ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ AITUC ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ.
ಕೂಡ್ಲಿಗಿ ಜೂನ್.27

ವಿಜಯನಗರ ಜಿಲ್ಲೆಯ ಕೂಡ್ಲಿಗಿ:ಪಟ್ಟಣದಲ್ಲಿ ಜೂ27ರಂದು ಎಐಟಿಯುಸಿ ನೇತೃತ್ವದಲ್ಲಿ, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು. ಪಟ್ಟಣದ ಮಹಾತ್ಮ ಗಾಂಧೀಜಿ ಚಿತಾಭಸ್ಮ ರಾಷ್ಟ್ರೀಯ ಸ್ಮಾರಕದ ಹತ್ತಿರದಿಂದ, ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಆರಂಭಿಸಿದರು. ನಂತರ ಹಕ್ಕೊತ್ತಾಯಗಳ ಈಡೇರಿಕೆಗೆ ಘೋಷಣೆ ಕೂಗುತ್ತ, ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಸಂಚರಿಸಿ ಸಿಡಿಪಿಓ ಕಚೇರಿ ಹತ್ತಿರ ತೆರಳಿದರು. ಅಲ್ಲಿ ಮುಖಂಡರು ಮಾತನಾಡಿ ಸರ್ಕಾರದ ಕೆಲವು ಯೋಜನೆಗಳು, ತಮ್ಮ ಕರ್ತವ್ಯಕ್ಕೆ ಅಡ ತಡೆಯೊಡ್ಡುತ್ತಿದ್ದು ಹೆಚ್ಚುವರಿ ಜವಾಬ್ದಾರಿಗಳಿಂದ ಮುಕ್ತಿ ನೀಡಬೇಕು. ಕಳಪೆ ಸಾಮಾಗ್ರಿ ಸಲಕರಣೆಗಳನ್ನು ನೀಡುತ್ತಿದ್ದು ಕಾರ್ಯನಿರ್ವಹಿಸಲು ಅಸಾಧ್ಯವಾಗುತ್ತಿದೆ, ಸರ್ಕಾರ ಬಡ್ಜೆಟ್ ಸಂದರ್ಭದಲ್ಲಿ ಮಾಸಿಕ ವೇತನ ಹೆಚ್ಚಿಸಬೇಕು. ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕೆಂದು ಅವರು ಒತ್ತಾಯಿಸಿದರು. ಸಂಬಂಧಿಸಿದಂತೆ ಇಲಾಖಾ ಸಚಿವರಿಗೆ ತಮ್ಮ ಹಕ್ಕೊತ್ತಾಯ ಪತ್ರವನ್ನು ನೀಡುತ್ತಿದ್ದು, ಸಂಘಟನೆಯ ರಾಜ್ಯ ಕರೆಯ ಮೇರೆಗೆ ಪ್ರತಿಭಟಸಿ ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸುತ್ತಿರುವುದಾಗಿ ಮುಖಂಡರು ತಿಳಿಸಿದರು. ಇಲಾಖೆಯ ಸಚಿವರಿಗೆ ತಮ್ಮ ಹಕ್ಕೊತ್ತಾಯದ ಮನವಿಯ ಪತ್ರವನ್ನು ಸಿಡಿಪಿಓ ರವರ ಮುಖಾಂತರ ನೀಡಿದರು, ಸಿಡಿಪಿಓ ನಾಗನಗೌಡ ಹಕ್ಕೋತ್ತಾಯ ಪತ್ರ ಸ್ವೀಕರಿಸಿ ಮಾತನಾಡಿದರು. ಎಐಟಿಯುಸಿ ಸಂಘಟನೆ, ಭ್ರಷ್ಟರ ವಿರೋಧಿ ನಿಷ್ಠಾವಂತರ ಶಕ್ತಿಯಾಗಿದೆ-ಹೆಚ್.ವೀರಣ್ಣ ಸ್ಪಷ್ಟನೆ ನೀಡಿ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದರು, ಎಐಟಿಯುಸಿ ಮುಖಂಡ ಹೆಚ್.ವೀರಣ್ಣ ಮಾತನಾಡಿದರು. ತಾಲೂಕಿನ ಕೆಲವೆಡೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರು, ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಮಕ್ಕಳ ಆಹಾರ ಕದಿಯುತ್ತಾರೆ. ಸರಿಯಾದ ಸಮಯಕ್ಕೆ ಅಂಗನವಾಡಿಯಲ್ಲಿ ಕರ್ಥವ್ಯಕ್ಕೆ ಹಾಜರಾಗಲ್ಲ, ಕೆಲ ಅಂಗನವಾಡಿಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಸೇರಿದಂತೆ. ಹಲವಾರು ಆರೋಪಗಳು ದೂರುಗಳು , ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ವಿರುದ್ಧ ದೂರುಗಳು ಕೇಳಿಬಂದಿವೆ. ಅಂತವರಿಗೆ ಸಂಘಟನೆ ಯಾವುದೇ ಕಾರಣಕ್ಕೆ, ಸಹಕರಿಸಲ್ಲ ಮತ್ತು ಅಂತವರಿಂದ ಸಂಘಟನೆಯಿಂದ ದೂರ ಇರುತ್ತದೆ. ಯಾವುದೇ ಕಾರಣಕ್ಕೆ ಭ್ರಷ್ಟರ, ಸಮಾಜ ದ್ರೋಹಿಗಳ, ಹಾಗೂ ಅಕ್ರಮ ಕೋರರ ನಡೆಯನ್ನು ಸಂಘಟನೆ ಖಂಡಿಸುತ್ತದೆ. ಭ್ರಷ್ಟರ ವಿರುದ್ಧ ಸಾರ್ವಜನಿಕರಿಂದ ಆಧಾರ ಸಾಕ್ಷಿಗಳ ಸಹಿತ ದೂರು ಬಂದಾಗ, ಸಂಘಟನೆ ಸದಾ ಸಾರ್ವಜನಿಕರ ಹಿತ ಕಾಯುತ್ತದೆ ಎಂಬುದನ್ನು ಸರ್ವರೂ ಅರಿಯಬೇಕು. ಸಂಘಟನೆಯ ಭ್ರಷ್ಟವಿರೋಧಿ ನಿಲುವನ್ನು, ಈ ಮೂಲಕ ತಾವು ಸ್ಪಷ್ಟಪಡಿಸುತ್ತಿರುವುದಾಗಿ ಅವರು ತಿಳಿಸಿದರು. ಹಾಗೇಯೇ ಸಿಡಿಪಿಓ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಯವರು, ಅಂಗನವಾಡಿ ಕಾರ್ಯಕರ್ತೆಯರ ಅಹವಾಲುಗಳಿಗೆ ಅಗತ್ಯತೆಗಳಿಗೆ ಸ್ಪಂಧಿಸಬೇಕಿದೆ. ನಿರ್ಲಕ್ಷ್ಯ ತೋರಿದ್ದಲ್ಲಿ ಅನ್ಯಾಯ ಆಗಿದ್ದಲ್ಲಿ, ಅಂತಹವರ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಸಂಘಟನೆ ಬೆಂಬಲ ಸೂಚಿಸುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಅಗತ್ಯ ಬೇಡಿಕೆಗಳ ಈಡೇರಿಕೆಗಳಿಗಾಗಿ, ಸರ್ಕಾರದ ವಿರುದ್ಧದ ಹೋರಾಟಗಳಿಗೆ ಎಐಟಿಯುಸಿ ಸಂಘಟನೆ ಬೆಂಬಲ ಸೂಚಿಸುತ್ತದೆ. ಅವರ ನ್ಯಾಯಯುತವಾದ ಹೋರಟಗಳಿಗೆ, ಎಐಟಿಯುಸಿ ಸಂಘಟನೆ ಸದಾ ಬೆಂಬಲಿಸುತ್ತದೆ. ಆದರೆ ಅವರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವುದು ಸಾಬೀತಾದಲ್ಲಿ, ಅಂತಹವರನ್ನು ನಿರ್ಧಾಕ್ಷಿಣ್ಯವಾಗಿ ಸಂಘಟನೆ ಖಂಡಿಸುತ್ತದೆ ಎಂದರು. ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಮುಖಂಡರಾದ ಮಹಾಂತಮ್ಮ,ದ್ರಾಕ್ಷಾಯಿಣಮ್ಮ, ಮಾತನಾಡಿದರು. ಹೋರಾಟಗಾರ ಮರಬನಹಳ್ಳಿ ಕರಿಯಪ್ಪ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಅಂಗನ ವಾಡಿ ಕಾರ್ಯಕರ್ತೆಯರು, ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ