“ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ” ಸ್ವಾಗತ ಮತ್ತು ಸಾಂಸ್ಕೃತಿಕ ಪತ್ಯೇತರ ಚಟುವಟಿಕೆಗಳು ಉದ್ಘಾಟನಾ ಸಮಾರಂಭ.
ಕೂಡ್ಲಿಗಿ ಆಗಷ್ಟ.9

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆ8 ರಂದು, “ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ” ಸ್ವಾಗತ ಮತ್ತು ಸಾಂಸ್ಕೃತಿಕ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಶಾಸಕರಾದ ಡಾ॥ಎನ್.ಟಿ. ಶ್ರೀನಿವಾಸ್ ರವರು, ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ನಾವು ಎಲ್ಲರೂ ವಿದ್ಯಾರ್ಥಿಗಳು. ಒಳ್ಳೆಯದನ್ನು ಕಲಿಯೋಣ, ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮುಖ್ಯ ಘಟ್ಟ. ಇದೊಂದು ಟೀನೇಜ್ ವಯಸ್ಸು. ವಿದ್ಯಾರ್ಥಿಗಳು ಮನಸ್ಸು – ದೇಹ ಕಾಪಾಡಿಕೊಂಡು ಸಾಧನೆ ಕಡೆ ಗಮನ ಕೊಡಬೇಕು.ನಮ್ಮ ತಂದೆಯವರಾದ ಎನ್. ಟಿ. ಬೊಮ್ಮಣ್ಣನವರಿಗೆ, ಒಂದು ಒಳ್ಳೆಯ ಕನಸು ಇತ್ತು. ಅವರು ಶಾಸಕರು ಆದ ವೇಳೆ ಕೂಡ್ಲಿಗಿಯನ್ನು, ಅಭಿವೃದ್ಧಿಪಡಿಸುವ ಹಿನ್ನಲೆಯಲ್ಲಿ. ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು,

ನಾನು ಈ ಕಾಲೇಜಿನ ಸಂಸ್ಥೆಯ ಅಧ್ಯಕ್ಷನಾಗಿರುವುದರಿಂದ ಅಭಿವೃದ್ಧಿ ಪಡಿಸಲು ಇನ್ನೂ ಅನುಕೂಲವಾಗಲಿದೆ. ವಿದ್ಯಾರ್ಥಿಗಳ ಏಳ್ಗೆಗಾಗಿ ಸ್ಪರ್ಧಾತ್ಮಕವಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರತಿಭಾವಂತರನ್ನು ಗುರುತಿಸಿಬೇಕು. ಆ ಮೂಲಕ ವಿದ್ಯಾರ್ಥಿಗಳು, ಭವಿಷ್ಯದಲ್ಲಿ ಪ್ರತಿಭಾವಂತರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು, ಕಾಲೇಜಿನ ಅಭಿವೃದ್ಧಿ ಸಂಸ್ಥೆಯ ಸದಸ್ಯರು , ವಿದ್ಯಾರ್ಥಿಗಳು , ಜನಪ್ರತಿನಿಧಿಗಳು, ಸ್ಥಳೀಯ ಗಣ್ಯ ಮಾನ್ಯರು, ಅಧಿಕಾರಿಗಳು, ಶಿಕ್ಷಣ ಇಲಾಖಾಧಿಕಾರಿಗಳು,ನೂರಾರು ವಿದ್ಯಾರ್ಥಿಗಳು, ಮಕ್ಕಳ ಪೋಷಕರು ಇನ್ನೂ ಮುಂತಾದವರು ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ