ಯಾವುದೇ ಕೆಲಸ ಆಸಕ್ತಿ ವಹಿಸಿ ಮಾಡಬೇಕು. ಕಷ್ಟಪಟ್ಟು ಮಾಡಬಾರದು — ಇಷ್ಟ ಪಟ್ಟು ಕಲಿತರೆ ಇದರ ಪ್ರತಿಫಲ ಸಿಗುವುದು.

ಹಿರೇ ಹೆಡ್ಗಳ್ ಆಗಷ್ಟ.12

ಕೂಡ್ಲಿಗಿ ತಾಲೂಕಿನ ಹಿರೇ ಹೆಡ್ಗಳ್ ಗ್ರಾಮದಲ್ಲಿ ರಂದು ಸ್ನೇಹ ಸಂಸ್ಥೆಯು Thought Works India ಸಹಯೋಗದೊಂದಿಗೆ ಈ ಬಾರಿ ಹಿರೇ ಹೇಗ್ಡಾಳ್ ಗ್ರಾಮದಲ್ಲಿ ಉಚಿತವಾಗಿ ಆರು ತಿಂಗಳವರೆಗೆ ಹೊಲಿಗೆ ಮತ್ತು ಫ್ಯಾಶನ್ ಡಿಸೈನ್ ತರಬೇತಿ ಕೇಂದ್ರದ ಉದ್ಘಾಟನೆಯನ್ನು ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಸ್ನೇಹ ಸಂಸ್ಥೆಯ ನಿರ್ದೇಶಕರಾದ ಟಿ.ರಾಮಾಂಜನೇಯರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಾರ್ಯಕ್ರಮದ ಮುಖ್ಯ ಉದ್ದೇಶದ ಕುರಿತು ಶಾಲೆ ಬಿಟ್ಟ ದಮನಿತ ಮತ್ತು ದಲಿತ ಮಹಿಳೆಯರಿಗೆ ಆರು ತಿಂಗಳು ಉಚಿತ ತರಬೇತಿಯನ್ನು ಪಡೆದುಕೊಡು ಸ್ವಾವಲಂಬಿಯಾಗಿ ಜೀವನ ನಡೆಸಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಇಂದಿನ ದಿನದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದವರಿಗಿಂತ ವೃತ್ತಿ ತರಬೇತಿಯನ್ನು ಪಡೆದುಕೊಂಡವರಿಗೆ ಹೆಚ್ಚು ಅವಕಾಶಗಳು ಸಿಗುತ್ತವೆ. ಈ ರೀತಿಯಾಗಿ ಈಗಾಗಲೇ ನಮ್ಮ ಸ್ನೇಹ ಸಂಸ್ಥೆಯ ಕಡೆಯಿಂದ ಸರಿ ಸುಮಾರು 4000 ಹೆಣ್ಣು ಮಕ್ಕಳು ತರಬೇತಿಯನ್ನು ಪಡೆದುಕೊಂಡು 90% ರಷ್ಟು ಸ್ವಾವಲಂಬನೆಯ ಜೀವನವನ್ನು ನಡೆಸುತ್ತಿದ್ದಾರೆ, ಹಾಗಾಗಿ ನಿಮ್ಮ ಊರಿನಲ್ಲಿ ಇಂತಹ ಅವಕಾಶ ಬಂದಿರುವುದರ ಹಿಂದೆ ಬಹಳ ಜನರ ಪರಿಶ್ರಮ ಇದೆ,ಇದರ ಸದುಪಯೋಗವನ್ನು ನಿಮ್ಮ ಗ್ರಾಮದ ಹೆಣ್ಣು ಮಕ್ಕಳು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು. ಸ್ನೇಹ ಸಂಸ್ಥೆಯ ಸಹ ನಿರ್ದೇಶಕರಾದ ಕೆ.ಪಿ. ಜಯ ರವರು ಈ ಗ್ರಾಮದ ಹೆಣ್ಣು ಮಕ್ಕಳಿಗೆ ತಮ್ಮ ಜೀವನವನ್ನು ಕಟ್ಟಿಕೊಳ್ಳುವುದಕ್ಕೆ ಇಂತಹ ತರಬೇತಿಗಳನ್ನು ಮೊದಲು ಪಡೆದುಕೊಳ್ಳಬೇಕು ನಂತರ ತಮ್ಮ ಜೀವನದ ಮಾರ್ಗಗಳನ್ನು ರೂಪಿಸಿಕೊಳ್ಳಬಹುದು ಎಂದು ಉದ್ದೇಶಿಸಿ ಮಾತನಾಡಿದರು. ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಎಂ. ಮಂಗಳ ಗೌರಿ ಇವರು ಮಾತನಾಡುತ್ತಾ ನಮ್ಮ ಕೂಡ್ಲಿಗಿ ತಾಲೂಕಿನಾದ್ಯಂತ ಸ್ನೇಹ ಸಂಸ್ಥೆಯು ತುಂಬಾ ವರ್ಷಗಳಿಂದ ಸಾಮಾಜಿಕವಾಗಿ ವಿವಿಧ ರೀತಿಯ ಅನೇಕ ಕಾರ್ಯಕ್ರಮಗಳನ್ನು ಮಾಡಿ ಜನರಿಗೆ ಸೇವಾ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದ್ದಾರೆ, ಹಿಂದೆ ನಾನು ಶಿವಪುರ ಗ್ರಾಮ ಪಂಚಾಯಿತಿಯಲ್ಲಿದ್ದಾಗ ಅಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಮಾಡಿದ್ದರು.ಈಗ ನಮ್ಮ ಪಂಚಾಯಿತಿಯಲ್ಲಿ ಹೊಲಿಗೆ ತರಬೇತಿ ಕೇಂದ್ರ ಬಂದಿರುವುದರಿಂದ ಉಪಯೋಗವನ್ನು ಪ್ರತಿಯೊಬ್ಬ ಮಕ್ಕಳು ಆಸಕ್ತಿಯಿಂದ ತರಬೇತಿಯನ್ನು ಪಡೆದುಕೊಂಡು ಸ್ವಾವಲಂಬಿಗಳಾಗಬೇಕೆಂದು ತಿಳಿಸಿದರು.

ಹಿರೇ ಹೆಡ್ನಾಳ್ ಪ್ರೌಢಶಾಲೆಯ ಮುಖ್ಯ ಗುರುಗಳಾದ ರಂಗಪ್ಪ ಅವರು ತಮ್ಮ ಜೀವನದ ಅನುಭವದ ಮಾತುಗಳನ್ನು ಹಂಚಿಕೊಳ್ಳುತ್ತಾ ಯಾವುದೇ ಕೆಲಸವನ್ನಾದರೂ ಇಷ್ಟಪಟ್ಟು ಮಾಡಬೇಕು ಕಷ್ಟಪಟ್ಟು ಮಾಡಬಾರದು,ಇಷ್ಟ ಪಟ್ಟು ಕಲಿತರೆ ಇದರ ಪ್ರತಿಫಲ ಸಿಗುವುದು ಅದಕ್ಕೆ ಉದಾಹರಣೆಯಾಗಿ ನನ್ನ ಸ್ನೇಹಿತ ಇದೇ ವೃತ್ತಿಯಲ್ಲಿ ಒಂದು ಜೊತೆ ಅಂಗಿ ಪ್ಯಾಂಟಿಗೆ ರೂ.800-1000ರಂತೆ ದಿನಕ್ಕೆ 5-6 ಜೊತೆ ಹೊಲಿಯುತ್ತಾರೆ ಎಂದು ತಿಳಿಸಿದರು. ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ನಾಗರಾಜ್ ಸರ್ ಅವರು ಮಾತನಾಡುತ್ತಾ ಹೊಲಿಗೆ ತರಬೇತಿ ಕೇಂದ್ರ ನಮ್ಮ ಗ್ರಾಮಕ್ಕೆ ಬಂದಿರುವುದು ತುಂಬಾ ಖುಷಿ ತರುವ ವಿಷಯವಾಗಿದೆ,ಈ ದಿನದಲ್ಲಿ ವೃತ್ತಿ ತರಬೇತಿಗೆ ತುಂಬಾ ಹೆಚ್ಚಿನ ಬೇಡಿಕೆ ಇದ್ದು ಇದರಲ್ಲಿ ಸರ್ಕಾರಿ ಸಂಬಳಕ್ಕಿಂತ ಹೆಚ್ಚಿನದಾಗಿ ಸಂಪಾದನೆಯನ್ನು ಮಾಡಬಹುದು ಹೀಗಾಗಿ ಬಂದಂತಹ ಹೆಣ್ಣು ಮಕ್ಕಳಿಗೆ ನೀವೆಲ್ಲರೂ ತಪ್ಪದೇ ಈ ತರಬೇತಿಯನ್ನು ಪಡೆದುಕೊಂಡು ಉತ್ತಮ ಜೀವನ ಪಡೆದುಕೊಳ್ಳಿ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಪಂಪಣ್ಣ, ಉಪಾಧ್ಯಕ್ಷರಾದ ಶ್ರೀನಿವಾಸ್ ಹಾಗೂ ಸದಸ್ಯರಾದ ಬಸವರಾಜ, ಸೋಮಶೇಖರ್, ರುದ್ರಪ್ಪ ಹಾಗೂ ಮಾಜಿ ಅಧ್ಯಕ್ಷರಾದ ಪಕೀರಪ್ಪ, ಶಿಕ್ಷಣ ಪ್ರೇಮಿಯಾದ ಅಕ್ಷಯ್ ಗುತ್ತಿಗೆದಾರ ಸ್ನೇಹ ಸಂಸ್ಥೆಯ ಸಿಬ್ಬಂದಿಗಳಾದ RG.ಮಹಾದೇವಿ,K. ಮಂಜುಳಾ, HM.ಶೈಲಜಾ ಹಾಗೂH. ಗೀತಾ ರವರು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ:- ಸಾವಿತ್ರಿ ಸ್ವಾಗತ:- ಪ್ರಿಯಾಂಕ ನಿರೂಪಣೆ :-H. ಗೀತಾ ಮಾಡಿದರೂ.

ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button