ಮೊಳಕಾಲ್ಮೂರು ತಾಲೂಕಿನ ರಾಜ್ಯ ರೈತ ಸಂಘದ ರೈತ ಮುಖಂಡರಿಂದ ರೇಷ್ಮೆ ಬೆಲೆ ಕುಸಿತ ಆಗಿರುವುದರಿಂದ ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಮೊಳಕಾಲ್ಮೂರು ಜುಲೈ.13

ಕರ್ನಾಟಕ ರಾಜ್ಯ ರೈತ ಸಂಘ ಚಿತ್ರದುರ್ಗ ಜಿಲ್ಲೆ ರೇಷ್ಮೆ ಬೆಳೆಗಾರರ ಸಂಘ ರೇಷ್ಮೆ ಗೂಡಿನ ಬೆಲೆ ಕುಸಿತ ಆಗಿರುವ ಬಗ್ಗೆ ಪ್ರತಿಭಟನೆ ದಿನಾಂಕ 17.07.2023 ಸೋಮವಾರ ಸಮಯ ಬೆಳಗ್ಗೆ 11 ಗಂಟೆಗೆ ಪ್ರವಾಸಿ ಮಂದಿರದಿಂದ ಜಿಲ್ಲಾ ಕಛೇರಿ ಅವರಿಗೆ ರೈತ ಬಂಧುಗಳು ಭಾಗಿಯಾಗಲಿದ್ದಾರೆ ಮತ್ತು ಇತ್ತೀಚಿನ ವರ್ಷಗಳಲ್ಲಿ ನಮ್ಮ ಜಿಲ್ಲೆಯಲ್ಲಿ ವ್ಯಾಪಕವಾಗಿ ರೇಷ್ಮೆ ಕೃಷಿಯನ್ನು ಕೈಗೊಂಡಿದ್ದು ಇದು ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದು ಬಾಳ ಜೋಪಾನವಾಗಿ ವೈಜ್ಞಾನಿಕ ಕ್ರಮ ಅನುಸರಿಸಿ ಬೆಳೆ ಬೆಳೆಯಬೇಕಾಗಿರುತ್ತದೆ ಇದುವರೆಗೂ ಬಯೋಟಿನ್ ತಳಿಯ ಬೆಳಗೆ ಕೆಜಿ ಒಂದಕ್ಕೆ ರೂ 8 ನೂರಕ್ಕೆ ಅದಕ್ಕೆ ಬೆಲೆ ಇತ್ತು ಕೇಂದ್ರ ಸರ್ಕಾರ ಇತ್ತೀಚಿನ ಬೆಳವಣಿಗೆಯಿಂದಾಗಿ ಚೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ನೂಲು ಆಮದು ಮಾಡಿಕೊಂಡಿರುವುದರಿಂದ ಬೆಲೆ ಬಿದ್ದು ಹೋಗಿದ್ದು ಸ್ಥಳೀಯ ರೀಲರುಗಳು ಗೂಡು ಖರೀದಿ ಹೆಚ್ಚಿನ ಬೆಲೆ ನೀಡುತ್ತಿಲ್ಲ ಹೀಗಾಗಿ ರೇಷ್ಮೆ ಬೆಳೆಗಾರರು ಕಂಗಾಲು ಆಗಿದ್ದು ಉತ್ಪಾದನಾ ವೆಚ್ಚ ಅಧಿಕವಾದ ಕಾರಣ ರೇಷ್ಮೆ ಬೆಳೆಯನ್ನು ಕೈ ಬಿಡುವ ಪರಿಸ್ಥಿತಿ ಉಂಟಾಗಿರುತ್ತದೆ ಆದ್ದರಿಂದ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಕೆಳಗಿನ ಒತ್ತಾಯಗಳನ್ನು ಈಡೇರಿಸ ಬೇಕಾಗಿರುತ್ತದೆ ಚಾಕಿ ಉಳಿವಿನ ದರ ಏರಿಕೆಯಾಗಿದ್ದು.

ಚಾಕಿ ದರ ಕಡಿಮೆಗೊಳಿಸಲು ರೈತರಿಗೆ ಸಬ್ಸಿಡಿ ದರದಲ್ಲಿ ಚಾಕಿ ಹುಳುಗಳನ್ನು ವಿತರಿಸಬೇಕು ಚಾಕಿ ಕೇಂದ್ರಗಳ ಗುಣಮಟ್ಟ ರಕ್ಷಣೆಗೆ ರೇಷ್ಮೆ ಇಲಾಖೆಯಿಂದ ನಿಗಾ ವಹಿಸುವ ಕೆಲಸ ಆಗಬೇಕು ಮುಂಚೆ ರೇಷ್ಮೆ ಗೂಡಿಗೆ ಕೆಜಿ ಒಂದಕ್ಕೆ ರೂ.50 ರೂ ಪ್ರೋತ್ಸಾಹ ಧನ ಇತ್ತು ಇದನ್ನು ನಿಲ್ಲಿಸಲಾಗಿದ್ದು ಪುನಾರಂಬಿಸಿ ಕೆ ಜಿ ಒಂದಕ್ಕೆ 200 ರೂ ನಿಗದಿಪಡಿಸಬೇಕು ರೇಷ್ಮೆ ಗೂಡಿನ ಸಾಗಾಣಿಕೆಯನ್ನು ವೆಚ್ಚ ಬರಸಬೇಕು ಎಂದು ರೈತ ಸಂಘದ ಮುಖಂಡರುಗಳು ಹೆಚ್ಚಿನ ಜನಸಂಖ್ಯೆಯಲ್ಲಿ ರೇಷ್ಮೆ ಬೆಳೆಗಾರರ ರೈತರು ಆಗಮಿಸಬೇಕಾಗಿ ಬೇಡರಹಳ್ಳಿ ಬಸವ ರೆಡ್ಡಿ ರಾಜ್ಯ ಉಪಾಧ್ಯಕ್ಷರು ಬಸ್ದಳ್ಳಿ ಸುರೇಶ್ ಬಾಬು ಜಿಲ್ಲಾಧ್ಯಕ್ಷರು ಕೆ ಪಿ ಬೂತಯ್ಯ ರಾಜ ಉಪಾಧ್ಯಕ್ಷರು ಟೀ ಸುಲೇನೂರು ಎಮ್ ಶಂಕ್ರಪ್ಪ ರಾಜ್ಯ ಪ್ರಧಾನ ಕಾರ್ಯದರ್ಶಿ ಮರಳಹಳ್ಳಿ ರವಿಕುಮಾರ್ ಮೊಳಕಾಲ್ಮೂರು ತಾಲೂಕ್ ಅಧ್ಯಕ್ಷರು ಹಾಗೂ ತಾಲೂಕಿನ ಎಲ್ಲಾ ರೈತ ಸಂಘದ ರೈತರು ಭಾಗವಹಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕೆಂದು ಸಲಹೆ ಕೊಟ್ಟರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button