾಗ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ತರೀಕೆರೆಗೆ ಒಂದು ಕ್ರೀಡಾಂಗಣ ನಿರ್ಮಾಣಕ್ಕೆ ವಿಐಎಲ್ ಫ್ಯಾಕ್ಟರಿ ತೆರವಾಗಿದ್ದ ಸ್ಥಳವನ್ನು ಸ್ಟೇಡಿಯಂ ಮಾಡಲು ಬಳಸಿಕೊಳ್ಳಬಹುದು ಎಂದು ಹೇಳಿದರು. ಅಶೋಕ್ ಕುಮಾರ್ ಮಾತನಾಡಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿ ಜನಸಾಮಾನ್ಯರು ಬಯಸಿದ್ದಾರೆ ಎಂದು ಹೇಳಿದರು.

ಆಶಾ ಅರುಣ್ ಕುಮಾರ್ ಮಾತನಾಡಿ ಜನಸಂಖ್ಯೆ ಆಧಾರದ ಮೇಲೆ ಇಪ್ಪತ್ತು ಮೂರು ವಾರ್ಡುಗಳನ್ನು 30 ವಾರ್ಡುಗಳನ್ನಾಗಿ ಹೆಚ್ಚಿಸಿ ಪುರಸಭೆಯನ್ನು ಮೇಲ್ದರ್ಜೆಗೆ ಏರಿಸಿ ನಗರಸಭೆಯನ್ನಾಗಿ ಪರಿವರ್ತಿಸಬೇಕು ಎಂದು ಹೇಳಿದರು. ಟಿ ಎಂ ಭೋಜರಾಜ್ ಮಾತನಾಡಿ ಜಿಎಚ್ ಶ್ರೀನಿವಾಸ್ ರವರು ಪುರಸಭಾ ಅಧ್ಯಕ್ಷರಾಗಿದ್ದಾಗ ಪುರಸಭಾ ಆಡಳಿತವನ್ನು ಪ್ರತಿ ಮನೆಮನೆ ಬಾಗಿಲಿಗೆ ಕೊಟ್ಟಿದ್ದರು, ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಅಭಿವೃದ್ಧಿ ಕೆಲಸ ಮಾಡಬೇಕಾಗಿದೆ. ರಾಜ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಡಿವೈಡರ್ ಇಲ್ಲದ ಪಟ್ಟಣ ಎಂದರೆ ಅದು ತರೀಕೆರೆ. ಆದ್ದರಿಂದ ಪುರಸಭಾ ಎಲ್ಲಾ ಸದಸ್ಯರು ಸಹಕರಿಸುತ್ತೇವೆ ರಸ್ತೆ ಅಗಲೀಕರಣ ಮಾಡಿಸಿ ಡಿವಿಡರನ್ನು ಹಾಕಿಸಿ ಎಂದು ಹೇಳಿದರು. ಸದಸ್ಯರಾದ ಯಶೋಧಮ್ಮ, ಗೀತಾ ಗಿರಿರಾಜ್, ಬಸವರಾಜ್, ಪರಮೇಶ್, ಡಿ ಎಸ್ ದಿವ್ಯ, ಚಂದ್ರಶೇಖರ್, ಚೇತನ್ ಕುಮಾರ್, ಗಿರಿಜಾ ಪ್ರಕಾಶ್ ವರ್ಮ,ಅನಿಲ್ ಕುಮಾರ್, ಪಾರ್ವತಮ್ಮ, ಹಾಗೂ ಸಭೆಯ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷರಾದ ಕಮಲಾ ರಾಜೇಂದ್ರ ವಹಿಸಿದ್ದು ಎಲ್ಲಾ ಪುರಸಭಾ ಸದಸ್ಯರಿಗೂ ಶಾಸಕರಿಂದ ಸ್ಮರಣಿಕೆಯನ್ನು ನೀಡಲಾಯಿತು. ಡಿ ಎಸ್ ದಿವ್ಯ ಪ್ರಾರ್ಥಿಸಿದರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು, ಟಿ ಜಿ ಲೋಕೇಶ್ ಸ್ವಾಗತಿಸಿ ಮುಖ್ಯ ಅಧಿಕಾರಿ ಹೆಚ್ಚು ಮಹಾಂತೇಶ್ ವಂದಿಸಿದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button