ನಿಧನ ವಾರ್ತೆ: ಕಿತ್ತನೂರು ಬೆಂಕಿ ಹನುಮಂತಪ್ಪ ನಿಧನ – ಕಿತ್ತನೂರು.
ಕಿತ್ತನೂರು ಆಗಷ್ಟ.18

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಲ್ಲಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಕಿತ್ತನೂರು ಗ್ರಾಮದ ಡಾಕ್ಟರ್ ಬಿಆರ್ ಅಂಬೇಡ್ಕರ್ ಕಾಲೋನಿಯ ನಿವಾಸಿಯಾದ ಬೆಂಕಿ ಹನುಮಂತಪ್ಪ ರವರು (60) ವರ್ಷ ಇವರು ಈ ದಿನ ಮುಂಜಾನೆ 6 .ಗಂಟೆಯ ಸಮಯಲ್ಲಿ ಹಗರಿಬೊಮ್ಮನಹಳ್ಳಿ ಆಸ್ಪತ್ರೆ ಯಲ್ಲಿ ಸುಮಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದೂ ಚಿಕಿತ್ಸೆ ಪಲಕರಿಯಾಗದೆ ನಿಧನ ಹೊಂದಿರುತ್ತಾರೆ. ಇವರಿಗೆ 2 ಹೆಣ್ಣು3 ಜನ ಗಂಡು ಮಕ್ಕಳಿದ್ದು ಇವರ ಹಿರಿಯ ಮಗನಾದ ಮಲ್ಲಪ್ಪ ಇವರು ರೈತ ಕಾರ್ಮಿಕ ಇವರ ತಂದೆ ಮಾಜಿ ಮಂಡಲ ಪಂಚಯಿತಿ ಸದಸ್ಯರು ಬೆಂಕಿ ಹನುಮಂತಪ್ಪ ನಿಧನ ಹೊಂದಿದ್ದು ಇವರನ್ನು ಸಮುದಾಯದ ಹಿರಿಯರು ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. *ಅಂತ್ಯಕ್ರಿಯೆ:-* ಮೃತರಾದ ಬೆಂಕಿ ಹನುಮಂತಪ್ಪ ಇವರ ಅಂತ್ಯಕ್ರಿಯೆ ಇಂದು ಆಗಸ್ಟ್ 18 ಶುಕ್ರವಾರ ರಂದು ಸಾಯಂಕಾಲ 4: ಗಂಟೆಗೆ, ಗ್ರಾಮದ ತುಂಗಭದ್ರಾ ನದಿ ಅಂಚಿನಲ್ಲಿರುವ ಶಾಂತಿ ವನದಲ್ಲಿ ಜರುಗಲಿದೆ. *ಸಂತಾಪ:-* ಗ್ರಾಮ ಸೇರಿದಂತೆ ತಾಲೂಕಿನ ಸಮಸ್ತ ಸಮಾಜದವರು, ಹಾಗೂ ವಿವಿಧ ಸಮಾಜದವರು ಮುಖಂಡರಗಳು ಹಾಗೂ ಐನಾರ್ ವಂಶದವರು ಸೇರಿದಂತೆ ವಿವಿಧ ಜನ ಪ್ರತಿನಿಧಿಗಳು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತರು, ಕಾರ್ಮಿಕರು, ವಿವಿಧ ಪಕ್ಷಗಳ ಮುಖಂಡರು, ನಾಗರಿಕರು ಹಾಗೂ ಗಣ್ಯರು, ನಿಧನರಾದ ಬೆಂಕಿ ಹನುಮಂತಪ್ಪ ರವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ