ಪ್ರೌಢ ಶಾಲೆ ಮತ್ತು ವಸತಿ ನಿಲಯದ ನಿರ್ಮಾಣಕ್ಕೆ ಜಾಗೆ ನೀಡಲು : ದಾನಿಗಳು ಮುಂದೆ ಬರುವಂತೆ –ಬಿ.ಇ.ಓ. ಸೂಚನೆ.
ಹುನಗುಂದ ಆಗಷ್ಟ.4

ಕ್ರೀಡೆಗಳು ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಸಹಾಯಕವಾಗಿವೆ.ಕ್ರೀಡೆಯಲ್ಲಿ ಮಕ್ಕಳು ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆಯನ್ನು ಬೆಳಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಕೊಂಕಲ್ ಹೇಳಿದರು.ತಾಲೂಕಿನ ಹಡಗಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೇತೃತ್ವದಲ್ಲಿ ರುದ್ರೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨೩-೨೪ನೆಯ ಸಾಲಿನ ಹಿರೇಮಾಗಿ ಮತ್ತು ಅಮೀನಗಡ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆ ಮಕ್ಕಳ ದೈಹಿಕ ಮತ್ತು ಮಾನಸಿಕ ಸದೃಢತೆಗೆ ದೃಢ ಸಂಕಲ್ಪ ಮಾಡುತ್ತದೆ.ಇಂದಿನ ಸೋಲು ನಾಳಿನ ಗೆಲುವಿಗೆ ಕಾರಣವಾಗುತ್ತದೆ ಅದಕ್ಕೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ.ಹಡಗಲಿ ಗ್ರಾಮದಲ್ಲಿ ೫ ಎಕರೆ ಜಮೀನ ನೀಡಿದರೇ ಖಂಡಿತ ಹೊಸದಾಗಿ ಪ್ರೌಢ ಶಾಲೆ ಮತ್ತು ವಸತಿ ನಿಲಯವನ್ನು ಆರಂಭಿಸಲು ಸಾಧ್ಯವಾಗಲಿದೆ ಎಂದರು.ಹಡಗಲಿ ನಿಡಗುಂದಿ ಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳು ಮಾತನಾಡಿ ಕ್ರೀಡೆ ಮಕ್ಕಳಲ್ಲಿ ನಾಯಕತ್ವ ಮತ್ತು ಶಿಸ್ತನ್ನು ಕಲಿಸಿಕೊಡುತ್ತದೆ.ಕ್ರೀಡೆಯಿಲ್ಲದವನ ಜೀವನ ಕೀಡೆ ತಿಂದ ಹಣ್ಣಿನಂತೆ ಎನ್ನುವ ಗಾದೆ ಮಾತಿದೆ ಅದರಂತೆ ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸಬೇಕೆಂದರು.ತಾ.ಪಂ ಮಾಜಿ ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸಿದ ಮಕ್ಕಳು ಕ್ರೀಡಾ ಮನೋಭಾವದಿಂದ ಆಡಬೇಕು.ಸೋಲು ಗೆಲುವು ಇದ್ದೀದೆ.ಕ್ರೀಡಾಕೂಟ ಮಕ್ಕಳಲ್ಲಿ ಅಡಗಿರುವ ಕ್ರೀಡಾ ಆಸಕ್ತಿಯನ್ನು ಹೊರ ತರಲು ಬಹುದೊಡ್ಡ ವೇದಿಕೆಯಾಗಿದೆ.ಜಮೀನ ಕೊಡುವ ದಾನಿಗಳು ಮುಂದೆ ಬಂದರೇ ಖಂಡಿತ ನಮ್ಮೂರಲ್ಲಿ ಪ್ರೌಢ ಶಾಲೆ ಮತ್ತು ವಸತಿ ನಿಲಯ ನಿರ್ಮಾಣ ಮಾಡಬಹುದು ಎಂದರು.ಈ ಸಂದರ್ಭದಲ್ಲಿ ದೈಹಿಕ ಪರಿವೀಕಕ್ಷ ಆಯ್.ಎಚ್.ನದಾಫ್,ಶಿಕ್ಷಣ ಸಂಯೋಜಕ ಎ.ಎಚ್.ಗೌಡರ,ಪಿಡಿಓ ಸೋಮಶೇಖರ ಎಚ್,ಜಿ.ಬಿಆರ್ಪಿ ಗಿರಿಯಪ್ಪ ಆಲೂರ,ಗ್ರಾ.ಪಂ ಸದಸ್ಯರಾದ ಬಸವರಾಜ ಬನ್ನೆಟ್ಟಿ,ಗಿರಿಯಪ್ಪ ಪೂಜಾರಿ,ಬೈಲಪ್ಪ ಚಲವಾದಿ,ಮುಖ್ಯೋಪಾಧ್ಯಯ ಎಚ್.ಎಸ್.ತುಗ್ಗಲಡೋಣಿ,ಸಿಆರ್ಸಿ.ಗಳಾದ ಮಹಾಂತೇಶ ಹುಲ್ಯಾಳ,ಶೋಕ ಎಮ್ಮಿ,ಶಿವನಗೌಡ ಪಾಟೀಲ,ರುದ್ರöಯ್ಯ ರುದ್ರಸ್ವಾಮಿಮಠ,ಹನಮಂತಪ್ಪ ಮಾಗಿ,ಬಸವಂತಪ್ಪ ಮೇರೆಕಾರ,ರುದ್ರಪ್ಪ ಮಾಗಿ,ನಿಂಗಪ್ಪ ಮಾಗಿ ಹಾಗೂ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ