ದಿನಗೂಲಿ ನೌಕರನ ಹೆಂಡ್ತಿ ಹೆಸರಲ್ಲಿ ಲೈಸನ್ಸ್ ಪಡೆದು ಪ್ಯಾಕೆಜ್ ವರ್ಕ್ ಟೆಂಡರ್ ಕೈಗೊಂಡ ಕಳಪೆ ಕಾಮಗಾರಿ ಕ್ರಮಕ್ಕೆ ಜೈ ಕನ್ನಡಿಗರ ಸೇನೆಯಿಂದ ಆಗ್ರಹ.

ಕೊಳ್ಳೂರು ಆಗಷ್ಟ. 10

ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ಕೊಳ್ಳೂರು ಗ್ರಾಮದಲ್ಲಿ ಪಂಚಾಯತ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಲಬುರಗಿ 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಲೆಕ್ಕ ಶಿರ್ಷಿಕೆ 5054-03-3370-75-059 ರಡಿಯಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಆಫಜಲಪೂರ ಮುಖ್ಯ ರಸ್ತೆಯಿಂದ ಕೊಳ್ಳೂರು ಗ್ರಾಮದವರೆಗೆ ಕಳಪೆ ಮಟ್ಟದ ಕಾಮಗಾರಿಯಾಗಿದ್ದು, ಇದನ್ನು ಅನುಷ್ಠಾನಗೊಳಿಸಿದ A.E.E. ವಿಜಯಕುಮಾರ ರಾಠೋಡ ಮತ್ತು J.E. ಯಾದ ಸಂಜಯ್‌ ಜೈನ್ ಹಾಗೂ ಗುತ್ತಿಗೆದಾರರಾದ ಚಂದ್ರಶೇಖರ ಗೋಪನೆ ಇವರಿಗೆ ರಸ್ತೆ ದುರಸ್ತಿ (ಪ್ಯಾಕೇಜ್‌ ವರ್ಕ್) ಟೆಂಡರ್ ಆಗಿರುತ್ತದೆ ಹಾಗೂ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರಾದ ಶ್ರೀ ಸಂಗಮೇಶ ಸರಡಗಿ ಇವರ ಪತ್ನಿಯ ಹೆಸರಿನ ಮೇಲೆ ತುಂಡುಗುತ್ತಿಗೆ ಪಡೆದುಕೊಂಡು ಕಾಮಗಾರಿ ಕೈಗೊಂಡಿರುವುದು ಕಾನೂನು ಬಾಹಿರವಾಗಿದೆ.

ಏಕೆಂದರೆ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರ ಕಾಯ್ದೆ ನಿಯಮಗಳ ಪ್ರಕಾರ ಕಾಯ್ದೆ ಸರ್ಕಾರದ ಸಂಬಳ ಪಡೆಯುತ್ತಿದ್ದು, ಆತನ ಪತ್ನಿಯ ಹೆಸರಿನ ಮೇಲೆ ಗುತ್ತಿಗೆದಾರರ ಲೈಸನ್ಸ್‌ ಪಡೆದಿರುವುದು ಕಾನೂನು ಪ್ರಕಾರ ಅಕ್ಷ್ಯಮ ಅಪರಾಧವಾಗಿದೆ. ಅಲ್ಲದೇ ಸಂಗಮೇಶ ಸರಡಗಿಯವರು ದಕ್ಷಿಣ ಮತ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಾದ ಪಟ್ಟಣ, ಶರಣಸಿರಸಗಿ, ಕೊಳ್ಳೂರು, ಹಡಗಿಲ್ ಹಾರುತಿ, ಕಣ್ಣಿ, ಮೇಳಕುಂದಿ, ಮಳ್ಳಿ, ಸಾವಳಗಿ (ಬಿ) ಈ ಎಲ್ಲಾ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಇವರೇ ಕೈಗೊಳ್ಳುತ್ತಿದ್ದಾರೆ.ಆದ್ದರಿಂದ ಇವರ ಆಸ್ತಿ-ಪಾಸ್ತಿ ತನಿಖೆ ಮಾಡಬೇಕು ಮತ್ತು ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರ ಸೇವೆಯಿಂದ ವಜಾಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ಜೈ ಕನ್ನಡಗರ ಸೇನೆ ತಾಲೂಕಾ ಸಮಿತಿ ಕಲಬುರಗಿ ವತಿಯಿಂದ ಆಗ್ರಹಿಸುತ್ತದೆ. ಒಂದು ವೇಳೆ ತಾವುಗಳು ಯಾವುದೇ ರೀತಿಯ ಸೂಕ್ತ ಕ್ರಮಕೈಗೊಳ್ಳದೇ ಹೋದರೆ ತಮ್ಮ ಕಛೇರಿಯ ಎದುರು ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button