ಗುರುಪೂರ್ಣಿಮೆ.

ಆಷಾಡ ಮಾಸದ ಹುಣ್ಣಿಮ ಯನ್ನು ಗುರು ಪೂರ್ಣಿಮೆಯೆಂದು ಆಚರಿಸಲಾಗುತ್ತದೆ . ಆದಿ ಗುರು ಎಂದು ಪೂಜಿಸಲ್ಪಡುವ , ವೇದಗಳ ಕರ್ತೃ ಮತ್ತು ಮಹಾಭಾರತದ ಲಿಪಿಕಾರ , ಮಹಾನ್ ಮಹರ್ಷಿ ವ್ಯಾಸರ ಹುಟ್ಟು ಹಬ್ಬ ಇಂದು ಅವರ ನೆನಪಿಗಾಗಿ ಗುರು ಗುರುಪೂರ್ಣಿಮೆ ಹಿರಿಮೆ ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಆಚರಿಸಲಾಗುತ್ತದೆ . ಯೋಗ ಪರಂಪತೆಯಲ್ಲಿ ಶಿವ ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರದ ದಿನ ಇಂದೆ ಎಂದು ಹೇಳಲಾಗುತ್ತದೆ . ಗೌತಮ ಬುದ್ಧ ಇಂದು ಸಾರಾನಾಥದಲ್ಲಿ ತನ್ನ ಪ್ರಥಮ ಉಪದೇಶ ನೀಡಿದನು . ಧಾರ್ಮಿಕವಾಗಿ ಅಲ್ಲದೆ ಶೈಕ್ಷಣಿಕವಾಗಿ ಗುರು ಪೂರ್ಣಿಮೆ ಮಹತ್ವ ಪಡೆದಿದೆ . ಇಂದು ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಕೃತಜ್ಞತೆ ಹೇಳುವ ಮೂಲಕ ವಂದನೆ ಸಲ್ಲಿಸುತ್ತಾರೆ . ರಾಮಕೃಷ್ಣ ಪರಮಹಂಸ ಸ್ವಾಮಿ ವಿವೇಕಾನಂದ , ಗುರು ಗೋವಿಂದ ಭಟ್ – ಶಿಶುನಾಳ ಶರೀಫ ರಂತಹ ಗುರು ಶಿಷ್ಯ ಪರಂಪರೆಯಲ್ಲಿ ಅವಿನಾಭಾವ ಸಂಬಂಧವಿದೆ . ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರ ಗುರು ಶಿಷ್ಯ ಸಂಬಂಧ ಗುರು ಪೂರ್ಣಿಮೆ ಹಿರಿಮೆ ಎಂತಹದ್ದು ಎನ್ನುವುದನ್ನು ಸ್ವತಃ ವಿವೇಕಾನಂದರೆ ತಮ್ಮ ಪ್ರತಿ ಭಾಷಣದಲ್ಲಿಯೂ ನಾನು ಎದ್ದರೂ ಆದು ಗುರುವಿನ ಆಶಿರ್ವಾದದ ಫಲ ಎಂದು ಹೇಳಿಕೊಂಡಿದ್ದಾರೆ . ಮೊದಮೊದಲು ಪರಮಹಂಸರು ಶಿಷ್ಯನನ್ನು ಒಪ್ಪಿಕೊಳ್ಳಲಿಲ್ಲ . ಯಾವಾಗ ಗುರುವಿನ ಎಲ್ಲ ಸವಾಲುಗಳನ್ನು ಸ್ವಾಮಿ ವಿವೇಕಾನಂದರೂ ಎದುರಿಸಿ ನಿಲ್ಲುತ್ತಾರೊ ಆಗ ಶಿಷ್ಯನಾಗಿ ಸ್ವೀಕರಿಸಿದವರು ಪರಮಹಂಸರು ಶಿಷ್ಯನನ್ನು ಎಂದಿಗೂ ಕೈ ಬಿಡಲಿಲ್ಲ . ಅದೇ ರೀತಿ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಬಟ್ಟ ಸಂಬಂಧ ಕೋಮು ಸೌಹರ್ದತೆಗೆ ಸಾಕ್ಷಿಯಾಗಿದೆ . ಬ್ರಾಹ್ಮಣರಾದ ಗೋವಿಂದ ಭಟ್ಟರು ಶರೀಫ ಮುಸ್ಲಿಂನಾದರೂ ಮಗನಂತೆ ತಮ್ಮ ಮನೆಯಲ್ಲಿ ಇರಿಸಿಕೊಂಡು ಶಿಕ್ಷಣವನ್ನ ಧಾರೆ ಎರೆದರು – ಇಲ್ಲಿ ಜಾತಿ , ಕುಲಗೋತ್ರಗಳಾವವು . ಅವರ ಗುರು- ಶಿಷ್ಯ ಬಾಂಧವ್ಯಕ್ಕೆ ಅಡ್ಡಿಯಾಗಲಿಲ್ಲ ಗುರುವಿಗೆ ಶಿಷ್ಯನಲ್ಲಿ ಕಾಣಿಸಿದ್ದು ಕೇವಲ ಜ್ಞಾನದ ಬೆಳಕಿನ ಕಿರಣ , ಆ ಬೆಳಕಿನ ಕಿರಣ ಪ್ರಜ್ವಲಿಸುವಂತೆ ಮಾಡಿ ನಾಡಿಗೆ ಒಬ್ಬ ಮಹಾನ್ ಕವಿ ಮತ್ತು ಸಂತನ್ನನ್ನು ನೀಡಿದರು ಗುರು ಗೋವಿಂದ ಬಟ್ಟರು , ಗುರುಗಳ ಕುರಿತು ಶರೀಪರು ಈ ರೀತಿ ವರ್ಣಿಸಿದ್ದಾರೆ . -ಸದ್ಗುರು ನಿನ್ನ ಮಾಯಕ್ಕೆ ಮರುಳಾದೇನೊ , ಕರ ಪಿಡಿದು ಎನ್ನ ಕರಣದೊಳಗೆ ಮೊದಲು ವರ ಮಂತ್ರ ಬೋಧಿಸಿ ಕರವಿಟ್ಟು ಶಿರದೊಳು , ಗುರುವರ ಗೋವಿಂದ ಪರಮ ಗಾರುಡಿಗ ನೀ ನಿರುತಿಹ ತಿಳಿಯದು ನರರಿಗೆ ಪರಿಯಿದು . ಇಂದು ಕೂಡಾ ಅದೆಷ್ಟೋ ಶಿಕ್ಷಕರು ವಿದ್ಯಾವಂತ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ತಮ್ಮದೇ ಸ್ವಂತ ಖರ್ಚಿನಲ್ಲಿ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಸಮಾಜದಲ್ಲಿ “ ಉನ್ನತ ಹುದ್ದೆ ಮತ್ತು ಒಳ್ಳೆಯ ಸ್ಥಾನಮಾನಗಳಿಸಲು ಕಾರಣಿಕರ್ತರಾಗಿದ್ದಾರೆ . . ಸರ್ವಜ್ಞ ಒಂದು ಕಡೆ , ಗುರು – ಶಿಷ್ಯರ ಸಂಬಂಧ ಕುರಿತು ಈ ರೀತಿ ಹೇಳಿದ್ದಾರೆ ಬಂಧುಗಳು ಬಂದುಂಡು ಹೋಗುವರು ಬಂಧನವ ಕಳೆಯುವರೆ ಗುರುವಿಗಿಂತ ಬಂಧವುಂಟೆ ಸರ್ವಜ್ಞ * ಗು ಅಂದರೆ ಆಹಾನ ರು ಅಂದರೆ ಕಳೆಯುವವನು ಗುರು ಎಂದರೆ ಅಜ್ಞಾನವನ್ನು ಕಳೆಯುವವನು ಎಂದು ಅರ್ಥ . ನಮಗೆ ಶಿಕ್ಷಣವನ್ನು ನೀಡಿದವರು ಮಾತ್ರವೇ ಗುರುಗಳಾಗುವದಿಲ್ಲ . ನಮ್ಮ ಜೀವನದುದ್ದಕ್ಕೂ ನಮಗೆ ಜೀವನದ ಪ್ರತಿ ಗಳಿಗೆಯಲ್ಲಿಯೂ ಜೀವನದ ಜವಾಬ್ದಾರಿಯನ್ನು ಅರಿವನ್ನು , ಮೌಲ್ಯಗಳನ್ನು , ತಿಳುವಳಕೆಗಳನ್ನು ನೀಡಿದ ತಂದೆ – ತಾಯಿ , ಬಂದು ಬಳಗ , ಅಕ್ಕ – ಅಣ್ಣ ಎಲ್ಲರೂ ಗುರುಗಳೇ , ಗುರುವಿನಿಂದ ಬದುಕಿನಲ್ಲಿ ಆಜ್ಞಾನ ಕಳೆದು ಬೆಳಕಿನ ದಾರಿ , ದಾರಿಯಲ್ಲಿ ಸಾಗುತ ಬದುಕಿನ ಗುರಿ ತಲವುಬೇಕೆಂಬ ಮಹತ್ಕಾಂಕ್ಷೆ ಮಹತ್ಕಾಂಕ್ಷೆಯಿಂದ ಯಶಸ್ಸು , ಯಶಸ್ಸಿನಿಂದ ಸಮಾಜದಲ್ಲಿ ಕೀರ್ತಿ , ಸ್ಥಾನಮಾನಸಿಗುವುದು , ಹಾಗಾಗಿಯೇ ಗುರುವನ್ನು ದೇವರ ಸ್ಥಾನದಲ್ಲಿ ಕಾಣುವದು , ಗುರು ಬ್ರಹ್ಮಾ ಗುರುವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ಶ್ರೀ ಗುರುವೇ ನಮಃ ॥ ಎಲ್ಲರಿಗೂ ಗುರು ಪೂರ್ಣಿಮಾದ ಶುಭಾಶಯಗಳು.
ಭೂಮಿಕಾ ರಂಗಪ್ಪ ದಾಸರಡ್ಡಿ , ಬಿದರಿ