ಪತ್ರಕರ್ತರ ಆಹ್ವಾನ ಪತ್ರಿಕೆ ಬಿಡುಗಡೆ.
ತರೀಕೆರೆ ಜುಲೈ.19
ತಾಲೂಕು ಪತ್ರಕರ್ತರ ಸಂಘದಿಂದ ದಿನಾಂಕ 24.-07.-2023 ರಂದು ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿರುವ ಪತ್ರಿಕ ದಿನಾಚರಣೆಯ ಆಹ್ವಾನ ಪತ್ರವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಧಿಕಾರಿಗಳಾದ ಡಾ. ದೇವರಾಜ್ ರವರಿಗೆ ಸಂಘದ ಅಧ್ಯಕ್ಷರಾದ ಬಿ ಕೃಷ್ಣ ನಾಯಕ್ ರವರು, ವಿದ್ಯುಕ್ತವಾಗಿ ಆಹ್ವಾನ ಪತ್ರ ಬಿಡುಗಡೆ ಮಾಡಿ ಆಹ್ವಾನಿಸಿದರು.

ಕಾರ್ಯಕ್ರಮವನ್ನು ಶಾಸಕರಾದ ಜಿಎಚ್ ಶ್ರೀನಿವಾಸ್ ಹಾಗೂ ಚಲನಚಿತ್ರ ನಟರಾದ ಧರ್ಮ ಕೀರ್ತಿರಾಜ್ ಉದ್ಘಾಟನೆ ಮಾಡಲಿದ್ದು, ಮಾಜಿ ಶಾಸಕರಾದ ಡಿ ಎಸ್ ಸುರೇಶ್ ರವರು ಡಿ ವಿ ಗುಂಡಪ್ಪ ನವರ ಭಾವಚಿತ್ರ ಅನಾವರಣ ಮಾಡಲಿದ್ದು, ಜಿಲ್ಲಾ ಅಧ್ಯಕ್ಷರಾದ ಜಿಎಂ ರಾಜಶೇಖರ್, ಹಿರಿಯ ಪತ್ರಕರ್ತರಾದ ಅನಂತ ನಾಡಿಗ್, ಕಾಂಗ್ರೆಸ್ ಮುಖಂಡರಾದ ಲೋಕೇಶಪ್ಪ ತಾಳಿಕಟ್ಟೆ, ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಕೆ ಆರ್ ಆನಂದಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ ಎಚ್ ಮಹೇಂದ್ರ, ಪುರಸಭಾ ಅಧ್ಯಕ್ಷರಾದ ಕಮಲಾ ರಾಜೇಂದ್ರ, ಮುಖಂಡರಾದ ರವಿಕಿಶೋರ್, ಪುರಸಭಾ ಮುಖ್ಯ ಅಧಿಕಾರಿಯದ ಪ್ರಶಾಂತ್ ರವರು ಉಪಸ್ಥಿತರಿದ್ದು, ಮಾಜಿ ಪುರಸಭಾ ಅಧ್ಯಕ್ಷರಾದ ಟಿ ಆರ್ ನಾಗರಾಜ್, ಬಿಜೆಪಿ ಮುಖಂಡರಾದ ಆರ್ ದೇವಾನಂದ, ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಧಿಕಾರಿಯಾದ ಡಾ. ಟಿ ಎಂ ದೇವರಾಜ್ , ಬಂಜಾರ ಸಂಘದ ಅಧ್ಯಕ್ಷರಾದ ಸತ್ಯಪ್ಪ, ಎಂ ಎ ರಿಯಾಜ್, ಮಾಜಿ ಸೈನಿಕ ಮಿಲಿಟರಿ ಶ್ರೀನಿವಾಸ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ ಕೃಷ್ಣ ನಾಯಕ್ ಪತ್ರಿಕೆಗೆ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ