“ಕರುನಾಡ ಅಕ್ಷರ ಜಾತ್ರೆ”ಸಂಭ್ರಮದಲ್ಲಿ ರಾಜ್ಯ ಮಟ್ಟದ”ಕರುನಾಡು ಕವಿ”ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೂಡಲಸಂಗಮ ಜುಲೈ.2

ಕೂಡಲಸಂಗಮದಲ್ಲಿ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ ಹಾಗೂ ಮುನ್ನುಡಿ ಟೂರ್ಸ್ ಸಹಯೋಗದಲ್ಲಿ ಕರುನಾಡ ಅಕ್ಷರ ಜಾತ್ರೆ 2023. ರಾಜ್ಯಮಟ್ಟದ ಪುರಸ್ಕಾರ ಸಮಾರಂಭ ಕವಿಗೋಷ್ಠಿ ಹಾಗೂ ವಿವಿದ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕವಿಯಾದ ಶ್ರೀ ಮುತ್ತು ವಡ್ಡರವರಿಗೆ ಕರುನಾಡ ಕವಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ನಿಸರ್ಗ ಸಂಗೀತ ಶಾಲೆಯ ಸಂಸ್ಥಾಪಕರಾದ ಹನುಮಸಾಗರದ ಶ್ರೀಮಲ್ಲಯ್ಯ ಕೋಮಾರಿಯವರು ವಹಿಸಿಕೊಂಡಿದ್ದರು. ಸಮಾರಂಭದ ಉದ್ಘಾಟನೆಯನ್ನು ಶ್ರೀಮತಿ ಜಾನಕಿದೇವಿ ಖ್ಯಾತ ಸಾಹಿತಿಗಳು ಬೆಳಗಾವಿ ಇವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿರುವ ಜಗದೀಶ್ ಎಸ್ ಕಾಬನೆ ಹಾಗೂ ಯಶವಂತಪುರ ಅಬಕಾರಿ ಡಿವೈಎಸ್ಪಿ ಆಗಿರುವ ಶಿವಹರಳಯ್ಯರವರು ಮತ್ತು ಹಿರೇಮಾಗಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿರುವ ಶ್ರೀ ಪ್ರವೀಣ್ ವಾಲಿಕಾರ ಅವರು ವಹಿಸಿಕೊಂಡಿದ್ದರು. ಕರುನಾಡ ಅಕ್ಷರ ಜಾತ್ರೆ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಕರುನಾಡ ಕವಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ಜೊತೆಗೆ ನಾಡಿನ ನಾನಾ ವಿಭಾಗದಿಂದ ಬಂದಂತಹ ಹಲವಾರು ಕವಿಗಳಿಂದ ಕವಿಗೋಷ್ಠಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮುತ್ತು ವಡ್ಡರ ನೆರವೇರಿಸಿದರು ಹಾಗೂ ಜಗದೀಶ್ ಗಂಜಿ ಅವರು ಸ್ವಾಗತ ಕೋರಿದರು. ವಂದನಾರ್ಪಣೆಯನ್ನ ಕುಮಾರಿ ಜ್ಯೋತಿ ಆನಂದ ಚಂದುಕರ ನೆರವೇರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button