ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ಪ್ರತಿಭಟನೆ.
ಕೂಡ್ಲಿಗಿ ಜುಲೈ.13
ರಾಜ್ಯದಲ್ಲಿ ಹಿಂದೂ ಮುಖಂಡರ ಹತ್ಯೆ ಖಂಡಿಸಿ ಖಾನಹೊಸಹಳ್ಳಿ ಯುವ ಬ್ರಿಗೇಡ್ ಹಾಗೂ ಸಮಸ್ತ ಹಿಂದೂ ಸಂಘಟನೆಯ ಕಾರ್ಯಕರ್ತರ ವತಿಯಿಂದ ಬುಧವಾರ ತಾಲೂಕಿನ ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಪ್ರತಿಭಟನೆ ನಡೆಸಿ, ಉಪ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿ ಜಿಲ್ಲೆಯಲ್ಲಿ ನಡೆದ ಜೈನಮುನಿಗಳ ಅಮಾನುಷ ಹತ್ಯೆ, ಮೈಸೂರು ಜಿಲ್ಲೆಯಲ್ಲಿ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ನಾಯಕ ಹತ್ಯೆ ಪ್ರಕರಣಗಳನ್ನು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹನುಮಜ್ಜ ನಾಗೇಶ್, ಕುಲಮೆಹಟ್ಟಿ ವೆಂಕಟೇಶ್, ವೀರೇಶ್ ಕಿಟ್ಟಪ್ಪನವರ್, ಫೋಟೋ ನಾಗರಾಜ್, ವಿಶ್ವನಾಥ್, ಸಿದ್ದಲಿಂಗಪ್ಪ, ನಿಂಗಣ್ಣ, ಗಾಡಿ ರಮೇಶ್, ಮಾಳೇಶ್, ವಿನೋದ್ ಕಾಮ ಶೆಟ್ಟಿ, ಯೋಗೀಶ್ ಕಾಮ ಶೆಟ್ಟಿ, ಬಸವರಾಜ್, ಮಂಜುನಾಥ್ ಗೌಡ, ನಾಗರಾಜ್ ಎಸ್, ಶ್ರೀಧರ್ ಮೆಡಿಕಲ್, ಕೆಂಚಮಲ್ಲನಹಳ್ಳಿ ಸುರೇಶ್, ಶ್ರೀಕಾಂತ್, ಗುರುಮೂರ್ತಿ ಬೆಳಕಟ್ಟೆ, ಮಂಜುನಾಥ್. ಹಿರೆಕುಂಬಳಗುಂಟೆ ನಾಗರಾಜ್ ಗೌಡ, ರಾಕೇಶ್, ವಿ ಶರತ್, ಕೆ ಸುಭಾಷ್ ಚಂದ್ರ ಸೇರಿದಂತೆ ಯುವಕರು, ಹಿರಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ