ಶಿಶುಪಾಲನಾ ಕೇಂದ್ರಗಳು ಗ್ರಾಮೀಣ ಜನರಿಗೆ ವರದಾನವಾಗಲಿದೆ — ಅಶೋಕ ತಿರಕಣ್ಣವರ.
ಬಾದಾಮಿ ಆಗಷ್ಟ.9

ಮಕ್ಕಳ ದೈಹಿಕ ಅರಿವಿನ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಯನ್ನು ಉತ್ತೇಜಿಸಲು ಗ್ರಾಮೀಣ ಪ್ರದೇಶಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗಿದ್ದು, ಗ್ರಾಮೀಣ ಜನರಿಗೆ ವರದಾನವಾಗಿವೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ತಿರಕಣ್ಣವರ ಹೇಳಿದರು. ತಾಲೂಕ ಪಂಚಾಯತ ಸಭಾಭವನ ಬಾದಾಮಿಯಲ್ಲಿ ನರೇಗಾ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ಶಿಶುಪಾಲನಾ ಕೇಂದ್ರದ ನಿರ್ವಹಣೆಗೆ ಮಹಿಳಾ ಆರೈಕೆದಾರರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನರೇಗಾ ಗ್ರಾಮೀಣಾಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಒಂದಲ್ಲ ಹೊಸ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಲೆ ಇದ್ದು ಶಿಶುಪಾಲನಾ ಕೇಂದ್ರ ಹೊಸ ಸೇಪ೯ಡೆಯಾಗಿದ್ದು, ಮಗುವಿನ ಬೆಳವಣಿಗೆಗೆ ಉತ್ತಮ ವಾತಾವರಣ ರೂಪಿಸಲಿದೆ ಎಂದರು. ಬಾದಾಮಿ ತಾ.ಪಂ. ಸಹಾಯಕ ನಿರ್ದೇಶಕರಾದ ಶ್ರೀ ಸಂತೋಷ ಮೊಕಾಶಿ ಮಾತನಾಡಿ 6 ತಿಂಗಳಿನಿಂದ-6 ವರ್ಷದೊಳಗಿನ ಮಗುವಿನ ಆರೈಕೆ ಮಾಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆರೈಕೆದಾರರರಿಗೆ ತರಬೇತಿ ನೀಡುತ್ತಿದ್ದು, ತರಬೇತಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಗುಳೇದಗುಡ್ಡ ತಾ.ಪಂ ಸಹಾಯಕ ನಿದೇ೯ಶಕರಾದ ರಾಮಚಂದ್ರ ಮೇತ್ರಿ ಮಾತನಾಡಿ ಮಗುವಿನ ಆರೈಕೆ, ಪಾಲನೆಯಲ್ಲಿ ಆರೈಕೆದಾರರ ಪಾತ್ರ ಮಹತ್ವದಾಗಿದ್ದು, ತರಬೇತಿಯನ್ನು ಚೆನ್ನಾಗಿ ಪಡೆದು ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಹುನಗುಂದ ತಾಲೂಕಿನ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳಾದ ಹಾಗೂ ಮಾಸ್ಟರ ಟ್ರೇನರ್ ವೆಂಕಪ್ಪ ಗಿರಿತಮ್ಮನವರ, ಬಸವರಾಜ ಕೊಪ್ಪದ ತಾಲೂಕ ಐಇಸಿ ಸಂಯೋಜಕ ಸಮೀರ ಉಮರ್ಜಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ರೇಣುಕಾ ಗೌಡರ, ರೇಣುಕಾ ಪೂಜಾರ ತಾ.ಪಂ. ಸಿಬ್ಬಂದಿಗಳಾದ ಯಮನಪ್ಪ ತಳವಾರ ,ಸುರೇಶ ಪೋತರಡ್ಡಿ , ವಿಜಯಕುಮಾರ ಚಿಂದಿ ಉಪಸ್ಥಿತರಿದ್ದರು.