ಪತ್ರಿಕೆ ಓದುಗರು ಕಡಿಮೆಯಾದರೂ:ಮುದ್ರಣ ಮಾಧ್ಯಮ ತನ್ನ ಅಸ್ತಿತ್ವವನ್ನು ಕಳೆದುಕೊಂಡಿಲ್ಲ ಪತ್ರಿಕೆಗಳು ಸಮಾಜದಲ್ಲಿ ಕ್ರಾಂತಿ ಎಬ್ಬಿಸುವ ಮತ್ತು ಬದಲಾಯಿಸುವ ದಿಕ್ಸೂಚಿಯಾಗಿವೆ — ಸಿದ್ದಲಿಂಗಪ್ಪ ಬೀಳಗಿ.
ಹುನಗುಂದ ಜುಲೈ.31

ಪತ್ರಿಕೆಗಳು ಸಮಾಜದ ಪ್ರತಿಬಿಂಬ ಮತ್ತು ಕೈಗನ್ನಡಿಯಾಗಿವೆ.ಪತ್ರಿಕೆಯ ಸಣ್ಣದೊಂದು ಸುದ್ದಿ ಸಮಾಜದಲ್ಲಿ ಕ್ರಾಂತಿಯನ್ನು ಎಬ್ಬಿಸಬಹುದು ಮತ್ತು ಸಮಾಜದ ಚಿತ್ರಣವನ್ನು ಬದಲಾಯಿಸುವ ದಿಕ್ಸೂಚಿಯಾಗಬಹುದು ಹಾಗೂ ಸಮಾಜದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಬದಲಾವಣೆಗೆ ಕಾರಣವಾಗಲಿದೆ ಎಂದು ಸರ್ಕಾರಿ ಪಿಯು ಕಾಲೇಜ್ ಉಪನ್ಯಾಸಕ ಹಾಗೂ ಸಾಹಿತಿ ಸಿದ್ದಲಿಂಗಪ್ಪ ಬೀಳಗಿ ಹೇಳಿದರು.
ರವಿವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಮತ್ತು ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಹಾಗೂ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸವನ್ನು ನೀಡಿ ಮಾತನಾಡಿದ ಅವರು ಮೊದಲು ಧರ್ಮ ಪ್ರಚಾರಕ್ಕಾಗಿ ಆರಂಭವಾದ ಪತ್ರಿಕಾ ಮಾಧ್ಯಮ ಮುಂದೆ ಸುದ್ದಿ ಮಾಧ್ಯಮವಾಗಿ ಇಂದು ಸಮಾಜವನ್ನು ಎಚ್ಚರಿಸುವ ಕೈದೀವಿಗೆಗಳಾಗಿ ಪರಿವರ್ತನೆಯನ್ನು ಹೊಂದಿವೆ.ಇಂದಿನ ಆಧುನಿಕ ತಂತ್ರಜ್ಞಾನದ ಮಧ್ಯದಲ್ಲೂ ಮುದ್ರಣ ಮಾಧ್ಯಮ ತನ್ನ ಅಸ್ತಿತ್ವವನ್ನು ಕಳೆದುಕೊಂಡಿಲ್ಲ ಮುಂದೇನು ಕಳೆದುಕೊಳ್ಳುವುದಿಲ್ಲ.ಆದರೆ ಪತ್ರಕೆಗಳ ಓದುಗರು ಕಡಿಮೆಯಾಗಿದ್ದಾರೆ ಆದರೆ ಓದುವಿಕೆ ಕಡಿಮೆಯಾಗಿಲ್ಲ.ವರದಿಗಾರ ಸುಮ್ನೆ ಬರೆಯದೇ ಜ್ಞಾನ,ಇತಿಹಾಸ,ವಾಸ್ತವಿಕತೆ ಬಗ್ಗೆ ತಿಳಿದು ಬರೆಯುವ ಬದ್ದತೆಯನ್ನು ಕಲಿಯಬೇಕು ಎಂದರು.ತಾಲೂಕಾ ವೈದ್ಯಾಧಿಕಾರಿ ಡಾ.ಸಂಗಮೇಶ ಅಂಗಡಿ ಮಾತನಾಡಿ ಪತ್ರಿಕಾ ವಿತರಕರ ಕಷ್ಟ ಸಂಕಷ್ಟ ಹೇಳ ತೀರದು.ಮಳೆ,ಬಿಸಿಲು,ಚಳಿಯನ್ನು ಲೆಕ್ಕಿಸದೇ ಮನೆ ಮನೆಗಳಿಗೆ ಪತ್ರಿಕೆಗಳನ್ನು ಮುಟ್ಟಿಸುವ ಅವರ ಪವಿತ್ರ ಕಾಯಕ ಶ್ಲಾಘನೀಯವಾದುದು.ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಓದುವಷ್ಟು ಖಷಿ ಆನ್ಲೈನ್ ಪತ್ರಿಕೆಗಳ ಓದಿನಲ್ಲಿ ಸಿಗೋದಿಲ್ಲ. ಸ್ವಾಸ್ಥ್ಯ ಸಮಾಜಕ್ಕಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರು ಮತ್ತು ಪತ್ರಿಕಾ ವಿತರಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಪ್ರಾಚಾರ್ಯ ಪ್ರೋ.ನಾಗರಾಜ ಮುದಗಲ್ಲ ಮಾತನಾಡಿ ಪೆನ್ನು ಖಡ್ಗಕ್ಕಿಂತ ಅರಿತವಾದುದು.ಅದನ್ನು ಸಾಭೀತು ಮಾಡಲು ಪತ್ರಕರ್ತರು ತಮ್ಮ ಸುದ್ದಿಗಳನ್ನು ಸ್ಪಷ್ಟವಾಗಿ,ನಿಖರವಾಗಿ,ನಿಷ್ಪಕ್ಷಪಾತವಾಗಿ ಕಾರ್ಯ ಮಾಡಿದ್ದೇಯಾದರೇ ಖಂಡಿತ ಸಮಾಜದ ಕಣ್ತೆರಿಸಲು ಸಾಧ್ಯ ಎಂದರು.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಮಹಾಂತೇಶ ಪಾಟೀಲರಿಗೆ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹೂಗಾರ ಅಧಿಕಾರಿ ಹಸ್ತಾಂತರ ಮಾಡಿದರು.ಕಾನಿಪ ಹುನಗುಂದ ಘಟಕದಿಂದ ಬೆಳಗ್ಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು.ನಂತರ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆಗೈದ ತಾಲೂಕಾ ವೈದ್ಯಾಧಿಕಾರಿ ಡಾ.ಸಂಗಮೇಶ ಅಂಗಡಿ ಮತ್ತು ಹಗಲು ರಾತ್ರಿ ಎನ್ನದೇ ನಿತ್ಯ ಅಂಬ್ಯುಲೇನ್ಸ ಸೇವೆಗೈದ ಸಂಗಮೇಶ ಬನ್ನೆಟ್ಟಿ ಹಾಗೂ ವಿತರಕ ಅಶೋಕ ಹಂದ್ರಾಳ ಅವರಿಗೆ ಸಂಘದ ಪರ ಸನ್ಮಾನಿಸಿ ಗೌರವಿಸಲಾಯಿತು.ಹಾಗೂ ಪತ್ರಿಕಾ ವಿತರಕರಿಗೆ ನೋಟ ಬುಕ್ ಮತ್ತು ಪೆನ್ನು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಮಹಾಂತೇಶ ಪಾಟೀಲ,ಹಿರಿಯ ಪತ್ರಕರ್ತ ಜಬ್ಬಾರ ಕಲಬುರ್ಗಿ,ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಿಯಾಜ್ ಸರಕಾವಸ್,ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹೂಗಾರ,ಪತ್ರಕರ್ತರಾದ ಮಹಾಂತೇಶ ತೋಪಲಕಟ್ಟಿ,ಮುತ್ತಣ್ಣ ಬಳಿಗಾರ,ಶರಣಪ್ಪ ಹಳಪೇಟಿ,ಜಗದೀಶ ಹದ್ಲಿ,ಮಲ್ಲಿಕಾರ್ಜುನ ಬಂಡರಗಲ್ಲ,ದೇವು ಕುರಿ ಸೇರಿದಂತೆ ಅನೇಕರು ಇದ್ದರು.ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಸಮನಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು,ಉಪನ್ಯಾಸಕ ಶರಣಪ್ಪ ಹೂಲಗೇರಿ ನಿರೂಪಿಸಿದರು,ಬಸವರಾಜ ಕಮ್ಮಾರ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ