ಮಾನವೀಯತೆ ಮತ್ತು ತುರ್ತು ಸೇವೆಗೈಯುವಲ್ಲಿ ಎತ್ತಿದ ಕೈ ಪ್ರಾಮಾಣಿಕ ಆಂಬ್ಯುಲೆನ್ಸ್ ಡ್ರೈವರ್ — ಸಂಗಮೇಶ ಬನ್ನೇಟ್ಟಿಗೆ ಪತ್ರಕರ್ತ ಸಂಘದಿಂದ ಗೌರವ ಸನ್ಮಾನ

ಹುನಗುಂದ ಜುಲೈ.30

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದು ಸಾವು ಬದುಕಿನ ಮಧ್ಯದಲ್ಲಿ ಹೋರಾಡುತ್ತಿರುವ ಅದೆಷ್ಟು ಜೀವಗಳನ್ನು ಸರಿಯಾದ ಸಮಯಕ್ಕೆ ಸುರಕ್ಷತವಾಗಿ ಆಸ್ಪತ್ರೆಗೆ ಸೇರಿಸಿ ಪ್ರಾಣವಾಯುದಂತೆ ಹಗಲಿರುಳು ಎನ್ನದೇ ಸತತ 23 ವರ್ಷಗಳಿಂದ ತುರ್ತು ಅಂಬ್ಯುಲೆನ್ಸ್ ಸೇವೆಯನ್ನು ನೀಡುತ್ತಾ ಅನೇಕ ವ್ಯಕ್ತಿಗಳ ಜೀವವನ್ನು ಉಳಿಸುವಲ್ಲಿ ಪ್ರಾಮಾಣಿಕ ಸೇವೆಯನ್ನು ಗೈದ ಅಂಬ್ಯುಲೆನ್ಸ್ ಡ್ರೈವರ್ ಸಂಗಮೇಶ ಬನ್ನೆಟ್ಟಿ ಸೇವೆ ಇಂದಿಗೂ ಎಲೆಮರೆ ಕಾಯಿಯಂತೆ.ಅಂತವರನ್ನು ಕಾರ್ಯನಿರತ ಪತ್ರಕರ್ತರ ಸಂಘ ಪತ್ರಕಾ ದಿನಾಚರಣೆ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

ಹೌದು ಇವರು ಮೂಲತಃ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ಸಂಗಮೇಶ ಬನ್ನೆಟ್ಟಿ 1999 ರಲ್ಲಿ ಹುನಗುಂದ ಸರ್ಕಾರಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಡ್ರೈವರ್ರಾಗಿ ಸೇವೆಗೆ ಸೇರಿ ಹುನಗುಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸತತ 23 ವರ್ಷಗಳಿಂದ ಅಂಬ್ಯುಲೇನ್ಸ್ ಸೇವೆಗೈದು ಸಧ್ಯ ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 23 ವರ್ಷಗಳಲ್ಲಿ ಸಾಕಷ್ಟು ಜನರ ಜೀವ ಹೋಗುವ ಸಂದರ್ಭದಲ್ಲಿ ಸಕಾಲಕ್ಕೆ ಅಂಬ್ಯುಲೇನ್ಸ್ ಸರ್ವಿಸ್ ಕೊಟ್ಟು ಜೀವವನ್ನು ಉಳಿಸುವ ಜತೆಗೆ ಮರಳಿ ಜೀವನವನ್ನು ಮಾಡಲು ಅನುವು ಮಾಡಿದ ವ್ಯಕ್ತಿ.ಆಸ್ಪತ್ರೆಗೆ ಬಂದ ರೋಗಿಗಳಿಗೆ ತುರ್ತು ಸೇವೆ ಅಗತ್ಯವಿದ್ದಾಗ ಹಗಲು ಇರಲಿ ಇಲ್ಲವೇ ಮಧ್ಯ ರಾತ್ರಿಯಾಗಿರಲಿ ಆ ವಿಷಯ ಕಿವಿಗೆ ಬಿದ್ದರೇ ಸಾಕು ಇಲ್ಲವೇ ಪೋನ್ ಕರೆ ಮಾಡಿದರೇ ತಾನು ನಿದ್ದೆಯಲ್ಲಿದ್ದರೂ ತಕ್ಷಣವೇ ಎದ್ದು ಅವರನ್ನು ಕರದುಕೊಂಡು ಹೋಗಿ ಆಸ್ಪತ್ರೆ ತಲುಪಿಸುವ ಪ್ರಾಮಾಣಿಕ ಕಾರ್ಯವನ್ನು ಮಾಡಿವುದರ ಜೊತೆಗೆ 2005 ರಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕ ಎಚ್.ವಾಯ್.ಮೇಟಿ ಅವರಿಗೆ ರಸ್ತೆ ಅಪಘಾತವಾದಾಗ ಅವರನ್ನು ಹುನಗುಂದದಿಂದ ಆಗಿನ ಸಿಂಗಲ್ ರಸ್ತೆಯಲ್ಲಿ 35 ನಿಮಿಷದಲ್ಲಿ ಬಾಗಲಕೋಟ ಕೆರೂಡಿ ಆಸ್ಪತ್ರೆಗೆ ಸೇರಿಸಿದ್ದು ಅವರು ಇಂದಿಗೂ ನೆನೆಪಿಸಿಕೊಳ್ಳುತ್ತಾರೆ ಅದರ ಜೊತೆಗೆ ತಾಲೂಕಿನ ಗಂಜಿಹಾಳ ಗ್ರಾಮದ ಓರ್ವ ಮಹಿಳೆ ರಕ್ತಹೀನತೆಯಿಂದ ಸಾವು ಬದುಕಿನ ಮಧ್ಯದಲ್ಲಿ ಹೋರಾಟ ಮಾಡುತ್ತಿದ್ದಾಗ ಅಂಬ್ಯುಲೆನ್ಸ್ ಸೇವೆಯ ಜೊತೆಗೆ ತನ್ನ ರಕ್ತವನ್ನು ನೀಡಿ ಮಹಿಳೆಯನ್ನು ಬದುಕಿಸದಂತ ಮಾನವೀಯ ಘಟನೆಗಳಿವೆ ಇಂತಹ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯ ಸೇವೆಗಿಂತಲೂ ರೋಗಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ಮತ್ತು ವೈದ್ಯರ ಬಳಿಗೆ ಕರೆದ್ಯೋಯುವ ಡ್ರೈವರ್ ಕಾರ್ಯವನ್ನು ನಾವು ಮೆಚ್ಚಿಕೊಳ್ಳಬೇಕು.ಇಂತಹ ಸಾಕಷ್ಟು ಜೀವವನ್ನು ಉಳಿಸುವಲ್ಲಿ ಪ್ರಾಮಾಣಿಕ ಸೇವೆಗೆ ಹುನಗುಂದ ಕಾರ್ಯನಿರತ ಪತ್ರಕರ್ತರ ಸಂಘ ಅವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ್ದು ನಿಜಕ್ಕೂ ಶ್ಲಾಘನೀಯ.ಬಾಕ್ಸ್ ಸುದ್ದಿ-ಹುನಗುಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ೨೩ ವರ್ಷಗಳ ಸೇವೆಯಲ್ಲಿ ಅನೇಕ ರೋಗಿಗಳ ಜೀವವನ್ನು ಉಳಿಸುವಲ್ಲಿ ಪ್ರಾಮಾಣಿಕ ಸೇವೆಗೈದ ನನಗೆ ಇಲ್ಲಿವರಗೆ ಒಂದು ಸನ್ಮಾನದ ಅವಕಾಶ ಸಿಕ್ಕಿರಲಿಲ್ಲ ಆದರೆ ಸಧ್ಯ ಪತ್ರಕರ್ತರ ಸಂಘ ನನ್ನ ಸೇವೆಯನ್ನು ಗುರುತಿ ಸನ್ಮಾನಿಸಿದ್ದು ನನಗೆ ಖಷಿ ತಂದಿದೆ.ಸಂಗಮೇಶ ಬನ್ನೆಟ್ಟಿ ಅಂಬ್ಯುಲೇನ್ಸ್ ಡ್ರೈವರ್ ಹುನಗುಂದ.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button