ಗುರುಪೂರ್ಣಿಮೆ.

ಆಷಾಡ ಮಾಸದ ಹುಣ್ಣಿಮ ಯನ್ನು ಗುರು ಪೂರ್ಣಿಮೆಯೆಂದು ಆಚರಿಸಲಾಗುತ್ತದೆ . ಆದಿ ಗುರು ಎಂದು ಪೂಜಿಸಲ್ಪಡುವ , ವೇದಗಳ ಕರ್ತೃ ಮತ್ತು ಮಹಾಭಾರತದ ಲಿಪಿಕಾರ , ಮಹಾನ್ ಮಹರ್ಷಿ ವ್ಯಾಸರ ಹುಟ್ಟು ಹಬ್ಬ ಇಂದು ಅವರ ನೆನಪಿಗಾಗಿ ಗುರು ಗುರುಪೂರ್ಣಿಮೆ ಹಿರಿಮೆ ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಆಚರಿಸಲಾಗುತ್ತದೆ . ಯೋಗ ಪರಂಪತೆಯಲ್ಲಿ ಶಿವ ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರದ ದಿನ ಇಂದೆ ಎಂದು ಹೇಳಲಾಗುತ್ತದೆ . ಗೌತಮ ಬುದ್ಧ ಇಂದು ಸಾರಾನಾಥದಲ್ಲಿ ತನ್ನ ಪ್ರಥಮ ಉಪದೇಶ ನೀಡಿದನು . ಧಾರ್ಮಿಕವಾಗಿ ಅಲ್ಲದೆ ಶೈಕ್ಷಣಿಕವಾಗಿ ಗುರು ಪೂರ್ಣಿಮೆ ಮಹತ್ವ ಪಡೆದಿದೆ . ಇಂದು ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಕೃತಜ್ಞತೆ ಹೇಳುವ ಮೂಲಕ ವಂದನೆ ಸಲ್ಲಿಸುತ್ತಾರೆ . ರಾಮಕೃಷ್ಣ ಪರಮಹಂಸ ಸ್ವಾಮಿ ವಿವೇಕಾನಂದ , ಗುರು ಗೋವಿಂದ ಭಟ್ – ಶಿಶುನಾಳ ಶರೀಫ ರಂತಹ ಗುರು ಶಿಷ್ಯ ಪರಂಪರೆಯಲ್ಲಿ ಅವಿನಾಭಾವ ಸಂಬಂಧವಿದೆ . ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರ ಗುರು ಶಿಷ್ಯ ಸಂಬಂಧ ಗುರು ಪೂರ್ಣಿಮೆ ಹಿರಿಮೆ ಎಂತಹದ್ದು ಎನ್ನುವುದನ್ನು ಸ್ವತಃ ವಿವೇಕಾನಂದರೆ ತಮ್ಮ ಪ್ರತಿ ಭಾಷಣದಲ್ಲಿಯೂ ನಾನು ಎದ್ದರೂ ಆದು ಗುರುವಿನ ಆಶಿರ್ವಾದದ ಫಲ ಎಂದು ಹೇಳಿಕೊಂಡಿದ್ದಾರೆ . ಮೊದಮೊದಲು ಪರಮಹಂಸರು ಶಿಷ್ಯನನ್ನು ಒಪ್ಪಿಕೊಳ್ಳಲಿಲ್ಲ . ಯಾವಾಗ ಗುರುವಿನ ಎಲ್ಲ ಸವಾಲುಗಳನ್ನು ಸ್ವಾಮಿ ವಿವೇಕಾನಂದರೂ ಎದುರಿಸಿ ನಿಲ್ಲುತ್ತಾರೊ ಆಗ ಶಿಷ್ಯನಾಗಿ ಸ್ವೀಕರಿಸಿದವರು ಪರಮಹಂಸರು ಶಿಷ್ಯನನ್ನು ಎಂದಿಗೂ ಕೈ ಬಿಡಲಿಲ್ಲ . ಅದೇ ರೀತಿ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಬಟ್ಟ ಸಂಬಂಧ ಕೋಮು ಸೌಹರ್ದತೆಗೆ ಸಾಕ್ಷಿಯಾಗಿದೆ . ಬ್ರಾಹ್ಮಣರಾದ ಗೋವಿಂದ ಭಟ್ಟರು ಶರೀಫ ಮುಸ್ಲಿಂನಾದರೂ ಮಗನಂತೆ ತಮ್ಮ ಮನೆಯಲ್ಲಿ ಇರಿಸಿಕೊಂಡು ಶಿಕ್ಷಣವನ್ನ ಧಾರೆ ಎರೆದರು – ಇಲ್ಲಿ ಜಾತಿ , ಕುಲಗೋತ್ರಗಳಾವವು . ಅವರ ಗುರು- ಶಿಷ್ಯ ಬಾಂಧವ್ಯಕ್ಕೆ ಅಡ್ಡಿಯಾಗಲಿಲ್ಲ ಗುರುವಿಗೆ ಶಿಷ್ಯನಲ್ಲಿ ಕಾಣಿಸಿದ್ದು ಕೇವಲ ಜ್ಞಾನದ ಬೆಳಕಿನ ಕಿರಣ , ಆ ಬೆಳಕಿನ ಕಿರಣ ಪ್ರಜ್ವಲಿಸುವಂತೆ ಮಾಡಿ ನಾಡಿಗೆ ಒಬ್ಬ ಮಹಾನ್ ಕವಿ ಮತ್ತು ಸಂತನ್ನನ್ನು ನೀಡಿದರು ಗುರು ಗೋವಿಂದ ಬಟ್ಟರು , ಗುರುಗಳ ಕುರಿತು ಶರೀಪರು ಈ ರೀತಿ ವರ್ಣಿಸಿದ್ದಾರೆ . -ಸದ್ಗುರು ನಿನ್ನ ಮಾಯಕ್ಕೆ ಮರುಳಾದೇನೊ , ಕರ ಪಿಡಿದು ಎನ್ನ ಕರಣದೊಳಗೆ ಮೊದಲು ವರ ಮಂತ್ರ ಬೋಧಿಸಿ ಕರವಿಟ್ಟು ಶಿರದೊಳು , ಗುರುವರ ಗೋವಿಂದ ಪರಮ ಗಾರುಡಿಗ ನೀ ನಿರುತಿಹ ತಿಳಿಯದು ನರರಿಗೆ ಪರಿಯಿದು . ಇಂದು ಕೂಡಾ ಅದೆಷ್ಟೋ ಶಿಕ್ಷಕರು ವಿದ್ಯಾವಂತ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ತಮ್ಮದೇ ಸ್ವಂತ ಖರ್ಚಿನಲ್ಲಿ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಸಮಾಜದಲ್ಲಿ “ ಉನ್ನತ ಹುದ್ದೆ ಮತ್ತು ಒಳ್ಳೆಯ ಸ್ಥಾನಮಾನಗಳಿಸಲು ಕಾರಣಿಕರ್ತರಾಗಿದ್ದಾರೆ . . ಸರ್ವಜ್ಞ ಒಂದು ಕಡೆ , ಗುರು – ಶಿಷ್ಯರ ಸಂಬಂಧ ಕುರಿತು ಈ ರೀತಿ ಹೇಳಿದ್ದಾರೆ ಬಂಧುಗಳು ಬಂದುಂಡು ಹೋಗುವರು ಬಂಧನವ ಕಳೆಯುವರೆ ಗುರುವಿಗಿಂತ ಬಂಧವುಂಟೆ ಸರ್ವಜ್ಞ * ಗು ಅಂದರೆ ಆಹಾನ ರು ಅಂದರೆ ಕಳೆಯುವವನು ಗುರು ಎಂದರೆ ಅಜ್ಞಾನವನ್ನು ಕಳೆಯುವವನು ಎಂದು ಅರ್ಥ . ನಮಗೆ ಶಿಕ್ಷಣವನ್ನು ನೀಡಿದವರು ಮಾತ್ರವೇ ಗುರುಗಳಾಗುವದಿಲ್ಲ . ನಮ್ಮ ಜೀವನದುದ್ದಕ್ಕೂ ನಮಗೆ ಜೀವನದ ಪ್ರತಿ ಗಳಿಗೆಯಲ್ಲಿಯೂ ಜೀವನದ ಜವಾಬ್ದಾರಿಯನ್ನು ಅರಿವನ್ನು , ಮೌಲ್ಯಗಳನ್ನು , ತಿಳುವಳಕೆಗಳನ್ನು ನೀಡಿದ ತಂದೆ – ತಾಯಿ , ಬಂದು ಬಳಗ , ಅಕ್ಕ – ಅಣ್ಣ ಎಲ್ಲರೂ ಗುರುಗಳೇ , ಗುರುವಿನಿಂದ ಬದುಕಿನಲ್ಲಿ ಆಜ್ಞಾನ ಕಳೆದು ಬೆಳಕಿನ ದಾರಿ , ದಾರಿಯಲ್ಲಿ ಸಾಗುತ ಬದುಕಿನ ಗುರಿ ತಲವುಬೇಕೆಂಬ ಮಹತ್ಕಾಂಕ್ಷೆ ಮಹತ್ಕಾಂಕ್ಷೆಯಿಂದ ಯಶಸ್ಸು , ಯಶಸ್ಸಿನಿಂದ ಸಮಾಜದಲ್ಲಿ ಕೀರ್ತಿ , ಸ್ಥಾನಮಾನಸಿಗುವುದು , ಹಾಗಾಗಿಯೇ ಗುರುವನ್ನು ದೇವರ ಸ್ಥಾನದಲ್ಲಿ ಕಾಣುವದು , ಗುರು ಬ್ರಹ್ಮಾ ಗುರುವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ಶ್ರೀ ಗುರುವೇ ನಮಃ ॥ ಎಲ್ಲರಿಗೂ ಗುರು ಪೂರ್ಣಿಮಾದ ಶುಭಾಶಯಗಳು.

ಭೂಮಿಕಾ ರಂಗಪ್ಪ ದಾಸರಡ್ಡಿ , ಬಿದರಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button