ಬಿಜೆಪಿ ಪಕ್ಷದಿಂದ ಮಹಾ ಸಂಪರ್ಕ ಅಭಿಯಾನದ ಮೂಲಕ ಮನೆ ಮನೆಗೆ ಬಿಜೆಪಿ ಯೋಜನೆಗಳ ಕರಪತ್ರ ಹಂಚುವ ಅಭಿಯಾನ.

ಕೂಡ್ಲಿಗಿ ಜುಲೈ.20

ವಿಜಯ ನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಮಂಗಳವಾರ ರಂದು ಸಂಡೂರು ರಸ್ತೆಯಲ್ಲಿರುವ ಡಾಕ್ಟರ್ ಬಿಆರ್ ಅಂಬೇಡ್ಕರ್ ಭವನದಲ್ಲಿ ಸಭೆ ಮಾಡಲಾಗಿತ್ತು ನಂತರ ಸಭೆ ಮುಗಿಸಿಕೊಂಡು ಎಲ್ಲಾ ಕಾರ್ಯಕರ್ತರು ಬಿಜೆಪಿ ಪಕ್ಷದಿಂದ ಮಹಾ ಸಂಪರ್ಕ ಅಭಿಯಾನದ ಬಿಜೆಪಿ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಮಾಡಿರುವಂತಹ ನೂರಾರು ಯೋಜನೆಗಳನ್ನು ಜನರ ಮನೆಮನೆಗೂ ಬಿಜೆಪಿ ಕೇಂದ್ರ ಸರ್ಕಾರದ ಮಾನ್ಯ ನರೇಂದ್ರ ಮೋದಿ ಇವರು ಮಾಡಿರುವಂತಹ ಅಭಿವೃದ್ಧಿಯ ಕೆಲಸಗಳನ್ನು ಜನರಿಗೆ ಕರಪತ್ರಗಳನ್ನು ಕೊಡುವುದರೊಂದಿಗೆ ಅಭಿವೃದ್ಧಿಯ ಕೆಲಸಗಳನ್ನು ತಿಳಿಸುತ್ತಾ ಸರ್ಕಾರದ 9 ವರ್ಷದ ಸೇವೆ ಸುಶಾಸನ ಬಡವರ ಕಲ್ಯಾಣ ಮೂಲಕ ಮಹತ್ವದ ಮೈಲಿಗಲ್ಲುಗಳು ಜನರಿಗೆ ತಿಳಿಸುತ್ತ ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ಯವರು ಪ್ರಧಾನ ಮಂತ್ರಿ ಯಾಗುವುದಕ್ಕೆ ತಾಲೂಕಿನ ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ಗೆಲ್ಲಿಸುವುದಕ್ಕೆ ಹೆಚ್ಚಾಗಿ ಪಕ್ಷದ ಪರ ಕೆಲಸ ಮಾಡಬೇಕು ಎಂದು ವಿಜಯ ನಗರ ಜಿಲ್ಲಾ ಅಧ್ಯಕ್ಷರಾದ ಚೆನ್ನಬಸವನ ಗೌಡ ರವವರು ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಎಸ್ ಟಿ ಮೋರ್ಚದ ರಾಜ್ಯ ಕೋಶ್ಯಾಧ್ಯಕ್ಷರಾದ ಬಂಗಾರು ಹನುಮಂತು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸೂರ್ಯ ಪಾಪಣ್ಣ, ಮತ್ತೋರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ, ಮಂಡಲ ಅಧ್ಯಕ್ಷರಾದ ಚೆನ್ನಪ್ಪ ವಕೀಲರು, ಹಾಗೂ ಬಿಜೆಪಿ ಮುಖಂಡರಾದ ಗುಳಗಿ ವೀರೇಂದ್ರ ವೇದಿಕೆಯಲ್ಲಿ ಹಾಸೀನರಾಗಿದ್ದರು ಮತ್ತು ತಾಲೂಕು ಮಟ್ಟದ ಬಿಜೆಪಿ ಮುಖಂಡರುಗಳು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು

ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button