ಕರಡಿಗಳು ಬೆಳೆ ದಾಳಿಗೆ ನಲುಗಿದ ನಷ್ಟಕ್ಕೊಳಗಾದ ರೈತರಿಗೆ ಪರಹಾರ ನೀಡುವಂತೆ ರೈತ ಮುಖಂಡರ ಆಗ್ರಹ.

ಅಮಲಾಪುರ ಆಗಷ್ಟ.23

ಕೂಡ್ಲಿಗಿ ತಾಲೂಕಿನ ಖಾನಾಹೊಸಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಅಮಲಾಪುರ ಗ್ರಾಮದಲ್ಲಿ ರೈತರ ಹೊಲಗಳಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿ ಇದ್ದ ಮೆಕ್ಕೆಜೋಳದ ಬೆಳೆಯನ್ನು ಭಾನುವಾರ ಮಧ್ಯರಾತ್ರಿ ಕರಡಿಗಳು ದಾಳಿ ಮಾಡಿ ಸಂಪೂರ್ಣ ನಾಶ ಮಾಡಿವೆ. ಅಮಲಾಪುರ ಗ್ರಾಮದ ಸಣ್ಣ ಅಜ್ಜರು ಪರಮೇಶ್ವರಮ್ಮ ಎಂಬುವವರು 2 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಹಾಕಿದ್ದರು, ಬೆಳೆಯ ಕಾಳು ಕಟ್ಟುವ ಹಂತದಲ್ಲಿ ಇದ್ದ ಬೆಳೆಯನ್ನು ಕರಡಿಗಳ ದಾಳಿಯಿಂದ ಬೆಳೆದಂತ ಫಲವು ಸಂಪೂರ್ಣವಾಗಿ ನಾಶವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು ಈ ಭಾಗದ ರೈತರು ಕೃಷಿಯನ್ನೇ ಜೀವನೋಪಾಯವಾಗಿ ಮಾಡಿಕೊಂಡಿದ್ದು ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿ, ಜೋಳ,ಜೊತೆಗೆ ತೋಟಗಾರಿಕೆ ಬೆಳೆಗಳಾದ ಬಾಳೆ, ಟೊಮೋಟೊ, ಬದನೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಆದರೆ ಈ ಬೆಳೆಗಳು ಉತ್ತಮವಾಗಿ ಬೆಳೆದ ಫಲ ಇನ್ನೇನು ರೈತರ ಕೈ ಸೇರುವ ನಿರೀಕ್ಷೆಯಲ್ಲಿ ಇರುವಾಗಲೆ! ರೈತರ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿ ಮಾಡುವ ಕರಡಿಗಳ ರಾತ್ರೋರಾತ್ರಿ ರೈತರ ಜಮೀನಿಗೆ ನುಗ್ಗಿ ದಾಂಧಲೆ ಮಾಡಿ ಬೆಳೆಗಳನ್ನು ತಿಂದು ತುಳಿದು ನಾಶ ಮಾಡುತ್ತಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದ್ದು, ಈ ಬೆಳೆಯನ್ನೇ ನಂಬಿ ರೈತರು ಬೆಳೆ ನಾಶವಾಗಿರುದನ್ನು ಕಂಡು ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಆದ್ದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸರ್ಕಾರವು ಇದಕ್ಕೆ ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡು ಪ್ರಾಣಿಗಳಿಂದ ರೈತರ ಬೆಳೆ ರಕ್ಷಣೆ ಮಾಡಬೇಕು‌, ಈ ಕೂಡಲೇ ಪರಿಹಾರದ ಸಹಾಯ ಧನವನ್ನು ನೀಡಬೇಕೆಂದು ರೈತ ಮಹಿಳೆ ಸಣ್ಣ ಅಜ್ಜರು ಪರಮೇಶ್ವರಮ್ಮ ಸೇರಿದಂತೆ ಸುತ್ತ ಮುತ್ತಲಿನ ರೈತರು ರೈತ ಸಂಘಟನೆ ಮುಖಂಡರು ಆಗ್ರಹಿಸಿದರು.

ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button