ಕೂಡ್ಲಿಗಿ:ರದ್ದಿ ಪೇಪರ್ ಅಂಗಡಿನಾ? ಸರ್ಕಾರಿ ಕಛೇರಿನಾ? ದುಸ್ಥಿತಿಯಲ್ಲಿ ಕಾರ್ಮಿಕ ನಿರೀಕ್ಷಕರ ಕಛೇರಿ.
ಕೂಡ್ಲಿಗಿ ಜುಲೈ.12

ವಿಜಯನಗರ ಜಿಲ್ಲೆಯ ಕೂಡ್ಲಿಗಿ:ಪಟ್ಟಣದ ಖಾಸಗೀ ವಾಣ್ಯಜ್ಯ ಮಳಗಿಯೊಂದರಲ್ಲಿರುವ, ತಾಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯ ದುಸ್ಥಿತಿ ನಿರೀಕ್ಷೆಗೂ ಮೀರಿದ ದುಸ್ಥಿತಿಯಲ್ಲಿದೆ. ಕಛೇರಿ ಫಲಕ ಸಂಪೂರ್ಣ ಅರ್ಧಬಂರ್ಧ ಅಳಸಿ ಹೋಗಿದ್ದು, ಅದು ಅವರ ಕಾರ್ಯ ನಿಷ್ಠತೆ ಹಾಗೂ ಧಕ್ಷತೆಯನ್ನು ಪ್ರತಿ ಬಿಂಬಿಸುವಂತಿದೆ. ಗ್ರಾಮೀಣ ಭಾಗದ ಮುಗ್ದ ಕಾರ್ಮಿಕರು ನೊಂದಣಿಗೆಂದು ಪಟ್ಟಣಕ್ಕೆ ಬಂದು, ಕಾರ್ಮಿಕ ನಿರೀಕ್ಷಕರ ಕಛೇರಿಯನ್ನು ಪತ್ತೆ ಹಚ್ಚಲು. ತಾವು ಒಂದು ದಿನವನ್ನು ಮೀಸಲಿಡಲೇ ಬೇಕಾಗುತ್ತದೆ, ಅಂತಹ ಅನಾಮಧೇಯ ಸ್ಥಳದಲ್ಲಿ ಕೂಡ್ಲಿಗಿ ತಾಲೂಕು ಕಾರ್ಮಿಕ ನಿರೀಕ್ಷಕರ ಕಛೇರಿ, ಇದೆ ಎಂದು ನೊಂದ ಕಾರ್ಮಿಕರು ಹಾಗೂ ಕಾರ್ಮಿಕ ಮುಖಂಡರು ದೂರಿದ್ದಾರೆ. *ಗುಬ್ಬಚ್ಚಿ ಗೂಡು.!?*ಪಟ್ಟಣದ ಹಳೇ ಸಂತೆ ಮೈದಾನ ಅಂದರೆ ಪಟ್ಟಣದ ಹಳೇ ಸಾರ್ವಜನಿಕ ಆಸ್ಪತ್ರೆಯ ಹತ್ತಿರ, ಖಾಸಗೀ ವಾಣಿಜ್ಯ ಮಳಿಗೆಯ ಮೇಲ್ಮಹಡಿಯಲ್ಲಿ. ಅಂದಾಜು 10*10ವಿಸ್ತೀರ್ಣದ ಕಿರಿದಾದ ಗುಬ್ಬಚ್ಚಿ ಗೂಡಿನಂತಹ, ಅತ್ಯಂತ ಕಿರಿದಾದ ಬಾಡಿಗೆ ಮಳಿಗೆಯಲ್ಲಿ ತಾಲೂಕು ನಿರೀಕ್ಷಕರ ಕಛೇರಿ ಅನಿರೀಕ್ಷಿತ ದುಸ್ಥಿತಿಯಲ್ಲಿದೆ. ಇದು ಕಾರ್ಮಿಕ ನಿರೀಕ್ಷಕರು ಮಾತ್ರವಲ್ಲ, ಸರ್ಕಾರದ ಕಾರ್ಮಿಕ ಇಲಾಖೆಯು ಕಾರ್ಮಿಕರನ್ನು ಕಾಣುವ ನಿಕೃಷ್ಠ ನೀತಿಯನ್ನ ಪ್ರತಿನಿಧಿಸುವಂತಿದೆ.*ರದ್ಧೀ ಪೇಪರ್ ಅಂಗಡಿನಾ.!?*- ಕಛೇರಿಯನ್ನ ಕಂಡಾಕ್ಷಣ ಇದೇನು.!? ರದ್ದಿ ಕಾಗದ ಕೊಂಡುಕೊಳ್ಳೋ ಅಂಗಡಿನಾ.!? , ಅಥವಾ ರದ್ದಿ ಪೇಪರ್ ಮಾರುವ ಅಂಗಡಿನಾ!? ಎಂದು ಪ್ರೆಶ್ನೆ ಎಂತಹವರಲ್ಲಿಯೂ ಮೂಡದೇ ಇರದು. ಕೂಡ್ಲಿಗಿ ತಾಲೂಕಿನಲ್ಲಿ ವಿವಿದ ಕಾರ್ಮಿಕರು ಒಟ್ಟು ಹನ್ನೆರೆಡು ಸಾವಿರ ಸಂಖ್ಯೆಯಲ್ಲಿದ್ದು, ತಾಲೂಕಿನ ಕೇಂದ್ರದಲ್ಲಿರುವ ಕೇಂದ್ರ ಕೆಛೇರಿಯ ದುಸ್ಥಿತಿ ಕಂಡರೆ ಎಂತಹವರೂ ಕೂಡ ದಂಗಾದೇ ಇರಲಾರರು…ಥೇಟ್ ರದ್ದೀ ಪೇಪರ್ ನ ಗೂಡಂಗಡಿ ಯಂತಿರುವ ಕಛೇರಿ ಕಲ್ಪನೆಗೂ ಮೀರಿದ್ದಾಗಿದೆ, ಕಾರ್ಮಿಕರಿಗೆ ಕಛೇರಿಗೆ ಬರುವವರಿಗೆ ಮಾತ್ರವಲ್ಲ ಸ್ವತಃ ಕಾರ್ಮಿಕರು ಕೂಡಲೂ ಸಹ ಅಗತ್ಯ ಸ್ಥಳಾವಕಾಶವಿಲ್ಲ. ಕಾರ್ಮಿಕರ ಅಮೂಲ್ಯ ದಾಖಲುಗಳು ಕಛೇರಿಯ ಕಡತಗಳು ದಾಖಲುಗಳನ್ನು ಕಾಪಾಡಲು, ಅಗತ್ಯವಾದ ಕಪಾಟುಗಳ ವ್ಯವಸ್ಥೆ ಇಲ್ಲ ಕಾರಣ ಅವುಗಳನ್ನು ಇಡಲು ಸ್ಥಳವಿಲ್ಲ. ಕಾರ್ಮಿಕ ನಿರೀಕ್ಷಕರಿಗೆ ಕೂಡಲು ಸಹ ಸಾಕಷ್ಟು ಸ್ಥಳವಿಲ್ಲ ಹಾಗೂ ಇತರೆ ಅಧಿಕಾರಿ ಸಿಬ್ಬಂದಿಯವರು , ಕೂಡಲು ಮಾತ್ರವಲ್ಲ ನಿಲ್ಲಲೂ ಸಹ ಜಾಗವಿಲ್ಲ. ಅನಿವಾರ್ಯವಾಗಿ ಅವರೂ ಕೂಡ ತಮ್ಮ ಕಛೇರಿಯ ಅಂಗಳದಲ್ಲಿಯೇ ಕೂಡಬೇಕಿದೆ,

ಇನ್ನು ನೆರವನ್ನು ಕೋರಿ ತಮ್ಮತ್ತ ಬರುವ ಕಾರ್ಮಿಕರು. ತಮ್ಮ ಕೆಲಸ ಕಾರ್ಯ ಆಗೋವವರೆಗೂ, ಕಚೇರಿಯ ಕಿಕ್ಕಿರಿದಾದ ಅಂಗಳದಲ್ಲಿ ನಿಂತು ಕೊಂಡೇ ಇರಬೇಕು. ಇದು ಕೂಡ್ಲಿಗಿ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಛೇರಿಯ, ಅನಿರೀಕ್ಷಿತ ದುಸ್ಥಿತಿಯ ನೈಜ ಚಿತ್ರಣವಾಗಿದೆ. ಸಂಬಂಧಿಸಿದಂತೆ ಉಪಸ್ಥಿತರಿದ್ದ ಇಲಾಖೆಯ ಸಿಬ್ಬಂದಿ ಚಂದ್ರಕಾಂತ್ ರನ್ನು ವಿಚಾರಿಸಲಾಗಿ, ತಾಲೂಕು ಸೌಧದಲ್ಲಿ ಕೊಠಡಿಯನ್ನು ನಿಯೋಜಿಸುವಂತೆ ಮನವಿ ಮಾಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗೆ ತಮ್ಮ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದರು, ಅವರೆಲ್ಲಿ ಗೈರು ಇದ್ದಾರಲ್ಲ.!? ಅಂತಾ ವಿಚಾರಿಸಿದರೆ ಅವರು ಇಂದು ಬಂದಿಲ್ಲ ಎಂಬ ಸಬೂಬನ್ನು ಸಿಬ್ಬಂದಿ ನೀಡಿದರು. ಕಾರ್ಮಿಕ ನಿರೀಕ್ಷರಾಗಿ ನಿಯೋಜನೆಗೊಂಡು ಬಾಗಲಕೋಟೆ ಜಿಲ್ಲೆಯಿಂದ, ಇಲ್ಲಿಗೆ ನಿಯೋಜಿತರಾಗಿರುವ ಅಧಿಕಾರಿ ಕಛೇರಿಯಲ್ಲಿ ಸದಾ ಗೈರಾಗಿರುತ್ತಾರೆ. ಅವರ ಅನುಪಸ್ಥಿತಿಯಲ್ಲಿ ಉಳಿದ ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರು, ಕಛೇರಿಗೆ ಬರುವ ಕಾರ್ಮಿಕರಿಗೆ ಹಾಗೂ ಕಾರ್ಮಿಕ ಮುಖಂಡರಿಗೆ ಲಭ್ಯವಾಗುತ್ತಾರೆಂಬ ದೂರು ಕಾರ್ಮಿಕ ವಲಯದಿಂದ ಮಾರ್ಧನಿಸುತ್ತಿದೆ. ಒಟ್ಟಾರೆಯಾಗಿ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಛೇರಿ ಅನಿರೀಕ್ಷಿತ ದುಸ್ಥಿತಿಯಲ್ಲಿದ್ದು, ನಿರೀಕ್ಷಣಾಧಿಕಾರಿ ಬೇಕಾ ಬಿಟ್ಟಿಯಾಗಿ ಕಛೇರಿಯಲ್ಲಿ ಹಾಜರಿರುತ್ತಾರೆಂಬ ಸಾರ್ವಜನಿಕರ ಗಂಭೀರ ಆಪಾದನೆಗಳ ದೂರಿದೆ. ಅವರು ಪ್ರತಿ ವಾರದಲ್ಲಿ ಬೆರೆಳೆಣಿಕೆ ದಿನಗಳಲ್ಲಿ ಮಾತ್ರ, ಕಛೇರಿಯಲ್ಲಿ ಲಭ್ಯವಾಗುತ್ತಾರೆಂದು ತಮ್ಮಲ್ಲಿ ಕಾರ್ಮಿಕರು ದೂರಿದ್ದಾರೆಂದು ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾರ್ಮಿಕ ಮುಖಂಡರು ಸಂಬಂಧಿಸಿದಂತೆ ಮಾತನಾಡಿದ್ದು, ಅತೀ ಶೀಘ್ರವೇ ಕಛೇರಿಯನ್ನು ತಾಲೂಕು ಆಡಳಿತಕ್ಕೆ ಸ್ಥಳಾಂತರಿಸಬೇಕಿದೆ. ಅದು ನೆಲ ಮಟ್ಟದ ಕೊಠಡಿಯಲ್ಲಿರಬೇಕು, ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಉನ್ನತಾಧಿಕಾರಿಗಳು ಮತ್ತು ತಹಶಿಲ್ದಾರಾರು ಸೂಕ್ತ ಕ್ರಮ ಜರುಗಿಸಬೇಕಿದೆ. ನಿರ್ಲಕ್ಷ್ಯ ಧೊರಣೆ ತೋರಿದ್ದಲ್ಲಿ , ಕಾರ್ಮಿಕ ನಿರೀಕ್ಷಕರ ಕಛೇರಿ ಸ್ಥಳಾಂತರಕ್ಕೆ ಒತ್ತಾಯಿಸಿ. ತಹಶಿಲ್ದಾರರ ಕಛೇರಿಯ ಆವರಣದಲ್ಲಿ, ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ. ಜಿ
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ