ಶಂಭುನಾಥಪೂರ ಗ್ರಾಮದ ದಲಿತ ಸಮುದಾಯದವರಿಗೆ ಶವ ಸಂಸ್ಕಾರಕ್ಕೆ ಭೂಮಿ ಮಂಜೂರುಗಾಗಿ ಆಗ್ರಹಿಸಿ ಕೆ. ಡಿ.ವಿ.ಜಿಲ್ಲಾ ಸಮಿತಿಯಿಂದ ಮನವಿ.
ಹುಬ್ಬಳ್ಳಿ ಜುಲೈ.25
ರಾಜ್ಯದ ಇನ್ನೂ ಕೂಡ ದಲಿತರಿಗೆ ಶವ-ಸಂಸ್ಕಾರಕ್ಕೆ ಸ್ಮಶಾನ ಭೂಮಿ ನೀಡಲು ಸಾಧ್ಯವಾಗಿಲ್ಲ ಸರ್ಕಾರ ದಲಿತರಿಗೆ ಶವ ಸಂಸ್ಕಾರಕ್ಕೆ ಭೂಮಿ ನೀಡಲು ಸಮೀಕ್ಷೆ ಮಾಡಿ ಮಜುರಾತಿ ನೀಡಲು 2012ರಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಇವರಿಗೆ ಆಯಾ ಜಿಲ್ಲೆಗಳಿಗೆ ದಲಿತರಿಗೆ ಸ್ಮಶಾನ ಭೂಮಿ ಇಲ್ಲದಿರುವ ಗ್ರಾಮದಲ್ಲಿ ಸಮೀಕ್ಷೆ ನಡೆಸಿ ದಲಿತರಿಗೆ ಭೂಮಿ ಮಂಜೂರಾತಿ ಸುತ್ತೋಲೆ ಹೊರಡಿಸಿತ್ತು.

ಆದರೆ ಯಾವ ಜಿಲ್ಲೆಯು ಸರಿಯಾಗಿ ಸಮೀಕ್ಷೆ ನಡಿಸಿಲ್ಲಾ ವರದಿ ಕೂಡ ಮಾಡಿಲ್ಲಾ ರಾಜ್ಯದ ಗ್ರಾಮೀಣ ಪ್ರದೇಶದ ಜನಾಂಗಕ್ಕೆ ಇನ್ನೂ ಕೂಡ ಶವ ಸಂಸ್ಕಾರಕ್ಕೆ ಸ್ಥಳ ಇಲ್ಲದಿರುವುದು ವಿಷಾಧಿನೀಯ ಸಂಗತಿ. ಈಗ ಸಧ್ಯ ವಾಸ್ತವ ಸ್ಥಿತಿಯಲ್ಲಿ ರಾಜ್ಯದ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಶಂಭೂನಾಥಪೂರ ಗ್ರಾಮದಲ್ಲಿ 25 ದಲಿತ ಕುಟುಂಬಗಳು 125 ಜನ ವಾಸವಿರುವ ಗ್ರಾಮದಲ್ಲಿ ದಲಿತ ಜನಾಂಗಕ್ಕೆ ಇಂದಿರಾಗಾಂಧಿ ಕಾಲದಲ್ಲಿ ನೀಡಿದ ವಸತಿ ದುಸ್ಥಿಯಲ್ಲಿದ್ದು ಅಲ್ಲಿಯೇ ಈ ಬಡ ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಇವರ ಜೀವನ ಆಧಾರಕ್ಕೆ ಜಾಮೀನು ಇಲ್ಲಾ ಸರಿಯಾಗಿ ವಾಸಿಸಲು ಮನೆ ಕೂಡ ಇಲ್ಲಾ ಗ್ರಾಮದಲ್ಲಿ ದಲಿತರು ಮೃತಪಟ್ಟರೆ ಶವ ಸಂಸ್ಕಾರ ನಡೆಸಲು ಸ್ಮಶಾನವಿಲ್ಲ ಹೀಗಾಗಿ ನೊಂದ ದಲಿತ ಕುಟುಂಬದ ಸಂಬಂಧಿಕರು ಶನಿವಾರ ದಿನಾಂಕ: 23-7-2023ರಂದು ಮನೆಯ ಮುಂದೆಯೇ ಮೃತಪಟ್ಟ ದಲಿತ ವ್ಯಕ್ತಿ ಶವ ಸಂಸ್ಕಾರ ಮಾಡಲು ಸ್ಮಶಾನ ಜಾಗವಿಲ್ಲದ ಮನೆ ಮುಂದೆಯೇ ಗುಂಡಿ ತೋಡಿ ಹೂಳಲು ಮುಂದಾದ ಮನ ಕಲಕುವ ಘಟನೆ ನಡೆದಿದೆ.
ಇಂಥಹ ಹೀನ ಸ್ಥಿತಿ ದಲಿತರಿಗೆ ಯಾವಾಗ ವಿಮೋಚನೆ ಸಿಗುತ್ತೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಂಬಂಧಿಸಿದ ಅಧಿಕಾರಿಗಳಿಗೆ ಅರಕಲಗೂಡು ತಾಲೂಕಿನ ಶಂಭುನಾಥಪೂರ ಗ್ರಾಮದ ದಲಿತ ಸಮುದಾಯಕ್ಕೆ ಸ್ಮಶಾನ ಭೂಮಿ.ಮೂಲಭೂತ ಮತ್ತು ನಾಗರಿಕ ಸೌಕರ್ಯ ಒದಗಿಸಲು ಆದೇಶಿಸಬೇಕೆಂದು ಧಾರವಾಡ ಜಿಲ್ಲೆಯ ಕರ್ನಾಟಕ ದಲಿತ ವಿಮೋಚನಾ ಸಮಿತಿಯಿಂದ ಒತ್ತಾಯದ ಆಗ್ರಹವಾಗಿದೆ