ನ. 7ರಂದು ಪಡಿತರ ವಿತರಕರ ವಿವಿಧ ಬೇಡಿಕೆ ಈಡೇರಿಕೆಗಾಗಿ – ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ.

ಹುನಗುಂದ ನವೆಂಬರ್.6

ಪಡಿತರ ವಿತರಕರ ಕಮೀಷನ್ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ ನ.೭ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಹುನಗುಂದ ತಾಲೂಕ ಘಟಕ ಪಾಲ್ಗೊಳಲಿದ್ದು.ಸಾಂಕೇತಿಕವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಶನಿವಾರ ಹುನಗುಂದ ತಹಶೀಲ್ದಾರ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿತು. ಈ ವೇಳೆ ಸಂಘದ ತಾಲೂಕ ಅಧ್ಯಕ್ಷ ಗಂಗಾಧರ ಗೌಡರ ಮಾತನಾಡಿ ವರ್ಷವಿಡಿ ಪಡಿತರ ಚೀಟಿ ಬಗ್ಗೆ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮತ್ತು ಭೇಟಿ ಮತ್ತು ತಿಂಗಳಿಗೆ ಪಡಿತರ ವಿತರಣೆ ಹೀಗೆ ವರ್ಷದುದ್ದಕ್ಕೂ ಪಡಿತರ ಕೆಲಸದಲ್ಲೆ ಕಾಲ ಹರಣವಾಗುತ್ತದೆ.ಸಧ್ಯ ಸರ್ಕಾರ ನೀಡುತ್ತಿರುವ ೫ಕೆ.ಜಿ ಪಡಿತರಕ್ಕೆ ಕಮೀಷನ್ ನೀಡುತ್ತಿದೆ.ಅಷ್ಟಕ್ಕೆ ವಿತರಕರ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಗಿದೆ.ಜೊತೆಗೆ ಸರ್ಕಾರ ಪಡಿತರಿಗೆ ೫ಕೆ.ಜಿ ಅಕ್ಕಿ ಬದಲು ಹಣ ನೀಡುತಿದ್ದು ಅದರ ಕಮೀಷನ್‌ನ್ನು ನೀಡಬೇಕೆಂದು ಒತ್ತಾಯಿಸಿದರು.ಮೊದಲು ನ್ಯಾಯ ಬೆಲೆ ಅಂಗಡಿಯವರು ಇಕೆವೈಸಿ ಮತ್ತು ಹೆಬ್ಬೆಟ್ಟಿನ ಗುರುತು ಪಡೆದ ಬಗ್ಗೆ ಸ್ವಂತ ಹಣ ಖರ್ಚು ಮಾಡಿ ಪಡಿತರ ಸೇವೆ ಮಾಡುತ್ತಿದ್ದು ಅದರ ಹಣವನ್ನು ಸರ್ಕಾರ ನಮಗೆ ನೀಡಬೇಕು ಎಂದರು.ಪಡಿತರ ವಿತರಕ ಶರಣಪ್ಪ ಬಾದವಾಡಗಿ ನ.೭ರಂದು ಬೆಂಗಳೂರಿನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರುಸುವಂತೆ ನಮ್ಮ ರಾಜ್ಯ ಸಂಘವು ನಡೆಸುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮುಗಿಯುವವರೆಗೆ ಪಾಲ್ಗೊಳ್ಳುವದರಿಂದ ನಾವು ಪಡಿತರ ಧಾನ್ಯಗಳನ್ನು ಎತ್ತುವಳಿ ಮಾಡುವುದಿಲ್ಲ ಅಂತಾ ತಾಲೂಕಾ ಮಟ್ಟದ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಶಿವಾನಂದ ಕುಂಬಾರ,ಕಳಕಪ್ಪ ಕುಳಗಿ,ಪರಸಪ್ಪ ಗಂಗೂರ,ರಾಜಶೇಖರ ಕರಂಡಿ,ರಾಘವೇಂದ್ರ ಗೊರೆಬಾಳ,ವಿಜಯಕುಮಾರ ಕನ್ನೂರ, ಪ್ರಕಾಶ ನಾಗನಗೌಡರ,ವಿಷ್ಣು ಗೌಡರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button