ತಾಯಿ.ಇಬ್ಬರು ಮಕ್ಕಳು ಭೀಮಾ ಪಾಲು.
ಇಂಡಿ ಜುಲೈ.1

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಬಳಿ ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದಾಗ ತಾಯಿ ಹಾಗೂ ಇಬ್ಬರು ಮಕ್ಕಳು ನೀರಲ್ಲಿ ಮುಳುಗಿ ಗುರುವಾರ ಮೃತಪಟ್ಟಿದ್ದಾರೆ.ಗೀತಾ ಹೊನ್ನೂರ (38), ಶೋಭಿತಾ (12), ವಾಸುದೇವ (10) ಮೃತ ದುರ್ದೈವಿಗಳು. ಭೀಮಾ ನದಿಯಲ್ಲಿ ತಾಯಿ ಗೀತಾ ಬಟ್ಟೆ ತೊಳೆಯುವಾಗ ವಾಸುದೇವ ನದಿ ನೀರಲ್ಲಿ ಮುಳುಗಿದ್ದಾನೆ. ಇದನ್ನು ಕಂಡು ಅಕ್ಕ ಶೋಭಿತಾ ತಮ್ಮನನ್ನು ಉಳಿಸಲು ಹೋದಾಗ ಇಬ್ಬರಿಗೂ ಈಜಲು ಬಾರದೆ ಮುಳುಗುತ್ತಿದ್ದರು. ಆಗ ಮಕ್ಕಳನ್ನು ಉಳಿಸಲು ಹೋಗಿ ತಾಯಿಯೂ ಅವರೊಂದಿಗೆ ಭೀಮಾ ನದಿ ಪಾಲಾಗಿದ್ದಾರೆ.

ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮೀಣ ಪಿಎಸ್ಐ ಪ್ರೀತಮ ನಾಯಕ, ಸಂಗಮೇಶ ತಳವಾರ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ವರದಿಗಾರರು:ರಾಜಶೇಖರ್.ಸಿಂಧೆ.ಶಿರಗೂರ