ನ, 19 ರಂದು ಕಾ.ನಿ.ಪ ಧ್ವನಿ ಸಂಘ ದಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ.

ಕೊಟ್ಟೂರು ನ. 18

ಪಟ್ಟಣದ ಬಾಲಾಜಿ ಕನ್ವೆನ್ಷನ್ ಸೆಂಟರ್ ನಲ್ಲಿ ಕಾನಿಪ ಧ್ವನಿ ಸಂಘ ಕೊಟ್ಟೂರು ತಾಲೂಕಾ ಘಟಕ ದಿಂದ ನ 19 ರಂದು ಬೆಳಿಗ್ಗೆ 11 ಕ್ಕೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಜಿ.ಬಿ ವಿನಯ್ ಕುಮಾರ್ ಇನ್ನಾಸೈಟ್ ಸಂಸ್ಥಾಪಕರು ದಾವಣಗೆರೆ ಇವರಿಂದ ವಿದ್ಯಾರ್ಥಿ ಬಳಗಕ್ಕೆ ವಿಶೇಷ ಎಪಿಎಸ್, ಐಎಎಸ್, ಸ್ಪರ್ಧಾತ್ಮಕ ಹುದ್ದೆಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಕೊಟ್ಟೂರಿನ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಸದುಪಯೋಗ ಪಡೆದು ಕೊಳ್ಳಬೇಕೆಂದು ನಮ್ಮ ಸಂಘದ ಆಶಯ. ಕಾ.ನಿ.ಪ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಇವರು ಪ್ರಾಸ್ತಾವಿಕವಾಗಿ ಮಾತನಾಡುವವರಿದ್ದಾರೆ. ಹಿರಿಯ ಪತ್ರಕರ್ತರು ಪತ್ರಿಕೆ ಮಹತ್ವ ಮತ್ತು ಉದ್ದೇಶ, ಜನ ಸಾಮಾನ್ಯರು ಹಾಗೂ ಸರ್ಕಾರದ ಮಧ್ಯೆ ಬೆಸುಗೆಯಾಗಿ ಹೇಗೆ ಕೆಲಸ ನಿರ್ವಹಿಸಬೇಕು ಎಂಬ ವಿಷಯ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯಾತಿ ಗಣ್ಯರು ಕೊಟ್ಟೂರು ಸುತ್ತ ಮುತ್ತಲಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಯಶಸ್ವಿ ನೀಡ ಬೇಕೆಂದು ಕಾ.ನಿ.ಪ ಧ್ವನಿ ಸಂಘದ ಕೊಟ್ಟೂರು ತಾಲೂಕು ಘಟಕದ ಅಧ್ಯಕ್ಷರಾದ ಕನ್ನಾಕಟ್ಟಿ ಶಿವರಾಜ್ ಹಾಗೂ ಸರ್ವ ಸದಸ್ಯರು ಸ್ವಾಗತ ಕೋರಿ ಪತ್ರಿಕೆ ಪ್ರಕಟಣೆಗೆ ತಿಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button