ಬದುಕು ಬದಲಾಗಲಿ

ನಮ್ಮ ಮಾತಿಗೆ ಉತ್ತರ ನೀಡಲು
ಬೇಜವಾಬ್ದಾರಿ ಮಾಡಿಕೊಂಡವರೇ,ನಮ್ಮನ್ನು
ಎತ್ತರ ಮಟ್ಟದಲ್ಲಿ ನೋಡುವಂತಾಗಬೇಕು.
ಇವನ್ಯಾರು ನನಗೆ ಗೊತ್ತಿಲ್ಲ ಎಂದವರೇ,ಇವರು
ನಮ್ಮವನು ಎನ್ನಬೇಕು.
ಕೂಲಿ ಕೂಲಿ ಎಂದು ಮಾತನಾಡಿಸುವವರಿಗೆ
ನಾವು ಮಾಲೀಕನಾಗಬೇಕು.
ನಮ್ಮನ್ನು ಕೇರ್ ಲೆಸ್ ಮಾಡುವ ಜನರ
ಮುಂದೆ ಹೈ ಕ್ಲಾಸ್ ನಲ್ಲಿ ಬದುಕಬೇಕು.
ಮನೆ ಬಿಟ್ಟು ಹೊರ ಹಾಕಿದವರೇ ನಮ್ಮ ಮನೆ
ಬಾಗಿಲಿಗೆ ಸಹಾಯಕ್ಕಾಗಿ ಬರಬೇಕು.
ನಮ್ಮನ್ನು ಕಡೆಗಣಿಸಿದವರೇ ಕಣ್ಣೆತ್ತಿ ನಮ್ಮ
ಸಾಧನೆ ನೋಡಬೇಕು.
ತಿರಸ್ಕರಿಸಿದವರೇ ಪುರಸ್ಕರಿಸುವಂತಹ ಬದುಕು
ನಮ್ಮದಾಗಬೇಕು.
ಹೊರ ನೂಕಿದವರೇ ಹಾರ ಹಾಕಿ
ಸನ್ಮಾನಿಸುವಂತಹಾಗಬೇಕು.
ನನ್ನ ಮುಂದೆ ಇವನು ಏನೂ ಅಲ್ಲ
ಎಂದವರೇ,ಇವನೇ ಎಲ್ಲಾ ಎನ್ನುವ ಮಟ್ಟಕ್ಕೆ
ಬೆಳೆಯಬೇಕು.ಚಿಟಿಕೆ ಹೊಡೆದು ಮಾತನಾಡಿಸುವವರೇ
ಚಪ್ಪಾಳೆ ಹೊಡೆದು
ಅಭಿನಂದಿಸುವಂತಾಗಬೇಕು.
ಮುತ್ತು.ಯ.ವಡ್ಡರ(ಶಿಕ್ಷಕರು )
ಬಾಗಲಕೋಟ
Mob-9845568484