ಹಡಪದವರ ಮನೆಯಲ್ಲಿ 13 ನೇ ಮನೆ ಮನಗಳ ವಚನ ಸೌರಭ ಹಾಗೂ ಮಾಸಿಕ ಶರಣ ಚಿಂತನ ಕಾರ್ಯಕ್ರಮ ಜರಗಿತು.
ಹುನಗುಂದ ಜುಲೈ.27

ಹುನಗುಂದ 12ನೇ ಶತಮಾನದ ಶರಣರಲ್ಲಿ ನಿಜಸುಖಿ ಹಡಪದ ಅಪ್ಪಣ್ಣನವರು ಅನುಭವ ಮಂಟಪದಎಲ್ಲಾ ಶರಣರಿಗೂ ವಿಶ್ವಾಸವುಳ್ಳವರಾಗಿದ್ದರು.ಅಣ್ಣಬಸವಣ್ಣನವರು ಇವರ ವಿಶ್ವಾಸತೆಯನ್ನು ಕಂಡು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡರು ಎಂದುಚಿತ್ತರಗಿ ಸಂಸ್ಥಾನದ ಗುರು ಮಹಾಂತ ಸ್ವಾಮಿಗಳು ತಾಲೂಕಾ ಶರಣ ಸಾಹಿತ್ಯ ಪರಿಷತ್ತು,ಕದಳಿ ಮಹಿಳಾ ವೇದಿಕೆ, ತಾಲೂಕಾ ಕರ್ನಾಟಕ ವಚನ ಸಾಹಿತ್ಯ ಪರಿಷತ್ತುಹುನಗುಂದ ಘಟಕಗಳವತಿಯಿಂದ ದಂಪತಿಗಳಾದ ನೀಲಮ್ಮ ಅಮರೇಶ ಹಡಪದ ಇವರಮನೆಯಲ್ಲಿ 13ನೇ ಮನೆ ಮನಗಳಿಗೆ ವಚನ ಸೌರಭಹಾಗೂ ಮಾಸಿಕ ಶರಣ ಚಿಂತನ ಕಾರ್ಯಕ್ರಮದಸಾನಿಧ್ಯ ವಹಿಸಿ ಮ ನಿ ಪು ಗುರುಮಹಾಂತ ಪೂಜ್ಯರು ಮಾತನಾಡಿ ಹಡಪದ ಅಪ್ಪಣ್ಣ ಶರಣರು ಬಸವಣ್ಣನವರಂತೆ ವಚನಕಾರಾಗಿ 250 ಕ್ಕೂ ಹೆಚ್ಚು ಗಳನ್ನು ರಚಿಸಿದರೆ ಅವರ ಪತ್ನಿ ಲಿಂಗಮ್ಮಳೂ 114 ಕ್ಕೂ ಹೆಚ್ಚೂ ವಚನಗಳನ್ನು ರಚಸಿ ಆದರ್ಶ ಶರಣರೆಂದು ಕರೆಸಿಕೊಂಡರು ಎಂದು ಹೇಳಿದರು.

ನೀಲಮ್ಮ ಹಿರೇಮಠ ಮಾತನಾಡಿ ಶರಣ ಹಡಪದ ಅಪ್ಪಣ್ಣನವರುಬಸವನ ಬಾಗೇವಾಡಿಯಮಸಬಿನಾಳ ಗ್ರಾಮದಲ್ಲಿಜನಿಸಿ ಪ್ರಾಥಮಿಕ ಶಿಕ್ಷಣ ಪೂರೈಸಿ ಶರಣಿ ಲಿಂಗಮ್ಮನವರ ಜೊತೆಯಾಗಿ ಬಸವಕಲ್ಯಾಣದಲ್ಲಿ ಬಸವಣ್ಣನವರ ಅನುಯಾಯಿಗಳಾಗಿ,ಆಪ್ತ ಕಾರ್ಯದರ್ಶಿಯಾಗಿ,ತಮ್ಮ ಕ್ಷೌರಿಕ ವೃತ್ತಿಯನ್ನುಸತ್ಯಶುಧ್ಧಕಾಯಕ ಮಾಡಿಎಲ್ಲಾ ಶರಣರಿಗೂ ನಿಜ ಸುಖಿ ಶರಣರೆಂದು ಕರೆಸಿಕೊಂಡರು.ಎಂದು ಹೇಳಿದರು. ಸಭೆಯಅಧ್ಯಕ್ಷತೆಯನ್ನು ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನಅಧ್ಯಕ್ಷರಾದ ಪ್ರೊ. ಎಸ್.ಎನ್.ಹಾದಿಮನಿ ಮಾತನಾಡಿ ಶರಣ ಹಡಪದ ಅಪ್ಪಣ್ಣನವರು ಬಸವಣ್ಣನವರಿಂದ ಲಿಂಗದೀಕ್ಷೆ ಪಡೆದು ಶರಣರಾದ ಹಾಗೆ ಇಲ್ಲಿ ಸೇರಿದ ಎಲ್ಲಾ ಶರಣ ತಂದೆ ತಾಯಿಗಳು ಕೊರಳಲ್ಲಿ ಲಿಂಗು ಧರಿಸಿ ಬಸವಣ್ಣನವರ ಐದು ವಚನ ಪಠಿಸಿ ಪೂಜೆ ಮಾಡುವ ಮೂಲಕ ಭಗವಂತನನ್ನು ಕಾಣಬಹುದು ಎಂದು ಹೇಳಿದರು.

ಸಭೆಯಲ್ಲಿತಾಲೂಕಾ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನಅಧ್ಯಕ್ಷರಾದ ಪ್ರಭು ಮಾಲಗಿತ್ತಿಮಠ ಪ್ರಾಸ್ಥಾವಿಕವಾಗಿ ಮಾತನಾಡಿದರು. ಇದೇ ಸಂಧರ್ಭದಲ್ಲಿ ತಾಲೂಕಾ ಕದಳಿ ಮಹಿಳಾ ವೇದಿಕೆಯಅಧ್ಯಕ್ಷರಾದ ಡಾ. ಶಿವಗಂಗಾ ರಂಜಣಗಿ ಯವರಿಗೆ ಫ. ಗು. ಹಳಕಟ್ಟಿಯವರ ಹೆಸರಿನವಚನಗಾರ್ತಿ ಪ್ರಶಸ್ತಿ ಬಂದಸಂದರ್ಭದಲ್ಲಿ ಪೂಜ್ಯರುಸತ್ಕರಿಸಿದರು. ಭಕ್ತಿ ಸೇವೆಮಾಡಿದ ಶರಣ ಅಮರೇಶಹಡಪದ ದಂಪತಿ ಗಳನ್ನು ಪೂಜ್ಯರು ಸತ್ಕರಿಸಿದರು.ಸಭೆಯ ಪ್ರಾರಂಭದಲ್ಲಿಶ್ರೀಮತಿ. ಸಾವಿತ್ರಮ್ಮ ದಳವಾಯಿ ಪ್ರಾರ್ಥನೆ ಮಾಡಿದರು. ಪರಿಷತ್ತಿನಕಾರ್ಯದರ್ಶಿಯಾದ ಸಂಗಮೇಶ ಹೊದ್ಲೂರ ಸ್ವಾಗತಿಸಿದರು. ಶ್ರೀಮತಿ ಗೀತಾ ತಾರಿವಾಳ ಕಾರ್ಯಕ್ರಮ ನಿರೂಪಣೆ ಮಾಡಿ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ