*ಮತ್ತೆ ಶುರುವಾಗಿದೆ* _ಹೃದಯತ ಮಾತು_ ಎಂಬ ಆಲ್ಬಮ್ ಹಾಡು ಅಗಸ್ಟ್ 15ಕ್ಕೆ ಬಿಡುಗಡೆ.
ಬಾಗಲಕೋಟ ಆಗಷ್ಟ.1

ಪ್ರೀತಿ ಪ್ರೇಮದ ವಿರಹ ಪ್ರೀತಿ ಮಾಡಿದ ಹುಡುಗನಿಂದ ಪ್ರೀತಿ ದೂರವಾದ ಮೇಲೆ ಆ ಪ್ರೀತಿಯ ನೆನಪು ಮತ್ತೆ ಮತ್ತೆ ಕಾಡುವ ಹಾಗೆ ಅವಳ ಪ್ರೀತಿಯ ನೆನಪಿನಂಗಳದಲ್ಲಿ ಮರೆಯಾದ ಸುಂದರ ಪ್ರೇಮ ವಿರಹದ ಗೀತೆಯನ್ನು ಇತ್ತೀಚಿಗಷ್ಟೇ ಸಕಲೇಶಪುರ/ಹಾಸನ ಬೆಂಗಳೂರು/ಸುತ್ತಮುತ್ತ ಸುಂದರ ರಮಣೀಯ ಮನ ಮೋಹಕವಾದ ತಾಣಗಳಲ್ಲಿ ಚಿತ್ರೀಕರಿಸಲಾಯಿತು, ಈ ಹಾಡುಅಗಸ್ಟ್ 15ಕ್ಕೆ niharika creations you tube ಚಾನೆಲ್ ನಲ್ಲಿ ಬಿಡುಗಡೆ ಆಗಲಿದೆ,

ಈ ಗೀತೆಯನ್ನು ರಚಿಸಿ ಸಾಹಿತ್ಯ ಸಂಯೋಜನೆ ಮಾಡಿ ಹಾಡಿದವರು ಡಿ.ಕೆ. ಹಣಮಂತು ನಾರಾಯಣಪುರ (ಯಾದಗಿರಿ) ಮತ್ತೆ ಈ ಗೀತೆಯ ನೃತ್ಯವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದವರು. ಅಭಿಲಾಶ್ (ಹಾಸನ) ಮೋಹನ ರಾಜು (ಬೆಂಗಳೂರು)ಸಹಾಯಕ ನಾಗಿ ಇಂದ್ರ್ ಜಿತ್ ಪವಾರ್, (ಮಸ್ಕಿ) ಸಂಕಲನ,ಮೋಹನ್ (ಬೆಂಗಳೂರು)ಹಾಗೂ ಈ ಗೀತೆಗೆ ನೃತ್ಯ ಸಂಯೋಜನೆ ಪ್ರದೀಪ್ ನಂದಿ (ವಿಜಯಪುರ) ಅವರದು, ಈ ಆಲ್ಬಮ್ ಹಾಡಿನಲ್ಲಿ ನಾಯಕಿಯಾಗಿ ಲಕ್ಷಿತ ಪೂಜಾರಿ (ಮಂಗಳೂರು) ಇವರ ಜೊತೆಯಾಗಿ ಮೌನೇಶ್ ರಾಠೋಡ್ (ಮಸ್ಕಿ) ನಾಯಕನಾಗಿ ಹೆಜ್ಜೆ ಹಾಕಿದ್ದಾರೆ.