ಭೀಮಾ ತೀರದಲ್ಲಿ ಕೊಲೆ. ದುಷ್ಕರ್ಮಿಗಳು ಪರಾರಿ.
ಇಂಡಿ ಆಗಷ್ಟ.13

ಭೀಮಾತೀರದಲ್ಲಿ ವೃದ್ಧನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದಿರುವ ಘಟನೆಯೊಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕೀನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ.ಮಲ್ಲೇಶಿ.ಮಡವಾಳಪ್ಪ.ಕಾರಕಲ್ 75 ವಷ೯ದ ವೃದ್ಧ ಕೊಲೆಯಾಗಿರುವ ದುಧೈ೯ವಿ.ಇನ್ನೂ ಆ ವೃದ್ಧನನ್ನು ಹತ್ಯೆಗೈದು ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದಾರೆ.ವೃದ್ಧನು ತನ್ನ ತೋಟದಲ್ಲಿದ್ದಾಗ ಯಾರೋ ದುಷ್ಕರ್ಮಿಗಳು ವೃದ್ಧನಿಗೆ ಚಾಕುವಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾರೆ .ಕೊಲೆಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ.ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ