ತಾಯಿ ಮಗು ಹಾರೈಕೆ.ಅಸಂಕ್ರಾಮಿಕ ರೋಗಗಳ ಬಗ್ಗೆ ಜಾಗೃತರಾಗಬೇಕು — ಜಿ. ಎಚ್.ಶ್ರೀನಿವಾಸ್

ತರೀಕೆರೆ ಜುಲೈ.15

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸರ್ವರಿಗೂ ಆರೋಗ್ಯ ಒದಗಿಸುವ ಯೋಜನೆ, ತರೀಕೆರೆ ಪಟ್ಟಣಕ್ಕೆ ಐದು ಉಪ ಕೇಂದ್ರಗಳು ಮಂಜೂರಾಗಿವೆ ಎಂದು ಶಾಸಕರಾದ ಜಿ ಎಚ್ ಶ್ರೀನಿವಾಸ್ ಹೇಳಿದರು.

ಅವರು ಪಟ್ಟಣದ ಖಾಜಿ ಬೀದಿಯಲ್ಲಿ ಇಂದು ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕಮಗಳೂರು.

ಇವರ ಸಹಯೋಗದೊಂದಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಉಪ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡುತ್ತಾ ಉಳಿದ 4 ಕೇಂದ್ರಗಳನ್ನು ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಜವಾಬ್ದಾರಿಯಿಂದ ಈ ತಿಂಗಳೊಳಗೆ ತೆರೆಯಬೇಕಾಗಿದೆ.

ಪ್ರತಿ ಮೂರರಿಂದ ಐದು ಸಾವಿರ ಜನರಿಗೊಂದು ಉಪ ಕೇಂದ್ರ ತೆರೆಯಬೇಕಾಗಿದ್ದು , ಕ್ಷೇತ್ರದ್ಯಾಂತ 60 ಉಪ ಕೇಂದ್ರಗಳಿದ್ದು ಅದರಲ್ಲಿ 47 ಉಪ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಈ ಕೇಂದ್ರಗಳಲ್ಲಿ ಬಿಪಿ ಶುಗರ್ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬೇಕು ತಾಯಿ ಮಗು ಆರೈಕೆ ಸಾಂಕ್ರಾಮಿಕ ಮತ್ತು ಅಸಂಂಕ್ರಾಮಿಕ ರೋಗಗಳ ಬಗ್ಗೆ ಜಾಗೃತವಾಗಬೇಕು ಎಂದು ಹೇಳಿದರು. ಮಾಜಿ ಸೈನಿಕ ಶಬ್ಬೀರ್ ಅಹ್ಮದ್ ದೇಶವನ್ನು ಕಾಪಾಡಿದಂತೆ ಈ ಪ್ರದೇಶದ ಜನರ ಆರೋಗ್ಯ ಕಾಪಾಡಲು ಸಹಕಾರ ನೀಡಿದ್ದಾರೆ.

ಇವರೊಂದಿಗೆ ಶರ್ಮತ್ತುಲ್ಲಾ ಖಾನ್ ರವರ ಸೇವೆಯನ್ನು ಲಾಗಿಸಬೇಕು ಎಂದು ಹೇಳಿದರು. ಮಾಜಿ ಸೈನಿಕ ಶಬ್ಬೀರ್ ಅಹ್ಮದ್ ಮತ್ತು ಶಾಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಅಹಮದ್ ಇಶಾನ್ ರವರನ್ನು ಸನ್ಮಾನಿಸಿದರು. ಪ್ರಾಸ್ತಾವಿಕ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಶೇಖರ್ ಉಪಕೇಂದ್ರಗಳಲ್ಲಿ 12 ವಿವಿಧ ರೀತಿಯ ಸೇವೆ ನೀಡಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ಕೇಂದ್ರಗಳನ್ನು ನಡೆಸಲಾಗುವುದು ಎಂದು ಹೇಳಿದರು.

ವೈದ್ಯಧಿಕಾರಿ ಡಾ. ದೇವರಾಜ್ ಮಾತನಾಡಿ ಓದು ಮುಗಿದ ನಂತರ ಇಲ್ಲಿಯೇ ಕೆಲಸ ಮಾಡಿ ಜನರ ಸೇವೆ ಮಾಡಬೇಕು ಎಂದು ಅಹ್ಮದ್ ಇಶಾನ್ ರವರಿಗೆ ತಿಳಿಹೇಳಿದರು. ಪುರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ದಾದಾಪೀರ್ ಮಾತನಾಡಿ ಈ ಉಪ ಕೇಂದ್ರದಲ್ಲಿ ನುರಿತ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಮಾಡಿಸಲಾಗುವುದು ಈ ಕೇಂದ್ರವು 17ನೇ ವಾರ್ಡಿಗೆ ಮಾತ್ರ ಸೀಮಿತವಾಗಿಲ್ಲ ಎಲ್ಲರಿಗಾಗಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ಕಮಲಾ ರಾಜೇಂದ್ರ, ಉಪಾಧ್ಯಕ್ಷರಾದ ರಿಹಾನ ಪರ್ವೀನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರಪ್ಪ, ಮಾಜಿ ಪುರಸಭಾ ಅಧ್ಯಕ್ಷರಾದ ಪ್ರಕಾಶವರ್ಮ, ಪುರಸಭಾ ಮುಖ್ಯ ಅಧಿಕಾರಿ ಪ್ರಶಾಂತ್, ಸದಸ್ಯರಾದ ಶಶಾಂಕ್, ಪಾರ್ವತಮ್ಮ ತಿಮ್ಮಯ್ಯ,ಪರಮೇಶ್, ಅಶೋಕ್ ಕುಮಾರ್, ರಂಗನಾಥ, ಮಾಜಿ ಸದಸ್ಯರಾದ ಪರ್ವೀನ್ ತಾಜ್, ಜಿಯಾವುಲ್ಲಾ, ಡಾ. ವರುಣ್ , ಆರೋಗ್ಯ ನಿರೀಕ್ಷಕರಾದ ಸಂಪತ್ ಕುಮಾರ್, ಆಶಾ ಕಾರ್ಯಕರ್ತೆ ಧನಲಕ್ಷ್ಮಿ, ಉಪಸ್ಥಿತರಿದ್ದು ಕವಿತಾ ಮತ್ತು ಸಂಗಡಿಗರು ಹಾಗೂ ಜಬಿವುಲ್ಲಾ ಖಾನ್ ಪ್ರಾರ್ಥಿಸಿ, ದಾದಾಪೀರ್ ಸ್ವಾಗತಿಸಿ, ಅನುಪಮಾ ನಿರೂಪಿಸಿ ವಂದಿಸಿದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button