ವ್ಯಸನ ಮುಕ್ತ ದಿನಾಚರಣೆ… (ಪರಮಪೂಜ್ಯ ಮಹಾಂತ ಶ್ರೀಗಳ ಜನ್ಮದಿನಾಚರಣೆ)

ವ್ಯಸನ ಮುಕ್ತ ಸಮಾಜ ನಿರ್ಮಾಣದ ಪೂಜ್ಯರು

ನಾಡು ಕಂಡ ಶ್ರೇಷ್ಠ ಮಠಾಧೀಶರು

ಮಹಾಂತ ಜೋಳಿಗೆಯಲಿ ದುಶ್ಚಟಗಳ

ಹಾಕಿಸಿಕೊಂಡವರು

ಬಡ ನೆಮ್ಮದಿಯ ಕುಟುಂಬಕ್ಕೆ

ಆಶ್ರಯವಾದವರು..

ದುಶ್ಚಟಗಳ ಭಿಕ್ಷೆ ಬೇಡಿದ ಮಹಾತ್ಮರು

ಅಕ್ಷತೆಯ ಬದಲಿಗೆ ಹೂ ಅರ್ಪಿಸಿದವರು

ಮೂರ್ತಿಗಳ ಜಾಗಕ್ಕೆ ವಚನ ಪುಸ್ತಕಗಳ ಸ್ಥಾಪಿಸಿದವರು

ವಚನ ಪಠಣದ ಮೂಲಕ ಮದುವೆಗೆ ಪ್ರೋತ್ಸಾಹಿಸಿದವರು..

ರುದ್ರಾಭಿಷೇಕ ಒಪ್ಪದೇ ವಚನಾಭಿಷೇಕ ಒಪ್ಪಿದವರು

ಕಾರ್ತಿಕೋತ್ಸವದ ಎಣ್ಣೆ ಬಡವರ ಅಡುಗೆಗೆ ನೀಡಿದವರು

ಕಲ್ಲು ಹಾವಿಗೆ ಹಾಲು ನೆರೆಯದವರು

ಅದೇ ಹಾಲು ಮಕ್ಕಳಿಗೆ ಕುಡಿಸಿ ಸಂತಸ ಪಟ್ಟವರು..

ಮುಧೋಳ ತಾಲೂಕಿನ ಮಳಲಿ ಗ್ರಾಮದಲ್ಲಿ

ಜನನವು ಅಮೋಘವಾದ 48 ವರ್ಷಗಳ

ಸಮಾಜ ಸೇವೆಯು

ವಿರೂಪಾಕ್ಷಯ್ಯ ನೀಲಮ್ಮ ದಂಪತಿಗಳ ಮುದ್ದಿನ ಶಿಶುವು

ಹಿಪ್ಪರಗಿ,ಶಿವಯೋಗಮಂದಿರಮುಧೋಳದಲ್ಲಿ ಶಿಕ್ಷಣವು..

ಕನ್ನಡ ಹಿಂದಿ ಸಂಸ್ಕೃತ ಭಾಷೆಯ ಪಂಡಿತರು

ನಡೆದ ದಾರಿಉದ್ದಕ್ಕು ದೇವರಾದ

ಪರಮಾತ್ಮರು

ವಿಜಯ ಮಹಾಂತೇಶ ಮಠದ ಪರಮ

ಶ್ರೇಷ್ಠರು

ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್

ಪುರಸ್ಕೃತರು..

ಮುತ್ತು.ಯ.ವಡ್ಡರ (ಶಿಕ್ಷಕರು)

ಬಾಗಲಕೋಟ

Mob-9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button