ಪೊಲೀಸರನ್ನು ನೋಡುತ್ತಿದ್ದಂತೆ ಟ್ರ್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿ.

ಕೊಟ್ಟೂರು ಆಗಷ್ಟ.12

ಈ ದಿನ ದಿನಾಂಕ: 12/08/2023 ರಂದು ಬೆಳಿಗ್ಗೆ 8-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 12/08/2023 ರಂದು ಬೆಳಿಗ್ಗೆ 6-45 ಗಂಟೆಗೆ ಚಿನ್ನೇನಹಳ್ಳಿ ರಸ್ತೆಯ ಕಡೆಯಿಂದ ತೂಲಹಳ್ಳಿ ರಸ್ತೆಯ ಕಡೆಗೆ ಒಂದು ಬಣ್ಣದ ಮಹೇಂದ್ರ ಕಂಪನಿಯ ಟ್ರಾಕ್ಟರ್ ಇಂಜಿನ್ ನಂಬರ್.ZMF4SAF6393 ಮತ್ತು ಚಸ್ಸಿ ನಂಬರ್,MBNTFAVBEMZF00541 ಅಂತ ಇರುವ ಹಾಗು ಕೆಂಪು ಬಣ್ಣದ ನೊಂದಣಿ ಸಂಖ್ಯೆ ಇಲ್ಲದ ಟ್ರಾಲಿಯಲ್ಲಿ ಕಳ್ಳತನದಿಂದ ಪಿರ್ಯಾದಿದಾರರು ಪಂಚರು ಮರಳು ತುಂಬಿಕೊಂಡು ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದಾಗ ಆರೋಪಿತನು ఓಡಿ ಹೋಗಿ ಪರಾರಿಯಾಗಿದ್ದು,

ಪಿರ್ಯಾದಿದಾರರು ಟ್ರಾಕ್ಟರ್ ಟ್ರಾಲಿಯಲ್ಲಿ ತುಂಬಿದ್ದ ಒಟ್ಟು 2000 ರೂ ಬೆಲೆ ಬಾಳುವ 1.5 ಕ್ಯೂಬಿಕ್ ಮೀಟರ್ ಮರಳನ್ನು ಹಾಗೂ 3,00,000/ ರೂ ಬೆಲೆ ಬಾಳುವ 1 ಟ್ರ್ಯಾಕ್ಟರ್ ಹಾಗೂ 50000 ರೂ ಬೆಲೆ ಬಾಳುವ ಟ್ರಾಲಿಯನ್ನು ಜಪ್ತಿಪಡಿಸಿಕೊಂಡು ಬಂದಿದ್ದಾಗಿ, ಯಾವುದೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಸಾಗಾಟದಲ್ಲಿ ತೊಡಗಿದ್ದ ಟ್ರ್ಯಾಕ್ಟರ್ ಮತ್ತು ಟ್ರಾಲಿಯ ಚಾಲಕ ಮತ್ತು ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಸಾರಾಂಶದ ಮೇರೆಗೆ ಈ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.ಎಂದು ಕೊಟ್ಟೂರು ಪಿಎಸ್ಐ ಗೀತಾಂಜಲಿ ಶಿಂಧೆ ಹೇಳಿದ್ದಾರೆ.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button