ಯಾವುದೇ ಕ್ಷೇತ್ರದಲ್ಲಾಗಲಿ ಶಿಕ್ಷಣಕ್ಕೆ ಅತೀ ಹೆಚ್ಚು ಒತ್ತು ಕೊಡುವ ಮತ್ತು ಬಡ ರೈತರ ಮಕ್ಕಳ ವಿದ್ಯಾವಂತರಾಗಬೇಕು ಎಂದು ಎನ್.ವೈ.ಗೋಪಾಲಕೃಷ್ಣ ಶಾಸಕರ ಅಭಿಮತ ಆಗಿರುತ್ತದೆ.

ಎನ್.ಮಹದೇವಪುರ ಜುಲೈ.31

ಇಂದು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎನ್. ಮಹದೇವಪುರ ಚಳ್ಳಕೆರೆ ತಾಲೂಕು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್. ವೈ. ಗೋಪಾಲಕೃಷ್ಣರವರು ಭೇಟಿ ನೀಡಿ ವಿದ್ಯಾರ್ಥಿಗಳ ಮತ್ತು ವಿದ್ಯಾರ್ಥಿನಿಯರ ಜ್ಞಾನ ಮತ್ತು ಭವಿಷ್ಯದ ಬಗ್ಗೆ ಸಮಸ್ಯೆಗಳ ಬಗ್ಗೆ ಆಲಿಸಿ ಈ ಶಾಲೆಯಲ್ಲಿ ಓದುವಂತಹ ಮಕ್ಕಳಿಗೆ ಯಾವುದೇ ರೀತಿಯಾಗಿ ತೊಂದರೆ ಆಗದ ಹಾಗೆ ಆರೋಗ್ಯದ ಬಗ್ಗೆ ಸ್ವಚ್ಛತ ಬಗ್ಗೆ ಮತ್ತು ಆಹಾರದ ಬಗ್ಗೆ ಚೆನ್ನಾಗಿ ನೋಡಿಕೊಳ್ಳಬೇಕು ಬೇರೆ ಊರಿಂದ ಅವರ ತಂದೆ ತಾಯಿಗಳು ನಮ್ಮ ಮಗ ಮತ್ತು ಮಗಳು ಚೆನ್ನಾಗಿ ಓದಿ ವಿದ್ಯಾವಂತರಾಗಲಿ ಅಂತ ಕಳಿಸಿರುತ್ತಾರೆ ಬಡ ಮಕ್ಕಳ ಸರ್ಕಾರದ ಸೌಲಭ್ಯದಲ್ಲಿ ಓದಲು ಬಂದಿರುತ್ತಾರೆ ಆದರೆ ಇಲ್ಲಿ ಇರತಕ್ಕಂತ ಸಿಬ್ಬಂದಿಗಳಾಗಲಿ ಪ್ರಾಂಶುಪಾಲರಾಗಲಿ ವಾರ್ಡನ್ ಗಳಾಗಲಿ ಸರ್ಕಾರದಿಂದ ಬಂದಿರ್ತಕ್ಕಂತಹ ಅನುದಾನವನ್ನು ದುರುಪಯೋಗ ಮಾಡಬಾರದು ಅವ್ಯವಸ್ಥೆಯಾಗಿ ನೋಡಬಾರದು ಎಂದು ಚೆನ್ನಾಗಿ ನೋಡಿಕೊಳ್ಳಬೇಕು ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ತುರ್ತು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರುಪ್ರಾಂಶುಪಾಲರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button