ಶಿಥಿಲಾವಸ್ಥೆಯಲ್ಲಿರುವ ನಾದ ಕೆಡಿ ಪ್ರಾಥಮಿಕ ಶಾಲೆಯ ಕೋಣೆಗಳು — ಆತಂಕದಲ್ಲಿ ವಿದ್ಯಾರ್ಥಿಗಳು.
ನಾದ-ಕೆ. ಡಿ. ಆಗಷ್ಟ.12

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು ಗ್ರಾಮದಲ್ಲಿ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಸುತ್ತ-ಮುತ್ತಲಿನ ಕೆಲವು ಗ್ರಾಮಗಳ ವಿದ್ಯಾರ್ಥಿಗಳು ಸಹ ಈ ಶಾಲೆಯಲ್ಲಿ ಶಿಕ್ಷಣ ಪಡೆಯಲಿಕ್ಕೆ ಬರುತ್ತಿರುವ ಉದಾಹರಣೆಗಳಿವೆ .ಆದರೆ ಈ ಶಾಲೆಯು 1911ರಲ್ಲಿ ಸ್ಥಾಪನೆಯಾಗಿದ್ದು ಇಲ್ಲಿಯವರೆಗೆ 112 ವಷ೯ಗಳ ಕಾಲ ಶಿಕ್ಷಣದ ಮಟ್ಟ ಕುಂದಿರುವುದಿಲ್ಲ.ಶಿಕ್ಷಣದ ಮಟ್ಟ, ವಿದ್ಯಾರ್ಥಿಗಳ ಸಂಖ್ಯೆ,ಶಿಕ್ಷಕರ ಸಂಖ್ಯೆ ವಿದ್ಯಾರ್ಥಿಗಳ ಅನುಗುಣವಾಗಿ ಹೆಚ್ಚಾಗುತ್ತಲೇ ಸಾಗುತ್ತಿದೆ,ಇದಕ್ಕೆಲ್ಲ ಮೂಲ ಕಾರಣ ಈ ಗ್ರಾಮದ ಉತ್ತಮ ಶಿಕ್ಷಣ ಪ್ರೇಮಿಗಳ ಪ್ರೋತ್ಸಾಹ.ಆದರೆ 2023ರ ಪ್ರಸಕ್ತ ಸಾಲಿನಲ್ಲಿ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಕಲಿಯಲು 07 ಕೋಣೆಗಳಿದ್ದು ಅವುಗಳಲ್ಲಿ 03 ಕೋಣೆಗಳು ಅವುಗಳ (ಸ್ಲ್ಯಾಪ್) ಮೇಲ್ಛಾವಣಿಗಳು ಉದುರಿಹೊಗುತ್ತಿವೆ,ಕೋಣೆಯೊಳಗೆ ಕುಳಿತು ಕಲಿಯುತ್ತಿರುವ ವಿದ್ಯಾರ್ಥಿಗಳು , ಶಿಕ್ಷಕರು ತಮ್ಮ ಜೀವದ ಭಯದಲ್ಲಿ ಕಲಿಯುವಂತೆ,ಕಲಿಸುವಂತಾಗುತ್ತಿದೆ.

ಈ ವಿಷಯ ಕುರಿತು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿಕೊಂಡು ಸದರಿ ಸಮಸ್ಯೆ ಕುರಿತು ಸಂಬಂಧಿಸಿದ ಗ್ರಾಮಪಂಚಾಯತ್,ತಾಲೂಕಾಪಂಚಾಯತ್, ಜಿಲ್ಲಾಪಂಚಾಯತ್,ಹಾಗೂ ಶಾಸಕರ ಗಮನಕ್ಕೆ ತಂದಿರುತ್ತಾರೆ.ಆದರೆ ಸಮಸ್ಯೆ ಮಾತ್ರ ಪರಿಹಾರವಾಗಿರುವುದಿಲ್ಲ,ಮಳೆಗಾಲದ ಈ ಅವಧಿಯಲ್ಲಂತೂ ಸಮಸ್ಯೆ ಹೇಳತೀರದು,ನೀರಿನ ಹಾಸಿಗೆಯ ಮಡಿಲಿನಲ್ಲಿ ಶಿಕ್ಷಣ ಕಲಿಯುವಂತಾಗುತ್ತಿದೆ ಎಂದು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಅಳಲಾಗಿದೆ. ಮುಂದೆ ಆಗಬಹುದಾದ ಅನೇಕ ಸಮಸ್ಯೆಗಳನ್ನು ಸಂಬಂಧಿಸಿದ ಮೇಲಾಧಿಕಾರಿಗಳು ಶಾಲೆಗೆ ಬಂದು ಕೋಣೆಗಳನ್ನು ಪರಿಶೀಲಿಸಿ ಅಪಾಯ ಸಂಭವಿಸುವ ಸಮಸ್ಯೆಗಳನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು.ಸಮಸ್ಯಯಾಗುವ ಕೋಣೆಗಳನ್ನು ಆದಷ್ಟು ಬೇಗನೆ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ.ಈ ಸಮಸ್ಯೆ ಕುರಿತು ಮಾಧ್ಯಮದವರು ಸಂಬಂಧಿಸಿದ ಅಧಿಕಾರಿಗಳಿಗೆ ಫೋನ್ ಮುಖಾಂತರ ವಿಚಾರಿಸಿದಾಗ -ಮೊದಲು ಗ್ರಾಮಪಂಚಾಯತ ಪಿ.ಡಿ.ಓ ಸುರೇಶ ಲೋಣಿಯವರು ಮಾತನಾಡಿ ಶಾಲಾ ಕೆಲವು ಅವ್ಯವಸ್ಥೆ ಕೋಣೆಯ ಮೇಲ್ಛಾವಣಿಗಳು (ಸ್ಲ್ಯಾಪ್) ಶಿಥಿಲವಾಗಿದ್ದು ನನ್ನ ಗಮನಕ್ಕೆ ಬಂದಿದೆ ಅಗಸ್ಟ್ 15 ರೈ ನಂತರ ಸದಸ್ಯರ ಸಭೆ ಕರೆದು,ಗ್ರಾಮ ಪಂಚಾಯತ ವ್ಯಾಪ್ತಿಗೆ ಸಂಬಂಧಿಸಿದ ಎಲ್ಲಾ ಶಾಲೆಗಳ ಸಮಸ್ಯೆ ಬಗ್ಗೆ ಚಚೆ೯ ಮಾಡಿ, ಸಮಸ್ಯೆ ಸರಿಪಡಿಸುವ ವ್ಯವಸ್ಥೆ ಮಾಡಲಾಗುವುದೆಂದು ಹೇಳಿದರು.
ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪ್ರಭುಗೌಡ ಭಿ ಪಾಟೀಲ ಇವರು -ಶಾಲಾ ಕೋಣೆಗಳು ಶಿಥಿಲಾವಸ್ಥೆಗೊಂಡ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ,ತಾಲೂಕಾ ಪಂಚಾಯತ್, ಜಿಲ್ಲಾಪಂಚಾಯತ್ ಇತರೆ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೆ ಹಲವಾರು ಬಾರಿ ಮೌಖಿಕ, ಹಾಗೂ ಲಿಖಿತವಾಗಿ ತಿಳಿಸದದ್ದೇವೆ,ಸದರಿ ಅಧಿಕಾರಿಗಳು ವಿನಾಃ ಕಾರಣ ನಿಲ೯ಕ್ಷಿಸುತ್ತಿರುವುದು ನಮಗೆ ಸರಿ ಅನಿಸುತ್ತಿಲ್ಲ.ಇದೇ ರೀತಿ ವಿಳಂಬ ಮಾಡಿದರೆ ಸಂಬಂಧಿಸಿದ ಇಲಾಖೆಗಳ ಮುಂದೆ ನ್ಯಾಯಸಿಗುವವರೆಗೂ ಸದಸ್ಯರು, ಗ್ರಾಮಸ್ಥರು ಸೇರಿ ಪ್ರತಿಭಟನೆಯ ದಾರಿ ಹಿಡಿಯುವುದು ಅನಿವಾರ್ಯ ಎಂದು ಹೇಳಿದರು.ಎಸ್.ಡಿ.ಎಮ್.ಸಿ ಸದಸ್ಯರಾದ ಶಿವಾನಂದ ಮವಿನಹಳ್ಳಿ ಪ್ರಗತಿಪರ ಚಿಂತಕರು ಮಾತನಾಡಿ-ಜಗತ್ತಿನಲ್ಲಿ ಯಾವುದೇ ದೇಶ ಪ್ರಗತಿ ಸಾಧಿಸಿದೆ ಅಂದರೆ ಮೊದಲು ಅಲ್ಲಿಯ ಶಿಕ್ಷಣದ ಪದ್ಧತಿ ಸುಧಾರಣೆಯಾಗಿದೆ ಎಂದಥ೯.ಅದೇ ರೀತಿ ನಮ್ಮ ದೇಶದಲ್ಲಿಯೂ ಮುಂದುವರೆಯಲಿ,ಗುಡಿ-ಗುಂಡಾರಗಳಿಗೆ ಖಚು೯ಮಾಡುವುದುಕ್ಕಿಂತ ಮೊದಲು ಶಿಕ್ಶಣಕ್ಕೆ ಖಚು೯ಮಾಡಿದರೆ ಅದು ದೇಶದ ಜೀವಂತ ಪ್ರಗತಿ.ಶಿಕ್ಷಣಕ್ಕೆ ನನ್ನದೊಂದು ಪ್ರಥಮ ಆದ್ಯತೆ.ಎಂದು ನಮ್ಮ ಮಾಧ್ಯಮದವರಿಗೆ ಹೇಳಿದರು.ಏನೆಯಾಗಲಿ ಮೊದಲು ನಾದ ಶಾಲೆಯ ಕೋಣೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಸ್ಯೆ ಯಾವಾಗ ಸರಿಪಡಿಸುವತ್ತಾರೆ ಎಂದು ಕಾದು ನೋಡಬೇಕಾಗಿದೆ.
ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ