ಶ್ರೀರಾಮನ ಆದರ್ಶಮಯ ಜೀವನ ನಮಗೆ ಪ್ರೇರಣಾದಾಯಕ – ಶ್ರೀಮತಿ ಯಶೋಧಾ.ಪ್ರಕಾಶ್ ಅನಿಸಿಕೆ.
ಚಳ್ಳಕೆರೆ ಏ.05

ಶ್ರೀರಾಮನು ನಡೆಸಿದ ಆದರ್ಶಮಯ ಜೀವನ ನಮಗೆ ಪ್ರೇರಣಾ ದಾಯಕವಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯ ಪಟ್ಟರು. ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ “ಶ್ರೀರಾಮನವಮಿ” ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಶ್ರೀರಾಮನ ಗುಣ ವಿಶೇಷಗಳ ಬಗ್ಗೆ ಮಾತನಾಡಿದರು. ಶ್ರೀರಾಮನ ಹದಿನಾರು ವಿಶೇಷ ಗುಣಗಳು ಅವನ ವ್ಯಕ್ತಿತ್ವದ ಆದರ್ಶವನ್ನು ಎತ್ತಿ ತೋರಿಸುತ್ತವೆ.

ಇಂದಿನ ಸಮಾಜದಲ್ಲಿ ಶ್ರೀರಾಮನ “ರಾಮರಾಜ್ಯ” ನಿರ್ಮಾಣ ವಾಗಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ, ಭಜನೆ ಮತ್ತು ‘ಶ್ರೀಶಾರದಾದೇವಿ ಜೀವನಗಂಗಾ’ ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು. ಈ ಸತ್ಸಂಗ ಸಭೆಯಲ್ಲಿ ಸದ್ಭಕ್ತರಾದ ಶ್ರೀಮತಿ ನಾಗರತ್ನಮ್ಮ, ರಶ್ಮಿ ರಮೇಶ್, ಯತೀಶ್ ಎಂ ಸಿದ್ದಾಪುರ, ಜ್ಯೋತಿಕ, ರಶ್ಮಿ ವಸಂತ, ಸೌಮ್ಯ, ಭ್ರಮರಂಭಾ, ಜಯಮ್ಮ, ಶೈಲಜ, ಕೃಷ್ಣವೇಣಿ, ಉಪಸ್ಥಿತರಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.